<p><strong>ಸೋಮವಾರ 31 ಆಗಸ್ಟ್ 1998</strong></p>.<h2>ಬೆಳೆವಿಮೆ ವ್ಯಾಪ್ತಿ ಹೆಚ್ಚಳ: ಯಶವಂತ ಸಿನ್ಹಾ ಪ್ರಕಟಣೆ</h2>.<p><strong>ಹೈದರಾಬಾದ್, ಆ.30 (ಯುಎನ್ಐ)–</strong> ಕೃಷಿಕರಿಗೆ ಅನುಕೂಲ ಕಲ್ಪಿಸುವ ನೂತನ ಬೆಳೆವಿಮೆ ಯೋಜನೆಯನ್ನು ಇನ್ನೆರಡು ತಿಂಗಳಲ್ಲಿ ಜಾರಿಗೆ ತರಲಾಗುವುದು ಎಂದು ಹಣಕಾಸು ಸಚಿವ ಯಶವಂತ ಸಿನ್ಹಾ ಇಂದು ಇಲ್ಲಿ ಪ್ರಕಟಿಸಿದರು.</p>.<p>ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿತ್ತಿದ್ದ ಅವರು ‘ಈ ಸಂಬಂಧ ಹಣಕಾಸು ಸಚಿವಾಲಯವು ಕೃಷಿ ಸಚಿವಾಲಯ ವಿಮಾ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸುತ್ತಿದೆ. ಸದ್ಯದ ಬೆಳೆ ವಿಮೆಯು ದೇಶದ 24 ಜಿಲ್ಲೆಗಳಿಗೆ ಅನ್ವಯವಾಗುತ್ತಿದ್ದು, ಹೊಸ ವಿಮೆ ಈ ವ್ಯಾಪ್ತಿಯನ್ನು ಇನ್ನಷ್ಟು ಹೆಚ್ಚಿಸಲಿದೆ’ ಎಂದರು.</p>.<p>ಅಲ್ಲದೆ, ಪ್ರಸ್ತುತ ವಿಮಾ ಸೌಲಭ್ಯವು ಸಾಲ ಪಡೆದ ರೈತರಿಗೆ ಮಾತ್ರ ಪ್ರಯೋಜನಕಾರಿಯಾಗಿದೆ. ಉದ್ದೇಶಿತ ನೂತನ ಬೆಳೆ ವಿಮೆಯು ಎಲ್ಲ ರೈತರು ವರ್ಷದಲ್ಲಿ ಬೆಳೆಯುವ ಎರಡು ಮುಖ್ಯ ಬೆಳೆಗಳಿಗೆ ಸಹಾಯಹಸ್ತ ನೀಡಲಿದೆ ಎಂದರು. </p>.<h2>ನಿಗಮ, ಮಂಡಲಿ ಪುನರ್ರಚನೆ ತಂದ ಅತೃಪ್ತಿ</h2>.<p><strong>ಬೆಂಗಳೂರು, ಆ.30–</strong> ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ರಾಜ್ಯದ ವಿವಿಧ ನಿಗಮ– ಮಂಡಲಿಗಳ ಪುನರ್ರಚನೆ ಕಾರ್ಯ, ಶನಿವಾರ ಕೊನೆಗೂ ಪೂರ್ಣಗೊಂಡಿತಾದರೂ ಇದು ಆಡಳಿತಾರೂಢ ಜನತಾ ದಳದ ಶಾಸಕರು ಮತ್ತು ಕಾರ್ಯಕರ್ತರಲ್ಲಿ ಸಮಾಧಾನಕ್ಕಿಂತಲೂ ಹೆಚ್ಚಾಗಿ ಅಸಮಾಧಾನವನ್ನೇ ಹುಟ್ಟಿಸಿದೆ.</p>.<p>ರಾಜ್ಯದಲ್ಲಿ ಒಟ್ಟು 109 ನಿಗಮ– ಮಂಡಲಿಗಳು, ಅಭಿವೃದ್ಧಿ ಪ್ರಾಧಿಕಾರಗಳಿದ್ದು ಅವುಗಳ ಪೈಕಿ 24 ಸಂಸ್ಥೆಗಳಿಗೆ ಪಕ್ಷದ ಶಾಸಕರನ್ನು ಹಾಗೂ ಉಳಿದ 85 ಸಂಸ್ಥೆಗಳಿಗೆ ಪಕ್ಷದ ಹಿರಿಯ ಕಾರ್ಯಕರ್ತರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.</p>.<p>ಹೀಗೆ ಒಟ್ಟು 681 ಜನರಿಗೆ ಒಂದಲ್ಲಾ ಒಂದು ರೀತಿಯ ಅಧಿಕಾರ ಸ್ಥಾನ ದೊರೆತಿದೆ. ಆದರೆ ಅಧಿಕಾರ ಸ್ಥಾನಗಳಿಗಾಗಿ ‘ಹೋರಾಟ’ ನಡೆಸಿದರೂ ಯಾವುದೇ ಫಲ ಸಿಗದೆ ಹತಾಶರಾದವರ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸೋಮವಾರ 31 ಆಗಸ್ಟ್ 1998</strong></p>.<h2>ಬೆಳೆವಿಮೆ ವ್ಯಾಪ್ತಿ ಹೆಚ್ಚಳ: ಯಶವಂತ ಸಿನ್ಹಾ ಪ್ರಕಟಣೆ</h2>.<p><strong>ಹೈದರಾಬಾದ್, ಆ.30 (ಯುಎನ್ಐ)–</strong> ಕೃಷಿಕರಿಗೆ ಅನುಕೂಲ ಕಲ್ಪಿಸುವ ನೂತನ ಬೆಳೆವಿಮೆ ಯೋಜನೆಯನ್ನು ಇನ್ನೆರಡು ತಿಂಗಳಲ್ಲಿ ಜಾರಿಗೆ ತರಲಾಗುವುದು ಎಂದು ಹಣಕಾಸು ಸಚಿವ ಯಶವಂತ ಸಿನ್ಹಾ ಇಂದು ಇಲ್ಲಿ ಪ್ರಕಟಿಸಿದರು.</p>.<p>ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿತ್ತಿದ್ದ ಅವರು ‘ಈ ಸಂಬಂಧ ಹಣಕಾಸು ಸಚಿವಾಲಯವು ಕೃಷಿ ಸಚಿವಾಲಯ ವಿಮಾ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸುತ್ತಿದೆ. ಸದ್ಯದ ಬೆಳೆ ವಿಮೆಯು ದೇಶದ 24 ಜಿಲ್ಲೆಗಳಿಗೆ ಅನ್ವಯವಾಗುತ್ತಿದ್ದು, ಹೊಸ ವಿಮೆ ಈ ವ್ಯಾಪ್ತಿಯನ್ನು ಇನ್ನಷ್ಟು ಹೆಚ್ಚಿಸಲಿದೆ’ ಎಂದರು.</p>.<p>ಅಲ್ಲದೆ, ಪ್ರಸ್ತುತ ವಿಮಾ ಸೌಲಭ್ಯವು ಸಾಲ ಪಡೆದ ರೈತರಿಗೆ ಮಾತ್ರ ಪ್ರಯೋಜನಕಾರಿಯಾಗಿದೆ. ಉದ್ದೇಶಿತ ನೂತನ ಬೆಳೆ ವಿಮೆಯು ಎಲ್ಲ ರೈತರು ವರ್ಷದಲ್ಲಿ ಬೆಳೆಯುವ ಎರಡು ಮುಖ್ಯ ಬೆಳೆಗಳಿಗೆ ಸಹಾಯಹಸ್ತ ನೀಡಲಿದೆ ಎಂದರು. </p>.<h2>ನಿಗಮ, ಮಂಡಲಿ ಪುನರ್ರಚನೆ ತಂದ ಅತೃಪ್ತಿ</h2>.<p><strong>ಬೆಂಗಳೂರು, ಆ.30–</strong> ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ರಾಜ್ಯದ ವಿವಿಧ ನಿಗಮ– ಮಂಡಲಿಗಳ ಪುನರ್ರಚನೆ ಕಾರ್ಯ, ಶನಿವಾರ ಕೊನೆಗೂ ಪೂರ್ಣಗೊಂಡಿತಾದರೂ ಇದು ಆಡಳಿತಾರೂಢ ಜನತಾ ದಳದ ಶಾಸಕರು ಮತ್ತು ಕಾರ್ಯಕರ್ತರಲ್ಲಿ ಸಮಾಧಾನಕ್ಕಿಂತಲೂ ಹೆಚ್ಚಾಗಿ ಅಸಮಾಧಾನವನ್ನೇ ಹುಟ್ಟಿಸಿದೆ.</p>.<p>ರಾಜ್ಯದಲ್ಲಿ ಒಟ್ಟು 109 ನಿಗಮ– ಮಂಡಲಿಗಳು, ಅಭಿವೃದ್ಧಿ ಪ್ರಾಧಿಕಾರಗಳಿದ್ದು ಅವುಗಳ ಪೈಕಿ 24 ಸಂಸ್ಥೆಗಳಿಗೆ ಪಕ್ಷದ ಶಾಸಕರನ್ನು ಹಾಗೂ ಉಳಿದ 85 ಸಂಸ್ಥೆಗಳಿಗೆ ಪಕ್ಷದ ಹಿರಿಯ ಕಾರ್ಯಕರ್ತರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.</p>.<p>ಹೀಗೆ ಒಟ್ಟು 681 ಜನರಿಗೆ ಒಂದಲ್ಲಾ ಒಂದು ರೀತಿಯ ಅಧಿಕಾರ ಸ್ಥಾನ ದೊರೆತಿದೆ. ಆದರೆ ಅಧಿಕಾರ ಸ್ಥಾನಗಳಿಗಾಗಿ ‘ಹೋರಾಟ’ ನಡೆಸಿದರೂ ಯಾವುದೇ ಫಲ ಸಿಗದೆ ಹತಾಶರಾದವರ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>