ನವದೆಹಲಿ, ನೌಕಾಪಡೆಯ ಮುಖ್ಯಸ್ಥ ಸ್ಥಾನದಿಂದ ವಜಾ ಆದ ಅಡ್ಮಿರಲ್ ಜನರಲ್ ವಿಷ್ಣು ಭಾಗವತ್ ಶಸ್ತ್ರಾಸ್ತ್ರ ಖರೀದಿಯ ಬಗೆಗೆ ಮಾಡಿರುವ ಗಂಭೀರ ಆರೋಪಗಳ ತನಿಖೆಗೆ ಜಂಟಿ ಸಂಸತ್ ಸಮಿತಿ ರಚಿಸಬೇಕೆಂದು ಸಂಸತ್ನ ಉಭಯ ಸದನಗಳಲ್ಲೂ ಇಂದು ಪ್ರತಿಪಕ್ಷಗಳು ಒತ್ತಾಯಿಸಿದ್ದರಿಂದ ಗದ್ದಲ ಉಂಟಾಗಿ ಎರಡು ಬಾರಿ ಕಲಾಪ ಮುಂದೂಡಿದ ಪ್ರಸಂಗ ನಡೆಯಿತು.
ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳ ಸದಸ್ಯರು ಶೂನ್ಯವೇಳೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದಾಗ ಸದನ ಕೋಲಾಹಲದಲ್ಲಿ ಮುಳುಗಿತು.