ಸರ್ಕಾರ ರಚಿಸುವ ಸಾಧ್ಯತೆಗಳ ರಹಸ್ಯ ಮಾತುಕತೆಗಳು, ಪ್ರಧಾನಿ ಅವರಿಗಾರಲಿ, ಕೇಂದ್ರ ಗೂಢಚರ್ಯ ಸಂಸ್ಥೆಗಾಗಲಿ ಇಲ್ಲವೇ ಸುದ್ದಿಯ ವಾಸನೆ ಹಿಡಿಯುವ ಮಾಧ್ಯಮಗಳಿಗಾಗಲಿ ಬುಧವಾರ ಮಧ್ಯಾಹ್ನ ಬಿಜೆಪಿ ವಕ್ತಾರರು ಪ್ರಕಟಿಸುವವರೆವಿಗೂ ತಿಳಿಯದೆ ಅಚ್ಚರಿ ಹುಟ್ಟಿಸಿತು. ದೆಹಲಿಯ ಕೇರಳ ಮೂಲದ ಹಿರಿಯ ಪತ್ರಕರ್ತರೊಬ್ಬರ ಮಗಳ ವಿವಾಹ ಕಳೆದ ತಿಂಗಳ 28ರಂದು ಚೆನ್ನೈನಲ್ಲಿ ನೆರವೇರಿತು. ಈ ವಿವಾಹಕ್ಕೆ ಬಿಜೆಪಿಯ ಅಧ್ಯಕ್ಷ ಎಲ್.ಕೆ. ಅಡ್ವಾಣಿ ಮತ್ತು ಬಿಎಸ್ಪಿಯ ನಾಯಕ ಕಾನ್ಷಿರಾಂ ಹೋಗಿದ್ದಾಗ, ಅಲ್ಲಿ ಮತ್ತೆ ಉತ್ತರ ಪ್ರದೇಶದ ಸಮಸ್ಯೆಯನ್ನು ಈ ಇಬ್ಬರು ನಾಯಕರು ಪರಸ್ಪರ ಚರ್ಚಿಸಿದ್ದೇ ಮುಂದೆ ದೆಹಲಿಯಲ್ಲಿ ಮತ್ತಷ್ಟು ಮಾತುಕತೆಗೆ ಅವಕಾಶ ಒದಗಿಸಿತು ಎಂಬುದಾಗಿ ಬಿಜೆಪಿಯ ನಂಬಲರ್ಹವಾದ ಮೂಲಗಳು ಹೇಳುತ್ತಿವೆ.