<p><strong>ಅಧ್ಯಕ್ಷೀಯ ಮಾದರಿ ಆಡಳಿತ: ಶೇಷನ್ ಒಲವು<br />ಹೈದರಾಬಾದ್, ಡಿ. 17 (ಪಿಟಿಐ)– </strong>ದೇಶದಲ್ಲಿ ಅಧ್ಯಕ್ಷೀಯ ಮಾದರಿಯ ಆಡಳಿತವನ್ನು ಜಾರಿಗೆ ತರಬೇಕು ಎಂದು ಮುಖ್ಯ ಚುನಾವಣಾ ಅಧಿಕಾರಿ ಟಿ.ಎನ್.ಶೇಷನ್ ಅವರು ಒಲವು ವ್ಯಕ್ತಪಡಿಸಿದ್ದಾರೆ.</p>.<p>ಐಎಎಸ್ ಅಧಿಕಾರಿಗಳ ಸಂಖ್ಯೆಯನ್ನು 50 ಶೇಕಡಾದಷ್ಟು ಕಡಿಮೆ ಮಾಡುವುದು ಹಾಗೂ ರಾಷ್ಟ್ರೀಯ ಚಟುವಟಿಕೆಯ ಪ್ರಮುಖ ಕ್ಷೇತ್ರಗಳ ಮೇಲ್ವಿಚಾರಣೆಗೆ ಸ್ವತಂತ್ರ ಆಯೋಗಗಳ ರಚನೆ– ಶೇಷನ್ ಅವರು ಮುಂದಿಟ್ಟಿರುವ ಇನ್ನೆರಡು ವಿಚಾರಗಳು.</p>.<p>ಮುಂದಿನ ವಾರ ಮಾರುಕಟ್ಟೆಗೆ ಬರಲಿರುವ ಶೇಷನ್ ಅವರ ಪುಸ್ತಕ ‘ಡಿಜನರೇಷನ್ ಆಫ್ ಇಂಡಿಯಾ’ದಲ್ಲಿ ಈ ವಿಚಾರಗಳು ಪ್ರಕಟವಾಗಲಿವೆ.</p>.<p><strong>ಟೆಲಿಕಾಂ ವೈಫಲ್ಯಕ್ಕೆ ಸಂಸತ್ ಸಮಿತಿ ಟೀಕೆ<br />ನವದೆಹಲಿ, ಡಿ. 17 (ಪಿಟಿಐ)–</strong> ದೂರವಾಣಿ ಸೌಲಭ್ಯಗಳ ಬಳಕೆಯಲ್ಲಿನ ವೈಫಲ್ಯ ಮತ್ತು ದೂರಸಂಪರ್ಕ ವಲಯಗಳಿಗೆ ದತ್ತ ಅಧಿಕಾರಗಳನ್ನು ನೀಡದಿರುವ ಬಗ್ಗೆ ಸಂಸತ್ತಿನ ಸ್ಥಾಯಿ ಸಮಿತಿಯು ಸಂಪರ್ಕ ಸಚಿವಾಲಯವನ್ನು ತರಾಟೆಗೆ ತೆಗೆದುಕೊಂಡಿದೆ.<br />ದೂರಸಂಪರ್ಕ ಹಗರಣಕ್ಕೆ ಸಂಬಂಧಿಸಿ ಜಂಟಿ ಸಂಸದೀಯ ಸಮಿತಿ ರಚಿಸಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ವಾರದಿಂದ ಸಂಸತ್ತಿನ ಉಭಯ ಸದನಗಳ ಕಲಾಪವನ್ನು ನಡೆಯಲು ಬಿಡದ ಪ್ರತಿಪಕ್ಷಗಳ ಬತ್ತಳಿಕೆಗೆ ಈ ವರದಿ ಸರ್ಕಾರದ ವಿರುದ್ಧ ಮತ್ತೊಂದು ಅಸ್ತ್ರವನ್ನು ಒದಗಿಸಿದಂತಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಧ್ಯಕ್ಷೀಯ ಮಾದರಿ ಆಡಳಿತ: ಶೇಷನ್ ಒಲವು<br />ಹೈದರಾಬಾದ್, ಡಿ. 17 (ಪಿಟಿಐ)– </strong>ದೇಶದಲ್ಲಿ ಅಧ್ಯಕ್ಷೀಯ ಮಾದರಿಯ ಆಡಳಿತವನ್ನು ಜಾರಿಗೆ ತರಬೇಕು ಎಂದು ಮುಖ್ಯ ಚುನಾವಣಾ ಅಧಿಕಾರಿ ಟಿ.ಎನ್.ಶೇಷನ್ ಅವರು ಒಲವು ವ್ಯಕ್ತಪಡಿಸಿದ್ದಾರೆ.</p>.<p>ಐಎಎಸ್ ಅಧಿಕಾರಿಗಳ ಸಂಖ್ಯೆಯನ್ನು 50 ಶೇಕಡಾದಷ್ಟು ಕಡಿಮೆ ಮಾಡುವುದು ಹಾಗೂ ರಾಷ್ಟ್ರೀಯ ಚಟುವಟಿಕೆಯ ಪ್ರಮುಖ ಕ್ಷೇತ್ರಗಳ ಮೇಲ್ವಿಚಾರಣೆಗೆ ಸ್ವತಂತ್ರ ಆಯೋಗಗಳ ರಚನೆ– ಶೇಷನ್ ಅವರು ಮುಂದಿಟ್ಟಿರುವ ಇನ್ನೆರಡು ವಿಚಾರಗಳು.</p>.<p>ಮುಂದಿನ ವಾರ ಮಾರುಕಟ್ಟೆಗೆ ಬರಲಿರುವ ಶೇಷನ್ ಅವರ ಪುಸ್ತಕ ‘ಡಿಜನರೇಷನ್ ಆಫ್ ಇಂಡಿಯಾ’ದಲ್ಲಿ ಈ ವಿಚಾರಗಳು ಪ್ರಕಟವಾಗಲಿವೆ.</p>.<p><strong>ಟೆಲಿಕಾಂ ವೈಫಲ್ಯಕ್ಕೆ ಸಂಸತ್ ಸಮಿತಿ ಟೀಕೆ<br />ನವದೆಹಲಿ, ಡಿ. 17 (ಪಿಟಿಐ)–</strong> ದೂರವಾಣಿ ಸೌಲಭ್ಯಗಳ ಬಳಕೆಯಲ್ಲಿನ ವೈಫಲ್ಯ ಮತ್ತು ದೂರಸಂಪರ್ಕ ವಲಯಗಳಿಗೆ ದತ್ತ ಅಧಿಕಾರಗಳನ್ನು ನೀಡದಿರುವ ಬಗ್ಗೆ ಸಂಸತ್ತಿನ ಸ್ಥಾಯಿ ಸಮಿತಿಯು ಸಂಪರ್ಕ ಸಚಿವಾಲಯವನ್ನು ತರಾಟೆಗೆ ತೆಗೆದುಕೊಂಡಿದೆ.<br />ದೂರಸಂಪರ್ಕ ಹಗರಣಕ್ಕೆ ಸಂಬಂಧಿಸಿ ಜಂಟಿ ಸಂಸದೀಯ ಸಮಿತಿ ರಚಿಸಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ವಾರದಿಂದ ಸಂಸತ್ತಿನ ಉಭಯ ಸದನಗಳ ಕಲಾಪವನ್ನು ನಡೆಯಲು ಬಿಡದ ಪ್ರತಿಪಕ್ಷಗಳ ಬತ್ತಳಿಕೆಗೆ ಈ ವರದಿ ಸರ್ಕಾರದ ವಿರುದ್ಧ ಮತ್ತೊಂದು ಅಸ್ತ್ರವನ್ನು ಒದಗಿಸಿದಂತಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>