<p><strong>ಮಿರಾಜುದ್ದೀನ್ ರಾಜೀನಾಮೆ</strong></p><p>ಬೆಂಗಳೂರು, ಜುಲೈ 31– ಬಿಜೆಪಿ ನೇತೃತ್ವದ ರಾಷ್ಟ್ರೀಯ ಜನತಾಂತ್ರಿಕ ಮೈತ್ರಿಕೂಟವನ್ನು ಸೇರುವ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರ ನಿರ್ಧಾರವನ್ನು ವಿರೋಧಿಸಿ ಪೌರಾಡಳಿತ ಸಚಿವ ಮಿರಾಜುದ್ದೀನ್ ಪಟೇಲ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ದೇವೇಗೌಡ ನೇತೃತ್ವದ ಜನತಾದಳದಲ್ಲಿ ಉಳಿಯಲು ನಿರ್ಧರಿಸಿದ್ದಾರೆ.</p><p>ಜನತಾದಳ ಇಬ್ಭಾಗವಾದ ನಂತರ ಪಟೇಲ್ ಸಂಪುಟಕ್ಕೆ ರಾಜೀನಾಮೆ ನೀಡುತ್ತಿರುವವರಲ್ಲಿ ಮಿರಾಜುದ್ದೀನ್ ಪಟೇಲ್ ಐದನೆಯವರಾಗಿದ್ದಾರೆ. ಇದಕ್ಕೆ ಮೊದಲು, ಸಚಿವರಾದ ಡಿ.ಮಂಜುನಾಥ್, ಮಾಲೀಕಯ್ಯ ಗುತ್ತೇದಾರ್, ಬಸವರಾಜ ಶಿವಣ್ಣನವರ್ ಮತ್ತು ಮುನಿಯಪ್ಪ ಮುದ್ದಪ್ಪ ಅವರು ಸಂಪುಟಕ್ಕೆ ರಾಜೀನಾಮೆ ನೀಡಿದ್ದರು.</p><p>ಜನತಾದಳ ವಿಧ್ಯುಕ್ತವಾಗಿ ಇಬ್ಭಾಗವಾದ ದಿನ ಮುಖ್ಯಮಂತ್ರಿ ಪಟೇಲ್ ಅವರೇ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಎಂಟು ಮಂದಿ ಸಚಿವರನ್ನು ವಜಾ ಮಾಡಿದ್ದರು.</p><p><strong>ಕೋಮುಪಕ್ಷದ ಜತೆ ಸೇರಿದವರಿಗೆ ಪಾಠ: ಗೌಡರ ಕರೆ</strong></p><p>ಬೆಂಗಳೂರು, ಜುಲೈ 31– ‘ಯಾರೇ ಪಕ್ಷ ಬಿಟ್ಟು ಹೋಗಿದ್ದರೂ ನಮ್ಮ ಬಲ ಕುಗ್ಗಿಲ್ಲ. ನಮ್ಮ ಸ್ಥೈರ್ಯ ಕುಂದಿಲ್ಲ; ಸ್ವಾರ್ಥ ಸಾಧನೆಗೆ ಬೆನ್ನಿಗೆ ಚೂರಿ ಹಾಕಿ ಕೋಮುವಾದಿ ಪಕ್ಷದ ಜತೆಗೆ ಸೇರಿರುವವರಿಗೆ ತಕ್ಕ ಪಾಠ ಕಲಿಸಿ’ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಇಂದು ಮತದಾರರಲ್ಲಿ ಮನವಿ ಮಾಡಿಕೊಂಡರು.</p><p>ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ವಾಜಪೇಯಿ ಸರ್ಕಾರ ರೈತ ವಿರೋಧಿ ಸರ್ಕಾರ. ಮುಂಬೈ–ಗುಜರಾತ್ನಂತಹ ಭಾರಿ ವರ್ತಕರ ಹಿಡಿತಕ್ಕೆ ಸಿಕ್ಕಿರುವ ಬಿಜೆಪಿ ಮತ್ತು ಮಿತ್ರಪಕ್ಷಗಳ ಬುಡವನ್ನು ಕೀಳಬೇಕಾಗಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಿರಾಜುದ್ದೀನ್ ರಾಜೀನಾಮೆ</strong></p><p>ಬೆಂಗಳೂರು, ಜುಲೈ 31– ಬಿಜೆಪಿ ನೇತೃತ್ವದ ರಾಷ್ಟ್ರೀಯ ಜನತಾಂತ್ರಿಕ ಮೈತ್ರಿಕೂಟವನ್ನು ಸೇರುವ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರ ನಿರ್ಧಾರವನ್ನು ವಿರೋಧಿಸಿ ಪೌರಾಡಳಿತ ಸಚಿವ ಮಿರಾಜುದ್ದೀನ್ ಪಟೇಲ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ದೇವೇಗೌಡ ನೇತೃತ್ವದ ಜನತಾದಳದಲ್ಲಿ ಉಳಿಯಲು ನಿರ್ಧರಿಸಿದ್ದಾರೆ.</p><p>ಜನತಾದಳ ಇಬ್ಭಾಗವಾದ ನಂತರ ಪಟೇಲ್ ಸಂಪುಟಕ್ಕೆ ರಾಜೀನಾಮೆ ನೀಡುತ್ತಿರುವವರಲ್ಲಿ ಮಿರಾಜುದ್ದೀನ್ ಪಟೇಲ್ ಐದನೆಯವರಾಗಿದ್ದಾರೆ. ಇದಕ್ಕೆ ಮೊದಲು, ಸಚಿವರಾದ ಡಿ.ಮಂಜುನಾಥ್, ಮಾಲೀಕಯ್ಯ ಗುತ್ತೇದಾರ್, ಬಸವರಾಜ ಶಿವಣ್ಣನವರ್ ಮತ್ತು ಮುನಿಯಪ್ಪ ಮುದ್ದಪ್ಪ ಅವರು ಸಂಪುಟಕ್ಕೆ ರಾಜೀನಾಮೆ ನೀಡಿದ್ದರು.</p><p>ಜನತಾದಳ ವಿಧ್ಯುಕ್ತವಾಗಿ ಇಬ್ಭಾಗವಾದ ದಿನ ಮುಖ್ಯಮಂತ್ರಿ ಪಟೇಲ್ ಅವರೇ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಎಂಟು ಮಂದಿ ಸಚಿವರನ್ನು ವಜಾ ಮಾಡಿದ್ದರು.</p><p><strong>ಕೋಮುಪಕ್ಷದ ಜತೆ ಸೇರಿದವರಿಗೆ ಪಾಠ: ಗೌಡರ ಕರೆ</strong></p><p>ಬೆಂಗಳೂರು, ಜುಲೈ 31– ‘ಯಾರೇ ಪಕ್ಷ ಬಿಟ್ಟು ಹೋಗಿದ್ದರೂ ನಮ್ಮ ಬಲ ಕುಗ್ಗಿಲ್ಲ. ನಮ್ಮ ಸ್ಥೈರ್ಯ ಕುಂದಿಲ್ಲ; ಸ್ವಾರ್ಥ ಸಾಧನೆಗೆ ಬೆನ್ನಿಗೆ ಚೂರಿ ಹಾಕಿ ಕೋಮುವಾದಿ ಪಕ್ಷದ ಜತೆಗೆ ಸೇರಿರುವವರಿಗೆ ತಕ್ಕ ಪಾಠ ಕಲಿಸಿ’ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಇಂದು ಮತದಾರರಲ್ಲಿ ಮನವಿ ಮಾಡಿಕೊಂಡರು.</p><p>ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ವಾಜಪೇಯಿ ಸರ್ಕಾರ ರೈತ ವಿರೋಧಿ ಸರ್ಕಾರ. ಮುಂಬೈ–ಗುಜರಾತ್ನಂತಹ ಭಾರಿ ವರ್ತಕರ ಹಿಡಿತಕ್ಕೆ ಸಿಕ್ಕಿರುವ ಬಿಜೆಪಿ ಮತ್ತು ಮಿತ್ರಪಕ್ಷಗಳ ಬುಡವನ್ನು ಕೀಳಬೇಕಾಗಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>