<p>ಬೆಂಗಳೂರು, ಆಗಸ್ಟ್ 1– ಆಲಮಟ್ಟಿ ಅಣೆಕಟ್ಟೆ ವಿವಾದ ಕುರಿತಂತೆ ದೆಹಲಿಯಲ್ಲಿ ಆಗಸ್ಟ್ 6ರಂದು ನಡೆಯಲಿರುವ ಮುಖ್ಯಮಂತ್ರಿಗಳ ಸಭೆಯಲ್ಲಿ ಜೆ.ಎಚ್. ಪಟೇಲ್ ಅವರ ಜತೆ ತಾವು ಉಪ ಮುಖ್ಯಮಂತ್ರಿ ಹಾಗೂ ಕಾನೂನು ಸಚಿವರು ಭಾಗವಹಿಸಲಿರುವುದಾಗಿ ಭಾರೀ ನೀರಾವರಿ ಸಚಿವರ ಕೆ.ಎನ್. ನಾಗೇಗೌಡ ಇಂದು ವಿಧಾನಪರಿಷತ್ತಿನಲ್ಲಿ ಹೇಳಿದರು.</p>.<p>ಕೃಷ್ಣಾ ನದಿ ವಿವಾದದ ಬಗ್ಗೆ ಆಂಧ್ರದ ಹೈಕೋರ್ಟಿನಲ್ಲಿ ಆಗಸ್ಟ್ 21ರಂದು ನಡೆಯುವ ವಿಚಾರಣೆ ದಿನ ಹಾಜರಾಗಿ ನ್ಯಾಯಾಲಯದ ವ್ಯಾಪ್ತಿ ಕುರಿತು ಪ್ರಶ್ನಿಸುವುದಾಗಿ ಅವರು ಪ್ರಕಟಿಸಿದರು.</p>.<p>ಜನತಾ ದಳದ ಮಹದೇವ ಬಣಕಾರ್ ಅವರ ಪ್ರಶ್ನೆಗೆ ಉತ್ತರಿಸುತ್ತಿದ್ದ ಸಚಿವರು ‘ಆಲಮಟ್ಟಿ ಜಲಾಶಯದ ಮೊದಲನೇ ಹಂತದ ಅಣೆ ಎತ್ತರವನ್ನು ಮಂಜೂರಾತಿ ಪ್ರಕಾರ ಹೆಚ್ಚಿಸುವ ಬಗ್ಗೆ ಆಂಧ್ರದ ಹೈಕೋರ್ಟಿನಿಂದ ತಡೆ ಆಜ್ಞೆ ಇಲ್ಲ. ಎರಡನೇ ಹಂತದ ಅಣೆಕಟ್ಟೆಯ ಎತ್ತರ ಹೆಚ್ಚಿಸುವುದಕ್ಕೆ ತಡೆ ಆಜ್ಞೆ ಇದೆ. ಈ ವಿವಾದ ಮತ್ತೆ ಆಗಸ್ಟ್ 21ರಂದು ವಿಚಾರಣೆಗೆ ಬರುತ್ತಿದ್ದು, ಕರ್ನಾಟಕದ ನಿಲುವನ್ನು ವಿವರವಾಗಿ ಮಂಡಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು, ಆಗಸ್ಟ್ 1– ಆಲಮಟ್ಟಿ ಅಣೆಕಟ್ಟೆ ವಿವಾದ ಕುರಿತಂತೆ ದೆಹಲಿಯಲ್ಲಿ ಆಗಸ್ಟ್ 6ರಂದು ನಡೆಯಲಿರುವ ಮುಖ್ಯಮಂತ್ರಿಗಳ ಸಭೆಯಲ್ಲಿ ಜೆ.ಎಚ್. ಪಟೇಲ್ ಅವರ ಜತೆ ತಾವು ಉಪ ಮುಖ್ಯಮಂತ್ರಿ ಹಾಗೂ ಕಾನೂನು ಸಚಿವರು ಭಾಗವಹಿಸಲಿರುವುದಾಗಿ ಭಾರೀ ನೀರಾವರಿ ಸಚಿವರ ಕೆ.ಎನ್. ನಾಗೇಗೌಡ ಇಂದು ವಿಧಾನಪರಿಷತ್ತಿನಲ್ಲಿ ಹೇಳಿದರು.</p>.<p>ಕೃಷ್ಣಾ ನದಿ ವಿವಾದದ ಬಗ್ಗೆ ಆಂಧ್ರದ ಹೈಕೋರ್ಟಿನಲ್ಲಿ ಆಗಸ್ಟ್ 21ರಂದು ನಡೆಯುವ ವಿಚಾರಣೆ ದಿನ ಹಾಜರಾಗಿ ನ್ಯಾಯಾಲಯದ ವ್ಯಾಪ್ತಿ ಕುರಿತು ಪ್ರಶ್ನಿಸುವುದಾಗಿ ಅವರು ಪ್ರಕಟಿಸಿದರು.</p>.<p>ಜನತಾ ದಳದ ಮಹದೇವ ಬಣಕಾರ್ ಅವರ ಪ್ರಶ್ನೆಗೆ ಉತ್ತರಿಸುತ್ತಿದ್ದ ಸಚಿವರು ‘ಆಲಮಟ್ಟಿ ಜಲಾಶಯದ ಮೊದಲನೇ ಹಂತದ ಅಣೆ ಎತ್ತರವನ್ನು ಮಂಜೂರಾತಿ ಪ್ರಕಾರ ಹೆಚ್ಚಿಸುವ ಬಗ್ಗೆ ಆಂಧ್ರದ ಹೈಕೋರ್ಟಿನಿಂದ ತಡೆ ಆಜ್ಞೆ ಇಲ್ಲ. ಎರಡನೇ ಹಂತದ ಅಣೆಕಟ್ಟೆಯ ಎತ್ತರ ಹೆಚ್ಚಿಸುವುದಕ್ಕೆ ತಡೆ ಆಜ್ಞೆ ಇದೆ. ಈ ವಿವಾದ ಮತ್ತೆ ಆಗಸ್ಟ್ 21ರಂದು ವಿಚಾರಣೆಗೆ ಬರುತ್ತಿದ್ದು, ಕರ್ನಾಟಕದ ನಿಲುವನ್ನು ವಿವರವಾಗಿ ಮಂಡಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>