<p><strong>ನವದೆಹಲಿ</strong>: ಫೆ. 25 – ಉನ್ನತ ದರ್ಜೆಯ ಪ್ರಯಾಣ ದರಗಳಲ್ಲಿ ತೀವ್ರ ಏರಿಕೆ ಹಾಗೂ ಸರಕು ಸಾಗಣೆ ದರದಲ್ಲಿ ಶೇಕಡ 4ರಷ್ಟು ಏರಿಕೆಯ ಮೂಲಕ ಮುಂದಿನ (1999–2000) ಹಣಕಾಸು ವರ್ಷದಲ್ಲಿ ಒಟ್ಟು 900 ಕೋಟಿ ರೂಪಾಯಿ ಹೆಚ್ಚು ವರಮಾನ ಸಂಗ್ರಹಿಸಲು ರೈಲ್ವೆ ಸಚಿವ ನಿತೀಶ್ ಕುಮಾರ್ ನಿರ್ಧರಿಸಿದ್ದಾರೆ.</p><p>ಅವರು ಇಂದು ಲೋಕಸಭೆಯಲ್ಲಿ ಮಂಡಿಸಿದ ರೈಲ್ವೆ ಆಯವ್ಯಯ ಮುಂಗಡ ಪತ್ರದ ಅಂದಾಜಿನಂತೆ, ಸರಕು ಸಾಗಣೆ ದರ ಹೆಚ್ಚಳದಿಂದ ಒಟ್ಟು 700 ಕೋಟಿ ರೂಪಾಯಿ ಬಂದರೆ, ಮಿಕ್ಕಿದ 200 ಕೋಟಿ ರೂಪಾಯಿಯು ಪ್ರಯಾಣದರ ಹೆಚ್ಚಳವೂ ಸೇರಿದಂತೆ ಇತರ ಬಾಬ್ತುಗಳಿಂದ ಸಿಗುವುದು.</p><p>ಹೆಚ್ಚಿಸಲಾದ ದರಗಳು 1999ರ ಏಪ್ರಿಲ್ ಒಂದರಿಂದ ಜಾರಿಗೆ ಬರಲಿವೆ.</p><p><strong>ರೈಲುಗಳಲ್ಲಿ ಸಿಗರೇಟ್ ಬೀಡಿ ಮಾರಾಟ ನಿಷೇಧ</strong></p><p><strong>ನವದೆಹಲಿ</strong>, ಫೆ. 25 ರೈಲ್ವೆ ಪ್ಲಾಟ್ಫಾರ್ಮ್ ಹಾಗೂ ಪ್ರಯಾಣಿಕರ ರೈಲುಗಳಲ್ಲಿ ಸಿಗರೇಟ್ ಮತ್ತು ಬೀಡಿ ಮಾರಾಟವನ್ನು ಬರುವ ಜೂನ್ 5 ‘ಪರಿಸರ ದಿನ’ದಿಂದ ನಿಷೇಧಿಸಲಾಗುವುದು ಎಂದು ರೈಲ್ವೆ ಸಚಿವ ನಿತೀಶ್ ಕುಮಾರ್ ಲೋಕಸಭೆಯಲ್ಲಿ ಇಂದು ತಿಳಿಸಿದರು.</p><p>ಪರಿಸರ ಸಂಬಂಧಿ ವಿಷಯಗಳಲ್ಲಿ ತಮ್ಮ ಇಲಾಖೆಯ ಬದ್ಧತೆಯನ್ನು ಬಿಂಬಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.</p><p>ರೈಲು ಪ್ರಯಾಣಿಕರ ದೂರುಗಳ ಬಗ್ಗೆ ಮಾತನಾಡಿದ ಸಚಿವರು ‘ಗ್ರಾಹಕರ ಹಿತರಕ್ಷಣಾ ಸಂಸ್ಥೆಗಳನ್ನು ಶೀಘ್ರದಲ್ಲೇ ಸ್ಥಾಪಿಸಲಾಗುವುದು’ ಎಂದರು.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಫೆ. 25 – ಉನ್ನತ ದರ್ಜೆಯ ಪ್ರಯಾಣ ದರಗಳಲ್ಲಿ ತೀವ್ರ ಏರಿಕೆ ಹಾಗೂ ಸರಕು ಸಾಗಣೆ ದರದಲ್ಲಿ ಶೇಕಡ 4ರಷ್ಟು ಏರಿಕೆಯ ಮೂಲಕ ಮುಂದಿನ (1999–2000) ಹಣಕಾಸು ವರ್ಷದಲ್ಲಿ ಒಟ್ಟು 900 ಕೋಟಿ ರೂಪಾಯಿ ಹೆಚ್ಚು ವರಮಾನ ಸಂಗ್ರಹಿಸಲು ರೈಲ್ವೆ ಸಚಿವ ನಿತೀಶ್ ಕುಮಾರ್ ನಿರ್ಧರಿಸಿದ್ದಾರೆ.</p><p>ಅವರು ಇಂದು ಲೋಕಸಭೆಯಲ್ಲಿ ಮಂಡಿಸಿದ ರೈಲ್ವೆ ಆಯವ್ಯಯ ಮುಂಗಡ ಪತ್ರದ ಅಂದಾಜಿನಂತೆ, ಸರಕು ಸಾಗಣೆ ದರ ಹೆಚ್ಚಳದಿಂದ ಒಟ್ಟು 700 ಕೋಟಿ ರೂಪಾಯಿ ಬಂದರೆ, ಮಿಕ್ಕಿದ 200 ಕೋಟಿ ರೂಪಾಯಿಯು ಪ್ರಯಾಣದರ ಹೆಚ್ಚಳವೂ ಸೇರಿದಂತೆ ಇತರ ಬಾಬ್ತುಗಳಿಂದ ಸಿಗುವುದು.</p><p>ಹೆಚ್ಚಿಸಲಾದ ದರಗಳು 1999ರ ಏಪ್ರಿಲ್ ಒಂದರಿಂದ ಜಾರಿಗೆ ಬರಲಿವೆ.</p><p><strong>ರೈಲುಗಳಲ್ಲಿ ಸಿಗರೇಟ್ ಬೀಡಿ ಮಾರಾಟ ನಿಷೇಧ</strong></p><p><strong>ನವದೆಹಲಿ</strong>, ಫೆ. 25 ರೈಲ್ವೆ ಪ್ಲಾಟ್ಫಾರ್ಮ್ ಹಾಗೂ ಪ್ರಯಾಣಿಕರ ರೈಲುಗಳಲ್ಲಿ ಸಿಗರೇಟ್ ಮತ್ತು ಬೀಡಿ ಮಾರಾಟವನ್ನು ಬರುವ ಜೂನ್ 5 ‘ಪರಿಸರ ದಿನ’ದಿಂದ ನಿಷೇಧಿಸಲಾಗುವುದು ಎಂದು ರೈಲ್ವೆ ಸಚಿವ ನಿತೀಶ್ ಕುಮಾರ್ ಲೋಕಸಭೆಯಲ್ಲಿ ಇಂದು ತಿಳಿಸಿದರು.</p><p>ಪರಿಸರ ಸಂಬಂಧಿ ವಿಷಯಗಳಲ್ಲಿ ತಮ್ಮ ಇಲಾಖೆಯ ಬದ್ಧತೆಯನ್ನು ಬಿಂಬಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.</p><p>ರೈಲು ಪ್ರಯಾಣಿಕರ ದೂರುಗಳ ಬಗ್ಗೆ ಮಾತನಾಡಿದ ಸಚಿವರು ‘ಗ್ರಾಹಕರ ಹಿತರಕ್ಷಣಾ ಸಂಸ್ಥೆಗಳನ್ನು ಶೀಘ್ರದಲ್ಲೇ ಸ್ಥಾಪಿಸಲಾಗುವುದು’ ಎಂದರು.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>