<h3>ಸಿಇಟಿ ಪರೀಕ್ಷೆಗೆ ವಿಶೇಷ ರೈಲಿನಲ್ಲಿ ಬಂದ ಹೊರ ರಾಜ್ಯದ ದಂಡು</h3>.<p>ಬೆಂಗಳೂರು, ಏ. 30– ರಾಜ್ಯಾದ್ಯಂತ ಮೇ 2 ಮತ್ತು 3ರಂದು ನಡೆಯಲಿರುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ರಾಷ್ಟ್ರದಲ್ಲೆಡೆ ತೀವ್ರ ಕುತೂಹಲ ಕೆರಳಿಸಿದೆ. ಈ ಬಾರಿಯ ಸಿಇಟಿ ಪರೀಕ್ಷೆಗೆ ಹೊರ ರಾಜ್ಯಗಳಿಂದ 40 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಲಿದ್ದು, ಇಂದು ಸಾವಿರಾರು ವಿದ್ಯಾರ್ಥಿಗಳ ಮೊದಲ ದೊಡ್ಡ ತಂಡ ವಿಶೇಷ ರೈಲಿನಲ್ಲಿ ಹೆಹಲಿಯಿಂದ ನಗರಕ್ಕೆ ಆಗಮಿಸಿತು.</p>.<p>ಹೊರ ರಾಜ್ಯದ ವಿದ್ಯಾರ್ಥಿಗಳಿಗಾಗಿಯೇ ಬಿಡಲಾದ (ದೆಹಲಿ) ನಿಜಾಮುದ್ದೀನ್– ಬೆಂಗಳೂರು ವಿಶೇಷ ರೈಲಿನಲ್ಲಿ ವಿದ್ಯಾರ್ಥಿಗಳು ಇಲ್ಲಿಗೆ ಆಗಮಿಸಿದಾಗ ಅವರ ಮುಖದಲ್ಲಿ ಬಳಲಿಕೆಯ ಜತೆಗೆ ಪರೀಕ್ಷಾ ಕುತೂಹಲವೂ ಕಾಣಿಸುತ್ತಿತ್ತು.</p>.<p>ಅತ್ಯಧಿಕ ಕೇಂದ್ರಗಳು ಬೆಂಗಳೂರುನಲ್ಲಿ ಅತ್ಯಧಿಕ (111) ಪರೀಕ್ಷಾ ಕೇಂದ್ರಗಳಿರುವುದರಿಂದ ಇಲ್ಲಿ ಈ ಜಾರಿ ಸಹಜವಾಗಿ ಅತ್ಯಧಿಕ ಸಂಖ್ಯೆಯ ಹೊರ ರಾಜ್ಯಗಳ ವಿದ್ಯಾರ್ಥಿಗಳು (31,353) ಪರೀಕ್ಷೆ ಬರೆಯಲಿದ್ದಾರೆ.</p>.<h3>ಗಾಯಕ ಅತ್ರಿ ಸೇರಿ 6 ಜನ ತುಂಗೆ ಪಾಲು</h3>.<p>ಶೃಂಗೇರಿ, ಏ. 30– ಇಲ್ಲಿಗೆ ಸಮೀಪದ ಉಳಿವೆಬೈಲು ಬಳಿಯ ತುಂಗಾ ನದಿಯ ನೀರಿನ ಸುಳಿಗೆ ಸಿಲುಕಿ ಇಂದು ಹೆಸರಾಂತ ಸಂಗೀತಗಾರ ಜೆ.ವಿ.ಅತ್ರಿ ಸೇರಿದಂತೆ ಕುಟುಂಬದ ಒಟ್ಟು ಆರು ಜನ ಮುಳುಗಿ ಮೃತಪಟ್ಟರು.</p>.<p>ಇಂದು ಮಧ್ಯಾಹ್ನ ಸುಮಾರು 12–30ರಲ್ಲಿ ಈ ದುರಂತ ಸಂಭವಿಸಿದೆ.</p>.<p>ಉಳಿವೆಬೈಲು ಯುವಕ ಸಂಘವೊಂದರ ಬೆಳ್ಳಿಹಬ್ಬದ ಸಮಾರಂಭದಲ್ಲಿ ನಿನ್ನೆ ಅತ್ರಿಯವರು ಸಂಗೀತ ಕಾರ್ಯಕ್ರಮ ನೀಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<h3>ಸಿಇಟಿ ಪರೀಕ್ಷೆಗೆ ವಿಶೇಷ ರೈಲಿನಲ್ಲಿ ಬಂದ ಹೊರ ರಾಜ್ಯದ ದಂಡು</h3>.<p>ಬೆಂಗಳೂರು, ಏ. 30– ರಾಜ್ಯಾದ್ಯಂತ ಮೇ 2 ಮತ್ತು 3ರಂದು ನಡೆಯಲಿರುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ರಾಷ್ಟ್ರದಲ್ಲೆಡೆ ತೀವ್ರ ಕುತೂಹಲ ಕೆರಳಿಸಿದೆ. ಈ ಬಾರಿಯ ಸಿಇಟಿ ಪರೀಕ್ಷೆಗೆ ಹೊರ ರಾಜ್ಯಗಳಿಂದ 40 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಲಿದ್ದು, ಇಂದು ಸಾವಿರಾರು ವಿದ್ಯಾರ್ಥಿಗಳ ಮೊದಲ ದೊಡ್ಡ ತಂಡ ವಿಶೇಷ ರೈಲಿನಲ್ಲಿ ಹೆಹಲಿಯಿಂದ ನಗರಕ್ಕೆ ಆಗಮಿಸಿತು.</p>.<p>ಹೊರ ರಾಜ್ಯದ ವಿದ್ಯಾರ್ಥಿಗಳಿಗಾಗಿಯೇ ಬಿಡಲಾದ (ದೆಹಲಿ) ನಿಜಾಮುದ್ದೀನ್– ಬೆಂಗಳೂರು ವಿಶೇಷ ರೈಲಿನಲ್ಲಿ ವಿದ್ಯಾರ್ಥಿಗಳು ಇಲ್ಲಿಗೆ ಆಗಮಿಸಿದಾಗ ಅವರ ಮುಖದಲ್ಲಿ ಬಳಲಿಕೆಯ ಜತೆಗೆ ಪರೀಕ್ಷಾ ಕುತೂಹಲವೂ ಕಾಣಿಸುತ್ತಿತ್ತು.</p>.<p>ಅತ್ಯಧಿಕ ಕೇಂದ್ರಗಳು ಬೆಂಗಳೂರುನಲ್ಲಿ ಅತ್ಯಧಿಕ (111) ಪರೀಕ್ಷಾ ಕೇಂದ್ರಗಳಿರುವುದರಿಂದ ಇಲ್ಲಿ ಈ ಜಾರಿ ಸಹಜವಾಗಿ ಅತ್ಯಧಿಕ ಸಂಖ್ಯೆಯ ಹೊರ ರಾಜ್ಯಗಳ ವಿದ್ಯಾರ್ಥಿಗಳು (31,353) ಪರೀಕ್ಷೆ ಬರೆಯಲಿದ್ದಾರೆ.</p>.<h3>ಗಾಯಕ ಅತ್ರಿ ಸೇರಿ 6 ಜನ ತುಂಗೆ ಪಾಲು</h3>.<p>ಶೃಂಗೇರಿ, ಏ. 30– ಇಲ್ಲಿಗೆ ಸಮೀಪದ ಉಳಿವೆಬೈಲು ಬಳಿಯ ತುಂಗಾ ನದಿಯ ನೀರಿನ ಸುಳಿಗೆ ಸಿಲುಕಿ ಇಂದು ಹೆಸರಾಂತ ಸಂಗೀತಗಾರ ಜೆ.ವಿ.ಅತ್ರಿ ಸೇರಿದಂತೆ ಕುಟುಂಬದ ಒಟ್ಟು ಆರು ಜನ ಮುಳುಗಿ ಮೃತಪಟ್ಟರು.</p>.<p>ಇಂದು ಮಧ್ಯಾಹ್ನ ಸುಮಾರು 12–30ರಲ್ಲಿ ಈ ದುರಂತ ಸಂಭವಿಸಿದೆ.</p>.<p>ಉಳಿವೆಬೈಲು ಯುವಕ ಸಂಘವೊಂದರ ಬೆಳ್ಳಿಹಬ್ಬದ ಸಮಾರಂಭದಲ್ಲಿ ನಿನ್ನೆ ಅತ್ರಿಯವರು ಸಂಗೀತ ಕಾರ್ಯಕ್ರಮ ನೀಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>