ನವದೆಹಲಿ, ಡಿ. 2 (ಪಿಟಿಐ, ಯುಎನ್ಐ)– ರಾಜ್ಯಗಳು ತಮಗಿಷ್ಟ ಬಂದಂತೆ ತೆರಿಗೆ ಪೈಪೋಟಿಯಲ್ಲಿ ತೊಡಗಬಾರದು ಮತ್ತು ನೇರ ತೆರಿಗೆ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕು ಎಂದು ಕೇಂದ್ರ ಹಣಕಾಸು ಸಚಿವ ಡಾ. ಮನಮೋಹನ್ ಸಿಂಗ್ ಕರೆ ನೀಡಿದ್ದರೂ ಮೌಲ್ಯವರ್ಧಿತ ತೆರಿಗೆಯನ್ನು (ವ್ಯಾಟ್) ಹಂತ ಹಂತವಾಗಿ ಜಾರಿಗೆ ತರಲು ರಾಜ್ಯ ಹಣಕಾಸು ಸಚಿವರು ಇಂದು ಒಪ್ಪಿಕೊಂಡಿದ್ದಾರೆ.