<p><strong>ಮತ್ತಷ್ಟು ತೆರಿಗೆ: ಪ್ರಧಾನಿ ಇಂಗಿತ</strong></p>.<p><strong>ನವದೆಹಲಿ, ಫೆ. 2 (ಪಿಟಿಐ):</strong> ಭೂಕಂಪದಿಂದಾಗಿ ಗುಜರಾತಿನಲ್ಲಿ ಆಗಿರುವ ಅಪಾರ ಹಾನಿಯನ್ನು ತುಂಬಿಕೊಳ್ಳುವ ನಿಟ್ಟಿನಲ್ಲಿ ಇನ್ನಷ್ಟು ತೆರಿಗೆಗಳನ್ನು ವಿಧಿಸುವ ಇಂಗಿತವನ್ನು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಇಂದು ಇಲ್ಲಿ ನೀಡಿದರು.</p>.<p>ವೈಯಕ್ತಿಕ ಮತ್ತು ಕಾರ್ಪೊರೇಟ್ ಆದಾಯದ ಮೇಲೆ ಶೇಕಡಾ 2ರಷ್ಟು ಸರ್ಚಾರ್ಜ್ ವಿಧಿಸಲು ಕೇಂದ್ರ ಸಚಿವ ಸಂಪುಟ ನಿನ್ನೆಯಷ್ಟೆ ನಿರ್ಧರಿಸಿತ್ತು. ಆದರೆ, ಇಂದು ಪತ್ರಕರ್ತರೊಂದಿಗೆ ಮಾತನಾಡಿದ ಪ್ರಧಾನಿ, ‘ಭೂಕಂಪದ ವ್ಯಾಪಕ ಹಾನಿಯನ್ನು ದೃಷ್ಟಿಯಲ್ಲಿಟ್ಟುಕೊಂಡರೆ ಶೇ 2ರಷ್ಟು ಸರ್ಚಾರ್ಜ್ ಏನೇನೂ ಸಾಲದು’ ಎಂದರು.</p>.<p><strong>ವಾಜಪೇಯಿ ಜತೆ ಮಾತಾಡಿದ ಪಾಕಿಸ್ತಾನದ ಮುಷರ್ರಫ್</strong></p>.<p><strong>ನವದೆಹಲಿ, ಫೆ. 2 (ಪಿಟಿಐ):</strong> ಹದಿನಾರು ತಿಂಗಳುಗಳ ಹಿಂದೆ ಅಧಿಕಾರ ಸ್ವೀಕರಿಸಿದ ನಂತರ ಪಾಕಿಸ್ತಾನ ಮಿಲಿಟರಿ ಆಡಳಿತಗಾರ ಜನರಲ್ ಪರ್ವೇಜ್ ಮುಷರ್ರಫ್ ಅವರು ಇಂದು ಮೊದಲ ಬಾರಿಗೆ ಭಾರತದ ಪ್ರಧಾನಿ ವಾಜಪೇಯಿ ಅವರ ಜತೆ 5 ನಿಮಿಷ ದೂರವಾಣಿಯಲ್ಲಿ ಮಾತುಕತೆ ನಡೆಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮತ್ತಷ್ಟು ತೆರಿಗೆ: ಪ್ರಧಾನಿ ಇಂಗಿತ</strong></p>.<p><strong>ನವದೆಹಲಿ, ಫೆ. 2 (ಪಿಟಿಐ):</strong> ಭೂಕಂಪದಿಂದಾಗಿ ಗುಜರಾತಿನಲ್ಲಿ ಆಗಿರುವ ಅಪಾರ ಹಾನಿಯನ್ನು ತುಂಬಿಕೊಳ್ಳುವ ನಿಟ್ಟಿನಲ್ಲಿ ಇನ್ನಷ್ಟು ತೆರಿಗೆಗಳನ್ನು ವಿಧಿಸುವ ಇಂಗಿತವನ್ನು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಇಂದು ಇಲ್ಲಿ ನೀಡಿದರು.</p>.<p>ವೈಯಕ್ತಿಕ ಮತ್ತು ಕಾರ್ಪೊರೇಟ್ ಆದಾಯದ ಮೇಲೆ ಶೇಕಡಾ 2ರಷ್ಟು ಸರ್ಚಾರ್ಜ್ ವಿಧಿಸಲು ಕೇಂದ್ರ ಸಚಿವ ಸಂಪುಟ ನಿನ್ನೆಯಷ್ಟೆ ನಿರ್ಧರಿಸಿತ್ತು. ಆದರೆ, ಇಂದು ಪತ್ರಕರ್ತರೊಂದಿಗೆ ಮಾತನಾಡಿದ ಪ್ರಧಾನಿ, ‘ಭೂಕಂಪದ ವ್ಯಾಪಕ ಹಾನಿಯನ್ನು ದೃಷ್ಟಿಯಲ್ಲಿಟ್ಟುಕೊಂಡರೆ ಶೇ 2ರಷ್ಟು ಸರ್ಚಾರ್ಜ್ ಏನೇನೂ ಸಾಲದು’ ಎಂದರು.</p>.<p><strong>ವಾಜಪೇಯಿ ಜತೆ ಮಾತಾಡಿದ ಪಾಕಿಸ್ತಾನದ ಮುಷರ್ರಫ್</strong></p>.<p><strong>ನವದೆಹಲಿ, ಫೆ. 2 (ಪಿಟಿಐ):</strong> ಹದಿನಾರು ತಿಂಗಳುಗಳ ಹಿಂದೆ ಅಧಿಕಾರ ಸ್ವೀಕರಿಸಿದ ನಂತರ ಪಾಕಿಸ್ತಾನ ಮಿಲಿಟರಿ ಆಡಳಿತಗಾರ ಜನರಲ್ ಪರ್ವೇಜ್ ಮುಷರ್ರಫ್ ಅವರು ಇಂದು ಮೊದಲ ಬಾರಿಗೆ ಭಾರತದ ಪ್ರಧಾನಿ ವಾಜಪೇಯಿ ಅವರ ಜತೆ 5 ನಿಮಿಷ ದೂರವಾಣಿಯಲ್ಲಿ ಮಾತುಕತೆ ನಡೆಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>