ಜನತಾ ದಳದ ಮಹದೇವ ಬಣಕಾರ್ ಅವರ ಪ್ರಶ್ನೆಗೆ ಉತ್ತರಿಸುತ್ತಿದ್ದ ಸಚಿವರು ‘ಆಲಮಟ್ಟಿ ಜಲಾಶಯದ ಮೊದಲನೇ ಹಂತದ ಅಣೆ ಎತ್ತರವನ್ನು ಮಂಜೂರಾತಿ ಪ್ರಕಾರ ಹೆಚ್ಚಿಸುವ ಬಗ್ಗೆ ಆಂಧ್ರದ ಹೈಕೋರ್ಟಿನಿಂದ ತಡೆ ಆಜ್ಞೆ ಇಲ್ಲ. ಎರಡನೇ ಹಂತದ ಅಣೆಕಟ್ಟೆಯ ಎತ್ತರ ಹೆಚ್ಚಿಸುವುದಕ್ಕೆ ತಡೆ ಆಜ್ಞೆ ಇದೆ. ಈ ವಿವಾದ ಮತ್ತೆ ಆಗಸ್ಟ್ 21ರಂದು ವಿಚಾರಣೆಗೆ ಬರುತ್ತಿದ್ದು, ಕರ್ನಾಟಕದ ನಿಲುವನ್ನು ವಿವರವಾಗಿ ಮಂಡಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದರು.