ಇಂದಿರಾ ಗಾಂಧಿ ಧೋರಣೆಗಳು ವಿಫಲ– ಎಸ್ಸೆನ್
ಬೆಂಗಳೂರು, ಮಾರ್ಚ್ 14– ‘ಜನತೆಗೆ ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಶ್ರೀಮತಿ ಇಂದಿರಾ ಗಾಂಧಿಯವರ ಧೋರಣೆಗಳು ವಿಫಲವಾಗಿವೆ’ ಎಂದು ಇಲ್ಲಿ ಕಟುವಾಗಿ ಟೀಕಿಸಿದ ಸಂಸ್ಥಾ ಕಾಂಗ್ರೆಸ್ ನಾಯಕ ಶ್ರೀ ಎಸ್. ನಿಜಲಿಂಗಪ್ಪ ಅವರು, ‘ತಮ್ಮ ಧೋರಣೆಗಳ ತಳಹದಿಯ ಮೇಲೆ ಮತ್ತೆ ಚುನಾವಣೆಗಳನ್ನು ಎದುರಿಸಲಿ’ ಎಂದು ಸವಾಲು ಹಾಕಿದರು.