<p><strong>ಕೊಲೊನ್, ಜೂನ್ 20 (ಯುಎನ್ಐ, ಪಿಟಿಐ)–</strong> ಕಾಶ್ಮೀರ ಪ್ರದೇಶದಲ್ಲಿ ಪಾಕಿಸ್ತಾನ ಸೈನ್ಯ ಮತ್ತು ಬಾಡಿಗೆ ಉಗ್ರಗಾಮಿಗಳು ಭಾರತದ ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್ಓಸಿ) ಉಲ್ಲಂಘಿಸಿರುವುದನ್ನು ಇಲ್ಲಿ ನಡೆಯುತ್ತಿರುವ ಜಿ–8 ರಾಷ್ಟ್ರಗಳ ಶೃಂಗಸಭೆ ತೀವ್ರವಾಗಿ ಖಂಡಿಸಿದೆ.</p><p>‘ಗಡಿ ಪ್ರದೇಶದಲ್ಲಿನ ವಾಸ್ತವ ಪರಿಸ್ಥಿತಿ ಯನ್ನು ಸೈನಿಕ ಕಾರ್ಯಾಚರಣೆ ಮೂಲಕ ಬದಲಾಯಿಸಲು ನಡೆಸುವ ಕೃತ್ಯ ಹೊಣೆಗೇಡಿತನದ್ದು’ ಎಂದು ಸಿದ್ಧಪಡಿಸಿರುವ ಕರಡು ಹೇಳಿಕೆಯಲ್ಲಿ ತೀಕ್ಷ್ಣವಾಗಿ ಟೀಕಿಸಲಾಗಿದೆ.</p><p>ಕಾರ್ಗಿಲ್ ಬಿಕ್ಕಟ್ಟಿಗೆ ಪಾಕಿಸ್ತಾನವೇ ಹೊಣೆ ಎಂದು ಜಿ–8 ರಾಷ್ಟ್ರಗಳು ಆರೋಪಿಸಿರುವುದರಿಂದ ಭಾರತಕ್ಕೆ ರಾಜತಾಂತ್ರಿಕ ಗೆಲುವು ದೊರೆತಂತಾಗಿದೆ. ಭಾರತದ ಜೊತೆಗಿನ ತನ್ನ ವಿವಾದವನ್ನು ಪರಿಹರಿಸಲು ಮಧ್ಯ ಪ್ರವೇಶಿಸುವಂತೆ ಜಿ–8 ರಾಷ್ಟ್ರಗಳಿಗೆ ಮನವಿ ಮಾಡಿದ ಪಾಕಿಸ್ತಾನಕ್ಕೆ ಈ ಹೇಳಿಕೆಯಿಂದ ಮುಖಭಂಗವಾದಂತಾಗಿದೆ.</p><p><strong>ಕೃಷ್ಣಾ ನದಿ ನೀರಿನ ಬಳಕೆ ಗಡುವು ವಿಸ್ತರಣೆಗೆ ಅರ್ಜಿ</strong></p><p><strong>ಕಲ್ಬುರ್ಗಿ, ಜೂನ್ 20–</strong> ಕೃಷ್ಣಾ ನೀರನ್ನು 2000ನೇ ಇಸ್ವಿ ಮೇ 31ರೊಳಗೆ ಬಳಸಿಕೊಳ್ಳಬೇಕೆಂಬ ಬಚಾವತ್ ಆಯೋಗದ ತೀರ್ಪಿನ ಗಡುವನ್ನು ವಿಸ್ತರಿಸಬೇಕೆಂದು ಕೋರಿ ಕರ್ನಾಟಕ ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಲಿದೆ ಎಂದು ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರು ಇಂದು ತಿಳಿಸಿದರು.</p><p>ಬಚಾವತ್ ಆಯೋಗದ ತೀರ್ಪಿನಂತೆ ರಾಜ್ಯ ತನ್ನ ಪಾಲಿನ ನೀರನ್ನು ಗಡುವಿನ ಅವಧಿಯೊಳಗೆ ಬಳಸಿಕೊಳ್ಳಲು ಸಾಧ್ಯವಾಗದಿದ್ದರೆ, 2000ನೇ ಇಸ್ವಿ ನಂತರವೂ ಸುಪ್ರೀಂ ಕೋರ್ಟ್ನಲ್ಲಿ ಕಾನೂನು ಸಮರ ನಡೆಸಲಿದೆ ಎಂದು ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಲೊನ್, ಜೂನ್ 20 (ಯುಎನ್ಐ, ಪಿಟಿಐ)–</strong> ಕಾಶ್ಮೀರ ಪ್ರದೇಶದಲ್ಲಿ ಪಾಕಿಸ್ತಾನ ಸೈನ್ಯ ಮತ್ತು ಬಾಡಿಗೆ ಉಗ್ರಗಾಮಿಗಳು ಭಾರತದ ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್ಓಸಿ) ಉಲ್ಲಂಘಿಸಿರುವುದನ್ನು ಇಲ್ಲಿ ನಡೆಯುತ್ತಿರುವ ಜಿ–8 ರಾಷ್ಟ್ರಗಳ ಶೃಂಗಸಭೆ ತೀವ್ರವಾಗಿ ಖಂಡಿಸಿದೆ.</p><p>‘ಗಡಿ ಪ್ರದೇಶದಲ್ಲಿನ ವಾಸ್ತವ ಪರಿಸ್ಥಿತಿ ಯನ್ನು ಸೈನಿಕ ಕಾರ್ಯಾಚರಣೆ ಮೂಲಕ ಬದಲಾಯಿಸಲು ನಡೆಸುವ ಕೃತ್ಯ ಹೊಣೆಗೇಡಿತನದ್ದು’ ಎಂದು ಸಿದ್ಧಪಡಿಸಿರುವ ಕರಡು ಹೇಳಿಕೆಯಲ್ಲಿ ತೀಕ್ಷ್ಣವಾಗಿ ಟೀಕಿಸಲಾಗಿದೆ.</p><p>ಕಾರ್ಗಿಲ್ ಬಿಕ್ಕಟ್ಟಿಗೆ ಪಾಕಿಸ್ತಾನವೇ ಹೊಣೆ ಎಂದು ಜಿ–8 ರಾಷ್ಟ್ರಗಳು ಆರೋಪಿಸಿರುವುದರಿಂದ ಭಾರತಕ್ಕೆ ರಾಜತಾಂತ್ರಿಕ ಗೆಲುವು ದೊರೆತಂತಾಗಿದೆ. ಭಾರತದ ಜೊತೆಗಿನ ತನ್ನ ವಿವಾದವನ್ನು ಪರಿಹರಿಸಲು ಮಧ್ಯ ಪ್ರವೇಶಿಸುವಂತೆ ಜಿ–8 ರಾಷ್ಟ್ರಗಳಿಗೆ ಮನವಿ ಮಾಡಿದ ಪಾಕಿಸ್ತಾನಕ್ಕೆ ಈ ಹೇಳಿಕೆಯಿಂದ ಮುಖಭಂಗವಾದಂತಾಗಿದೆ.</p><p><strong>ಕೃಷ್ಣಾ ನದಿ ನೀರಿನ ಬಳಕೆ ಗಡುವು ವಿಸ್ತರಣೆಗೆ ಅರ್ಜಿ</strong></p><p><strong>ಕಲ್ಬುರ್ಗಿ, ಜೂನ್ 20–</strong> ಕೃಷ್ಣಾ ನೀರನ್ನು 2000ನೇ ಇಸ್ವಿ ಮೇ 31ರೊಳಗೆ ಬಳಸಿಕೊಳ್ಳಬೇಕೆಂಬ ಬಚಾವತ್ ಆಯೋಗದ ತೀರ್ಪಿನ ಗಡುವನ್ನು ವಿಸ್ತರಿಸಬೇಕೆಂದು ಕೋರಿ ಕರ್ನಾಟಕ ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಲಿದೆ ಎಂದು ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರು ಇಂದು ತಿಳಿಸಿದರು.</p><p>ಬಚಾವತ್ ಆಯೋಗದ ತೀರ್ಪಿನಂತೆ ರಾಜ್ಯ ತನ್ನ ಪಾಲಿನ ನೀರನ್ನು ಗಡುವಿನ ಅವಧಿಯೊಳಗೆ ಬಳಸಿಕೊಳ್ಳಲು ಸಾಧ್ಯವಾಗದಿದ್ದರೆ, 2000ನೇ ಇಸ್ವಿ ನಂತರವೂ ಸುಪ್ರೀಂ ಕೋರ್ಟ್ನಲ್ಲಿ ಕಾನೂನು ಸಮರ ನಡೆಸಲಿದೆ ಎಂದು ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>