<p><strong>ಮಹಿಳಾ ಮಸೂದೆ ಮಂಡನೆ ಮತ್ತೆ ಅನಿರ್ದಿಷ್ಟ ಮುಂದಕ್ಕೆ</strong></p><p>ನವದೆಹಲಿ, ಜುಲೈ 14– ಮಹಿಳಾ ಮೀಸಲಾತಿ ಮಸೂದೆಯ ಬಗೆಗೆ ಲೋಕಸಭೆಯಲ್ಲಿ ಇಂದು ಸಹ ವ್ಯಕ್ತವಾದ ಪರ ಮತ್ತು ತೀವ್ರ ವಿರೋಧದಿಂದಾಗಿ ಮಸೂದೆಯ ಪುನರ್<br>ವಿಮರ್ಶೆಯನ್ನು ಮತ್ತೆ ಅನಿರ್ದಿಷ್ಟ ಕಾಲದವರೆಗೆ ಮುಂದೂಡಲಾಯಿತು.</p><p>ಈ ಮಸೂದೆಯ ಬಗೆಗೆ ಎಲ್ಲ ಪಕ್ಷಗಳ ನಾಯಕರು ಮತ್ತೆ ಚರ್ಚಿಸಿ ಒಮ್ಮತಕ್ಕೆ ಬರಬೇಕೆಂದು ಮನವಿ ಮಾಡಿದ ಸಭಾಧ್ಯಕ್ಷ ಜಿ.ಎಂ.ಸಿ. ಬಾಲಯೋಗಿ ಪುನರ್ ವಿಮರ್ಶಿತ ಮಸೂದೆಯನ್ನು ಆದಷ್ಟು ಕೂಡಲೇ ಮಂಡಿಸುವಂತೆ ಸರ್ಕಾರಕ್ಕೆ ಸೂಚಿಸಿದರು.</p><p>ಈ ಮಸೂದೆಯ ಮಂಡನೆಯನ್ನು ಅನಿರ್ದಿಷ್ಟ ಕಾಲದವರೆಗೆ ಮುಂದೂಡಿದ್ದನ್ನು ಪ್ರತಿಭಟಿಸಿ ಆಳುವ ಪಕ್ಷಗಳ ಸಾಲಿನ ಮಹಿಳೆಯರು ನಿರಂತರವಾಗಿ ನಡೆಸಿದ ತೀವ್ರ ಪ್ರತಿಭಟನೆಯಿಂದ ಲೋಕಸಭೆಯ ಕಲಾಪವನ್ನು ಮೂರು ಬಾರಿ ಮುಂದೂಡಿದ ಪ್ರಕರಣ ನಡೆಯಿತು.</p><p><strong>ಮಣಿಪುರ: ಉಗ್ರರ ದಾಳಿ–8 ಸಿಆರ್ಪಿಎಫ್ ಯೋಧರ ಬಲಿ</strong></p><p>ಇಂಫಾಲ್, ಜುಲೈ 14 (ಪಿಟಿಐ)– ಎರಡು ತಿಂಗಳಲ್ಲಿ ಎರಡನೇ ಸಲ ಉಗ್ರಗಾಮಿಗಳು ಅರಣ್ಯದ ಒಳಗಿಂದ ಕೇಂದ್ರ ಮೀಸಲು ಪೊಲೀಸ್ ಪಡೆಯ ಮೇಲೆ ಹಾರಿಸಿದ ಗುಂಡಿನ ದಾಳಿಗೆ ಎಂಟು ಮಂದಿ ಯೋಧರು ಬಲಿಯಾಗಿ, ಐವರು ಗಾಯಗೊಂಡಿದ್ದಾರೆ.</p><p>ಕೇಂದ್ರ ಮೀಸಲು ಪೊಲೀಸ್ ಪಡೆ ಬೆಳಿಗ್ಗೆ 8.10ರಲ್ಲಿ ಇಂಫಾಲ್– ಸಿಲ್ಚಾರ್ ರಸ್ತೆಯಲ್ಲಿ ಗಸ್ತು ತಿರುಗುತ್ತಿದ್ದಾಗ ದಟ್ಟ ಅರಣ್ಯದ ಬಳಿ ಉಗ್ರರು ಅತ್ಯಾಧುನಿಕ ಶಸ್ತ್ರಾಸ್ತ್ರದಿಂದ ದಾಳಿ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಹಿಳಾ ಮಸೂದೆ ಮಂಡನೆ ಮತ್ತೆ ಅನಿರ್ದಿಷ್ಟ ಮುಂದಕ್ಕೆ</strong></p><p>ನವದೆಹಲಿ, ಜುಲೈ 14– ಮಹಿಳಾ ಮೀಸಲಾತಿ ಮಸೂದೆಯ ಬಗೆಗೆ ಲೋಕಸಭೆಯಲ್ಲಿ ಇಂದು ಸಹ ವ್ಯಕ್ತವಾದ ಪರ ಮತ್ತು ತೀವ್ರ ವಿರೋಧದಿಂದಾಗಿ ಮಸೂದೆಯ ಪುನರ್<br>ವಿಮರ್ಶೆಯನ್ನು ಮತ್ತೆ ಅನಿರ್ದಿಷ್ಟ ಕಾಲದವರೆಗೆ ಮುಂದೂಡಲಾಯಿತು.</p><p>ಈ ಮಸೂದೆಯ ಬಗೆಗೆ ಎಲ್ಲ ಪಕ್ಷಗಳ ನಾಯಕರು ಮತ್ತೆ ಚರ್ಚಿಸಿ ಒಮ್ಮತಕ್ಕೆ ಬರಬೇಕೆಂದು ಮನವಿ ಮಾಡಿದ ಸಭಾಧ್ಯಕ್ಷ ಜಿ.ಎಂ.ಸಿ. ಬಾಲಯೋಗಿ ಪುನರ್ ವಿಮರ್ಶಿತ ಮಸೂದೆಯನ್ನು ಆದಷ್ಟು ಕೂಡಲೇ ಮಂಡಿಸುವಂತೆ ಸರ್ಕಾರಕ್ಕೆ ಸೂಚಿಸಿದರು.</p><p>ಈ ಮಸೂದೆಯ ಮಂಡನೆಯನ್ನು ಅನಿರ್ದಿಷ್ಟ ಕಾಲದವರೆಗೆ ಮುಂದೂಡಿದ್ದನ್ನು ಪ್ರತಿಭಟಿಸಿ ಆಳುವ ಪಕ್ಷಗಳ ಸಾಲಿನ ಮಹಿಳೆಯರು ನಿರಂತರವಾಗಿ ನಡೆಸಿದ ತೀವ್ರ ಪ್ರತಿಭಟನೆಯಿಂದ ಲೋಕಸಭೆಯ ಕಲಾಪವನ್ನು ಮೂರು ಬಾರಿ ಮುಂದೂಡಿದ ಪ್ರಕರಣ ನಡೆಯಿತು.</p><p><strong>ಮಣಿಪುರ: ಉಗ್ರರ ದಾಳಿ–8 ಸಿಆರ್ಪಿಎಫ್ ಯೋಧರ ಬಲಿ</strong></p><p>ಇಂಫಾಲ್, ಜುಲೈ 14 (ಪಿಟಿಐ)– ಎರಡು ತಿಂಗಳಲ್ಲಿ ಎರಡನೇ ಸಲ ಉಗ್ರಗಾಮಿಗಳು ಅರಣ್ಯದ ಒಳಗಿಂದ ಕೇಂದ್ರ ಮೀಸಲು ಪೊಲೀಸ್ ಪಡೆಯ ಮೇಲೆ ಹಾರಿಸಿದ ಗುಂಡಿನ ದಾಳಿಗೆ ಎಂಟು ಮಂದಿ ಯೋಧರು ಬಲಿಯಾಗಿ, ಐವರು ಗಾಯಗೊಂಡಿದ್ದಾರೆ.</p><p>ಕೇಂದ್ರ ಮೀಸಲು ಪೊಲೀಸ್ ಪಡೆ ಬೆಳಿಗ್ಗೆ 8.10ರಲ್ಲಿ ಇಂಫಾಲ್– ಸಿಲ್ಚಾರ್ ರಸ್ತೆಯಲ್ಲಿ ಗಸ್ತು ತಿರುಗುತ್ತಿದ್ದಾಗ ದಟ್ಟ ಅರಣ್ಯದ ಬಳಿ ಉಗ್ರರು ಅತ್ಯಾಧುನಿಕ ಶಸ್ತ್ರಾಸ್ತ್ರದಿಂದ ದಾಳಿ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>