<p><strong>ಪಟೇಲ್ ನಾಯಕತ್ವಕ್ಕೆ ಧಕ್ಕೆ ಇಲ್ಲ: ಎಚ್.ಡಿ. ದೇವೇಗೌಡ<br />ಬೆಂಗಳೂರು, ನ. 10–</strong> ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಆಡಳಿತದ ಬಗೆಗೆ ಅತೃಪ್ತಿ ತಳೆದಿರುವ ಶಾಸಕರು ತಮ್ಮ ಅಳಲನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಸಮ್ಮುಖದಲ್ಲಿ ಇಂದು ಮತ್ತೆ ತೋಡಿಕೊಂಡರು. ಆದರೂ ‘ಇದರಿಂದ ಪಟೇಲ್ ಸರ್ಕಾರಕ್ಕೆ ಯಾವ ಧಕ್ಕೆ ಅಥವಾ ಬೆದರಿಕೆಯೂ ಇಲ್ಲ’ ಎಂದು ದೇವೇಗೌಡರು ಸ್ಪಷ್ಟಪಡಿಸಿದರು.</p>.<p>ಸಭೆಯ ನಂತರ ಹೊರ ಬಂದು ಪತ್ರಕರ್ತ ರೊಂದಿಗೆ ಮಾತನಾಡಿದ ದೇವೇಗೌಡ ಅವರು ‘ಪಕ್ಷದವರಲ್ಲಿನ ಭಿನ್ನಾಭಿಪ್ರಾಯಗಳು ಪಟೇಲ್ ನೇತೃತ್ವದ ಸರ್ಕಾರಕ್ಕೆ ಯಾವುದೇ ಬೆದರಿಕೆಯನ್ನು ಒಡ್ಡಿಲ್ಲ ಅಥವಾ ನಾಯಕತ್ವದ ಬದಲಾವಣೆಯ ಪ್ರಶ್ನೆಯೇ ಉದ್ಭವಿಸುವು<br />ದಿಲ್ಲ. ಈ ಎಲ್ಲ ಬೆಳವಣಿಗೆಗಳು ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರದು’ ಎಂದರು.</p>.<p><strong>ಪಕ್ಷಾಂತರ ನಿಷೇಧ ಕಾಯಿದೆ: ಸಮಗ್ರ ತಿದ್ದುಪಡಿಗೆ ಒಲವು<br />ನವದೆಹಲಿ, ನ. 10 (ಪಿಟಿಐ)–</strong> ಪಕ್ಷಾಂತರ ನಿಷೇಧ ಕಾಯಿದೆಗೆ ಸಮಗ್ರ ತಿದ್ದುಪಡಿಯ ಅಗತ್ಯವಿದೆ ಎಂಬುದನ್ನು ಬಹುತೇಕ ರಾಜಕೀಯ ಪಕ್ಷಗಳು ಒಪ್ಪಿಕೊಂಡಿವೆ. ಆದರೆ ಇದು ಸಣ್ಣಪುಟ್ಟ ತಿದ್ದುಪಡಿಗಷ್ಟೇ ಮೀಸ ಲಾಗಿರದೇ ಸಮಗ್ರ ತಿದ್ದುಪಡಿಯಾಗಬೇಕು ಎಂಬುದನ್ನು ಅವು ಒತ್ತಿ ಹೇಳಿವೆ.</p>.<p>ಇಂದು ಪ್ರಧಾನಿ ಐ.ಕೆ. ಗುಜ್ರಾಲ್ ಅವರ ನಿವಾಸದಲ್ಲಿ ನಡೆದ ಸರ್ವ ಪಕ್ಷಗಳ ಸಭೆಯಲ್ಲಿ ವಿಷಯದ ಬಗ್ಗೆ ಬಹುತೇಕ ಒಮ್ಮತದ ಅಭಿಪ್ರಾಯ ಮೂಡಿಬಂತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಟೇಲ್ ನಾಯಕತ್ವಕ್ಕೆ ಧಕ್ಕೆ ಇಲ್ಲ: ಎಚ್.ಡಿ. ದೇವೇಗೌಡ<br />ಬೆಂಗಳೂರು, ನ. 10–</strong> ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಆಡಳಿತದ ಬಗೆಗೆ ಅತೃಪ್ತಿ ತಳೆದಿರುವ ಶಾಸಕರು ತಮ್ಮ ಅಳಲನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಸಮ್ಮುಖದಲ್ಲಿ ಇಂದು ಮತ್ತೆ ತೋಡಿಕೊಂಡರು. ಆದರೂ ‘ಇದರಿಂದ ಪಟೇಲ್ ಸರ್ಕಾರಕ್ಕೆ ಯಾವ ಧಕ್ಕೆ ಅಥವಾ ಬೆದರಿಕೆಯೂ ಇಲ್ಲ’ ಎಂದು ದೇವೇಗೌಡರು ಸ್ಪಷ್ಟಪಡಿಸಿದರು.</p>.<p>ಸಭೆಯ ನಂತರ ಹೊರ ಬಂದು ಪತ್ರಕರ್ತ ರೊಂದಿಗೆ ಮಾತನಾಡಿದ ದೇವೇಗೌಡ ಅವರು ‘ಪಕ್ಷದವರಲ್ಲಿನ ಭಿನ್ನಾಭಿಪ್ರಾಯಗಳು ಪಟೇಲ್ ನೇತೃತ್ವದ ಸರ್ಕಾರಕ್ಕೆ ಯಾವುದೇ ಬೆದರಿಕೆಯನ್ನು ಒಡ್ಡಿಲ್ಲ ಅಥವಾ ನಾಯಕತ್ವದ ಬದಲಾವಣೆಯ ಪ್ರಶ್ನೆಯೇ ಉದ್ಭವಿಸುವು<br />ದಿಲ್ಲ. ಈ ಎಲ್ಲ ಬೆಳವಣಿಗೆಗಳು ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರದು’ ಎಂದರು.</p>.<p><strong>ಪಕ್ಷಾಂತರ ನಿಷೇಧ ಕಾಯಿದೆ: ಸಮಗ್ರ ತಿದ್ದುಪಡಿಗೆ ಒಲವು<br />ನವದೆಹಲಿ, ನ. 10 (ಪಿಟಿಐ)–</strong> ಪಕ್ಷಾಂತರ ನಿಷೇಧ ಕಾಯಿದೆಗೆ ಸಮಗ್ರ ತಿದ್ದುಪಡಿಯ ಅಗತ್ಯವಿದೆ ಎಂಬುದನ್ನು ಬಹುತೇಕ ರಾಜಕೀಯ ಪಕ್ಷಗಳು ಒಪ್ಪಿಕೊಂಡಿವೆ. ಆದರೆ ಇದು ಸಣ್ಣಪುಟ್ಟ ತಿದ್ದುಪಡಿಗಷ್ಟೇ ಮೀಸ ಲಾಗಿರದೇ ಸಮಗ್ರ ತಿದ್ದುಪಡಿಯಾಗಬೇಕು ಎಂಬುದನ್ನು ಅವು ಒತ್ತಿ ಹೇಳಿವೆ.</p>.<p>ಇಂದು ಪ್ರಧಾನಿ ಐ.ಕೆ. ಗುಜ್ರಾಲ್ ಅವರ ನಿವಾಸದಲ್ಲಿ ನಡೆದ ಸರ್ವ ಪಕ್ಷಗಳ ಸಭೆಯಲ್ಲಿ ವಿಷಯದ ಬಗ್ಗೆ ಬಹುತೇಕ ಒಮ್ಮತದ ಅಭಿಪ್ರಾಯ ಮೂಡಿಬಂತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>