<p><strong>ಮೋಸದಾಟ: ಐವರು ಆಟಗಾರರಿಗೆ ನಿಷೇಧ</strong></p>.<p>ನವದೆಹಲಿ, ನ. 3– ಮೋಸದಾಟಕ್ಕೆ ಸಂಬಂಧಿಸಿದಂತೆ ಸಿಬಿಐ ನಡೆಸಿದ ತನಿಖಾ ವರದಿಯಲ್ಲಿ ಹೆಸರಿಸ ಲಾಗಿರುವ ಐವರು ಕ್ರಿಕೆಟಿಗರು ಅಂತರರಾಷ್ಟ್ರೀಯ ಮತ್ತು ದೇಶದೊಳಗಿನ ಕ್ರಿಕೆಟ್ನಲ್ಲಿ ಆಡುವುದನ್ನು ನಿರ್ಬಂಧಿಸಿ, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ತಾತ್ಕಾಲಿಕವಾಗಿ ಅಮಾನತು ಶಿಕ್ಷೆ ವಿಧಿಸಿದೆ.</p>.<p>ಭಾರತ ತಂಡದ ಮಾಜಿ ನಾಯಕ ಮಹಮದ್ ಅಜರುದ್ದೀನ್, ಅಜಯ್ ಜಡೇಜ, ನಯನ್ ಮೋಂಗಿಯ, ಅಜಯ್ ಶರ್ಮ ಮತ್ತು ಮನೋಜ್ ಪ್ರಭಾಕರ್ ಈ ಶಿಕ್ಷೆಗೆ ಒಳಗಾಗಿರುವ ಆಟಗಾರರಾಗಿದ್ದಾರೆ. ಇವರಲ್ಲಿ ಮನೋಜ್ ಪ್ರಭಾಕರ್ ಈಗಾಗಲೇ ಮೊದಲ ದರ್ಜೆ ಕ್ರಿಕೆಟ್ನಿಂದ ನಿವೃತ್ತ ರಾಗಿದ್ದಾರೆ.</p>.<p><strong>ಬೆಂಕಿ ಹಚ್ಚಿಕೊಂಡು ಒಂದೇ ಕುಟುಂಬದ ಮೂವರ ಸಾವು</strong></p>.<p>ಕೋಲಾರ, ನ. 3– ನಗರದ ಹೃದಯ ಭಾಗದಲ್ಲಿರುವ ಕುರುಬರ ಪೇಟೆ ಮುಖ್ಯರಸ್ತೆಯಲ್ಲಿನ ಮಹಡಿ ಮನೆಯೊಂದರಲ್ಲಿ ಇಂದು ಮಧ್ಯಾಹ್ನ ಗಂಡ, ಹೆಂಡತಿ ಮತ್ತು ಮಗಳು, ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಮೃತಪಟ್ಟಿರುವ ಘಟನೆ ನಡೆದಿದೆ.</p>.<p>ಇಲ್ಲಿನ ಪಿಎಲ್ಡಿ ಬ್ಯಾಂಕ್ನಲ್ಲಿ ಟೈಪಿಸ್ಟ್ ಆಗಿರುವ ಪ್ರಕಾಶ್ (50), ಅವರ ಪತ್ನಿ ಪದ್ಮಾ (38) ಮತ್ತು ಮಗಳು ಸಂಧ್ಯಾರಾಣಿ (12) ಮೃತ ದುರ್ದೈವಿಗಳು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೋಸದಾಟ: ಐವರು ಆಟಗಾರರಿಗೆ ನಿಷೇಧ</strong></p>.<p>ನವದೆಹಲಿ, ನ. 3– ಮೋಸದಾಟಕ್ಕೆ ಸಂಬಂಧಿಸಿದಂತೆ ಸಿಬಿಐ ನಡೆಸಿದ ತನಿಖಾ ವರದಿಯಲ್ಲಿ ಹೆಸರಿಸ ಲಾಗಿರುವ ಐವರು ಕ್ರಿಕೆಟಿಗರು ಅಂತರರಾಷ್ಟ್ರೀಯ ಮತ್ತು ದೇಶದೊಳಗಿನ ಕ್ರಿಕೆಟ್ನಲ್ಲಿ ಆಡುವುದನ್ನು ನಿರ್ಬಂಧಿಸಿ, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ತಾತ್ಕಾಲಿಕವಾಗಿ ಅಮಾನತು ಶಿಕ್ಷೆ ವಿಧಿಸಿದೆ.</p>.<p>ಭಾರತ ತಂಡದ ಮಾಜಿ ನಾಯಕ ಮಹಮದ್ ಅಜರುದ್ದೀನ್, ಅಜಯ್ ಜಡೇಜ, ನಯನ್ ಮೋಂಗಿಯ, ಅಜಯ್ ಶರ್ಮ ಮತ್ತು ಮನೋಜ್ ಪ್ರಭಾಕರ್ ಈ ಶಿಕ್ಷೆಗೆ ಒಳಗಾಗಿರುವ ಆಟಗಾರರಾಗಿದ್ದಾರೆ. ಇವರಲ್ಲಿ ಮನೋಜ್ ಪ್ರಭಾಕರ್ ಈಗಾಗಲೇ ಮೊದಲ ದರ್ಜೆ ಕ್ರಿಕೆಟ್ನಿಂದ ನಿವೃತ್ತ ರಾಗಿದ್ದಾರೆ.</p>.<p><strong>ಬೆಂಕಿ ಹಚ್ಚಿಕೊಂಡು ಒಂದೇ ಕುಟುಂಬದ ಮೂವರ ಸಾವು</strong></p>.<p>ಕೋಲಾರ, ನ. 3– ನಗರದ ಹೃದಯ ಭಾಗದಲ್ಲಿರುವ ಕುರುಬರ ಪೇಟೆ ಮುಖ್ಯರಸ್ತೆಯಲ್ಲಿನ ಮಹಡಿ ಮನೆಯೊಂದರಲ್ಲಿ ಇಂದು ಮಧ್ಯಾಹ್ನ ಗಂಡ, ಹೆಂಡತಿ ಮತ್ತು ಮಗಳು, ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಮೃತಪಟ್ಟಿರುವ ಘಟನೆ ನಡೆದಿದೆ.</p>.<p>ಇಲ್ಲಿನ ಪಿಎಲ್ಡಿ ಬ್ಯಾಂಕ್ನಲ್ಲಿ ಟೈಪಿಸ್ಟ್ ಆಗಿರುವ ಪ್ರಕಾಶ್ (50), ಅವರ ಪತ್ನಿ ಪದ್ಮಾ (38) ಮತ್ತು ಮಗಳು ಸಂಧ್ಯಾರಾಣಿ (12) ಮೃತ ದುರ್ದೈವಿಗಳು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>