ನವದೆಹಲಿ, ಏ. 20 (ಪಿಟಿಐ)– ಸರ್ಕಾರಿ ವಸತಿ ಹಗರಣದಲ್ಲಿ ಆರೋಪಿ ಎಂದು ಗುರುತಿಸಲಾಗಿರುವ ಕೇಂದ್ರದ ಮಾಜಿ ನಗರಾಭಿವೃದ್ಧಿ ಸಚಿವೆ ಮತ್ತು ಈಗ ಹಿಮಾಚಲ ಪ್ರದೇಶದ ರಾಜ್ಯಪಾಲೆಯಾಗಿರುವ ಶೀಲಾ ಕೌಲ್ ಅವರು ವಿಳಂಬ ಮಾಡದೆ ರಾಜೀನಾಮೆ ನೀಡುವುದು ಉತ್ತಮ ಎಂದು ರಾಷ್ಟ್ರಪತಿ ಡಾ. ಶಂಕರ ದಯಾಳ್ ಶರ್ಮಾ ಇಂದು ರಾತ್ರಿ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.