ಬೆಂಗಳೂರು, ಮಾ. 23– ಆಲಮಟ್ಟಿ ಅಣೆಕಟ್ಟೆ ವಿಚಾರದಲ್ಲಿ ಬಚಾವತ್ ನ್ಯಾಯಮಂಡಳಿ ಈಗಾಗಲೇ ನೀಡಿರುವ ತೀರ್ಪಿಗೆ ಆಂಧ್ರಪ್ರದೇಶ ಮತ್ತು ಕರ್ನಾಟಕ ರಾಜ್ಯಗಳು ಎರಡೂ ಬದ್ಧವಾಗಿವೆ. ಅದರಲ್ಲಿ ಸರಿ ತಪ್ಪುಗಳ ಏನೇ ಭಾವನೆಗಳಿದ್ದರೂ ಎರಡೂ ರಾಜ್ಯಗಳ ಮುಖಂಡರು ಪರಸ್ಪರ ಚರ್ಚೆ ಮೂಲಕವೇ ಇತ್ಯರ್ಥ ಮಾಡಿಕೊಳ್ಳಬೇಕು ಎಂದು ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಇಂದು ಇಲ್ಲಿ ಸೂಚಿಸಿದರು.