<p><strong>ಇನ್ನಷ್ಟು ಶಿಖರಗಳ ವಶ: ಅಂತಿಮ ಹಂತದಲ್ಲಿ ಆಪರೇಷನ್ ವಿಜಯ್</strong></p><p>ನವದೆಹಲಿ, ಜುಲೈ 9– ಬಟಾಲಿಕ್ ವಲಯದಲ್ಲಿ ಪಾಕಿಸ್ತಾನಿ ಸೈನಿಕರು ಮತ್ತು ಉಗ್ರಗಾಮಿಗಳನ್ನು ಸಾಕಷ್ಟು ಸದೆಬಡಿದಿರುವ ಭಾರತೀಯ ಸೇನೆ ಶೇ 99ರಷ್ಟು ಪ್ರದೇಶಗಳನ್ನು ಮತ್ತೆ ತನ್ನ ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.</p><p>ಪ್ರಮುಖ ಆಯಕಟ್ಟಿನ ಪ್ರದೇಶವಾದ ಬಟಾಲಿಕ್–ಯಲ್ದೂರ್ ಪ್ರದೇಶ<br>ಭಾರತೀಯ ಸೇನೆಯ ವಶವಾಗಿದ್ದು, ಅತಿಕ್ರಮಣಕಾರರನ್ನು ಸಂಪೂರ್ಣವಾಗಿ ಗಡಿಯಿಂದ ಹೊರಕ್ಕೆ ಹಾಕಲು ಕೆಲವೇ ಗಂಟೆಗಳ ಕಾರ್ಯಾಚರಣೆ ಸಾಕು ಎಂದು ಸೇನಾ ಮೂಲಗಳು ತಿಳಿಸಿವೆ.</p><p><strong>ರೋಷನ್ ಬೇಗ್, ಕಮರುಲ್ ಕಾಂಗ್ರೆಸ್ಗೆ</strong></p><p>ನವದೆಹಲಿ, ಜುಲೈ 9– ನಿರೀಕ್ಷೆಯಂತೆ ಜನತಾದಳದ ಕರ್ನಾಟಕದ ಮಾಜಿ ಸಚಿವ ರೋಷನ್ ಬೇಗ್, ಲೋಕಸಭೆಯ ಮಾಜಿ ಸದಸ್ಯರಾದ ಕಮರುಲ್ ಇಸ್ಲಾಂ, ರಾಜಾ ರಂಗಪ್ಪ ನಾಯಕ ಮತ್ತು ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ಇಂದು ಕಾಂಗ್ರೆಸ್ಗೆ ಪಕ್ಷಾಂತರ ಮಾಡಿದರು.</p><p>ಈ ನಾಲ್ವರ ಸೇರ್ಪಡೆಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಂ ನಬಿ ಆಜಾದ್ ಇಂದು ಪಕ್ಷದ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು. ಕೆಪಿಸಿಸಿ ಅಧ್ಯಕ್ಷ ಎಸ್.ಎಂ. ಕೃಷ್ಣ ಅವರ ಸಮ್ಮುಖದಲ್ಲಿ ಈ ನಾಲ್ವರು ಹಾಜರಿದ್ದು ಕಾಂಗ್ರೆಸ್ ಸೇರಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇನ್ನಷ್ಟು ಶಿಖರಗಳ ವಶ: ಅಂತಿಮ ಹಂತದಲ್ಲಿ ಆಪರೇಷನ್ ವಿಜಯ್</strong></p><p>ನವದೆಹಲಿ, ಜುಲೈ 9– ಬಟಾಲಿಕ್ ವಲಯದಲ್ಲಿ ಪಾಕಿಸ್ತಾನಿ ಸೈನಿಕರು ಮತ್ತು ಉಗ್ರಗಾಮಿಗಳನ್ನು ಸಾಕಷ್ಟು ಸದೆಬಡಿದಿರುವ ಭಾರತೀಯ ಸೇನೆ ಶೇ 99ರಷ್ಟು ಪ್ರದೇಶಗಳನ್ನು ಮತ್ತೆ ತನ್ನ ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.</p><p>ಪ್ರಮುಖ ಆಯಕಟ್ಟಿನ ಪ್ರದೇಶವಾದ ಬಟಾಲಿಕ್–ಯಲ್ದೂರ್ ಪ್ರದೇಶ<br>ಭಾರತೀಯ ಸೇನೆಯ ವಶವಾಗಿದ್ದು, ಅತಿಕ್ರಮಣಕಾರರನ್ನು ಸಂಪೂರ್ಣವಾಗಿ ಗಡಿಯಿಂದ ಹೊರಕ್ಕೆ ಹಾಕಲು ಕೆಲವೇ ಗಂಟೆಗಳ ಕಾರ್ಯಾಚರಣೆ ಸಾಕು ಎಂದು ಸೇನಾ ಮೂಲಗಳು ತಿಳಿಸಿವೆ.</p><p><strong>ರೋಷನ್ ಬೇಗ್, ಕಮರುಲ್ ಕಾಂಗ್ರೆಸ್ಗೆ</strong></p><p>ನವದೆಹಲಿ, ಜುಲೈ 9– ನಿರೀಕ್ಷೆಯಂತೆ ಜನತಾದಳದ ಕರ್ನಾಟಕದ ಮಾಜಿ ಸಚಿವ ರೋಷನ್ ಬೇಗ್, ಲೋಕಸಭೆಯ ಮಾಜಿ ಸದಸ್ಯರಾದ ಕಮರುಲ್ ಇಸ್ಲಾಂ, ರಾಜಾ ರಂಗಪ್ಪ ನಾಯಕ ಮತ್ತು ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ಇಂದು ಕಾಂಗ್ರೆಸ್ಗೆ ಪಕ್ಷಾಂತರ ಮಾಡಿದರು.</p><p>ಈ ನಾಲ್ವರ ಸೇರ್ಪಡೆಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಂ ನಬಿ ಆಜಾದ್ ಇಂದು ಪಕ್ಷದ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು. ಕೆಪಿಸಿಸಿ ಅಧ್ಯಕ್ಷ ಎಸ್.ಎಂ. ಕೃಷ್ಣ ಅವರ ಸಮ್ಮುಖದಲ್ಲಿ ಈ ನಾಲ್ವರು ಹಾಜರಿದ್ದು ಕಾಂಗ್ರೆಸ್ ಸೇರಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>