ದೇವೇಗೌಡ ಅವರ ಸಂಪುಟದ ಸಚಿವರ ಖಾತೆಗಳನ್ನು ಇಂದು ಮಧ್ಯರಾತ್ರಿ ಪ್ರಕಟಿಸಲಾಗಿದ್ದು, ಮಹತ್ವದ ಗೃಹ ಖಾತೆ, ಕೃಷಿ, ಸಿಬ್ಬಂದಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಅಣುಶಕ್ತಿ ಖಾತೆಗಳನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಮುಲಾಯಂ ಸಿಂಗ್ ಯಾದವ್ ಅವರು ನೂತನ ರಕ್ಷಣಾ ಸಚಿವರಾಗಿದ್ದಾರೆ. ಕಾಂಗ್ರೆಸ್ನಿಂದ ಹೊರಬಂದು ತಮಿಳು ಮಾನಿಲ ಕಾಂಗ್ರೆಸ್ ಪಕ್ಷ ರಚನೆಯಲ್ಲಿ ಪಾತ್ರ ವಹಿಸಿದವರಲ್ಲಿ ಒಬ್ಬರಾಗಿದ್ದ ಪಿ. ಚಿದಂಬರಂ ಅವರಿಗೆ ಹಣಕಾಸು ಖಾತೆಯ ಜೊತೆಗೆ ಕಾನೂನು, ನ್ಯಾಯಾಂಗ ಮತ್ತು ಕಂಪನಿ ವ್ಯವಹಾರ ಖಾತೆ ವಹಿಸಲಾಗಿದೆ.