<p><strong>ಪಾಕ್ಗೆ ಅಮೆರಿಕ ಶಸ್ತ್ರಾಸ್ತ್ರ ನೆರವು: ಭಾರತದ ಭದ್ರತೆಗೆ ಆತಂಕಕಾರಿ– ಸ್ವರಣಸಿಂಗ್<br />ನವದೆಹಲಿ, ಮಾರ್ಚ್ 14–</strong> ಮತ್ತೊಮ್ಮೆ ‘ಭಾರತದ ಭದ್ರತೆಗೆ ತೀವ್ರ ಗಂಡಾಂತರ’ ಒಡ್ಡುವಂತೆ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಸರಬ ರಾಜನ್ನು ಪುನರಾರಂಭಿಸುವ ಅಮೆರಿಕದ ಪ್ರಯತ್ನ ಕುರಿತು ವಿದೇಶಾಂಗ ಸಚಿವ ಸ್ವರಣ ಸಿಂಗ್ ಅವರು ಇಂದು ರಾಜ್ಯಸಭೆಯಲ್ಲಿ ಭಾರತದ ‘ಅಗಾಧ ಕಳವಳ’ ವ್ಯಕ್ತಪಡಿಸಿದರು.</p>.<p>ಈ ವಿಷಯದಲ್ಲಿ ಭಾರತದ ಅಭಿಪ್ರಾಯಗಳನ್ನು ಅಮೆರಿಕ ಸರ್ಕಾರಕ್ಕೆ ಆ ರಾಷ್ಟ್ರದ ಹೊಸ ರಾಯಭಾರಿ ಡೇನಿಯಲ್ ಪ್ಯಾಟ್ರಿಕ್ ಮೊಯ್ನಿಹಾನ್ ಅವರ ಮೂಲಕ ರವಾನಿಸುವುದಾಗಿ ಅವರು ತಿಳಿಸಿದರು.</p>.<p>***</p>.<p><strong>ಇಂದಿರಾ ಗಾಂಧಿ ಧೋರಣೆಗಳು ವಿಫಲ– ಎಸ್ಸೆನ್<br />ಬೆಂಗಳೂರು, ಮಾರ್ಚ್ 14–</strong> ‘ಜನತೆಗೆ ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಶ್ರೀಮತಿ ಇಂದಿರಾ ಗಾಂಧಿಯವರ ಧೋರಣೆಗಳು ವಿಫಲವಾಗಿವೆ’ ಎಂದು ಇಲ್ಲಿ ಕಟುವಾಗಿ ಟೀಕಿಸಿದ ಸಂಸ್ಥಾ ಕಾಂಗ್ರೆಸ್ ನಾಯಕ ಶ್ರೀ ಎಸ್. ನಿಜಲಿಂಗಪ್ಪ ಅವರು, ‘ತಮ್ಮ ಧೋರಣೆಗಳ ತಳಹದಿಯ ಮೇಲೆ ಮತ್ತೆ ಚುನಾವಣೆಗಳನ್ನು ಎದುರಿಸಲಿ’ ಎಂದು ಸವಾಲು ಹಾಕಿದರು.</p>.<p>‘ಬೆಲೆಗಳು ಯಾವೊಂದೂ ತಡೆಯಿಲ್ಲದೆ ಏರುತ್ತಿವೆ. ಪ್ರತಿಯೊಂದು ಕ್ಷೇತ್ರದಲ್ಲೂ ಉತ್ಪಾದನೆ ಇಳಿಮುಖವಾಗಿದೆ’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಾಕ್ಗೆ ಅಮೆರಿಕ ಶಸ್ತ್ರಾಸ್ತ್ರ ನೆರವು: ಭಾರತದ ಭದ್ರತೆಗೆ ಆತಂಕಕಾರಿ– ಸ್ವರಣಸಿಂಗ್<br />ನವದೆಹಲಿ, ಮಾರ್ಚ್ 14–</strong> ಮತ್ತೊಮ್ಮೆ ‘ಭಾರತದ ಭದ್ರತೆಗೆ ತೀವ್ರ ಗಂಡಾಂತರ’ ಒಡ್ಡುವಂತೆ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಸರಬ ರಾಜನ್ನು ಪುನರಾರಂಭಿಸುವ ಅಮೆರಿಕದ ಪ್ರಯತ್ನ ಕುರಿತು ವಿದೇಶಾಂಗ ಸಚಿವ ಸ್ವರಣ ಸಿಂಗ್ ಅವರು ಇಂದು ರಾಜ್ಯಸಭೆಯಲ್ಲಿ ಭಾರತದ ‘ಅಗಾಧ ಕಳವಳ’ ವ್ಯಕ್ತಪಡಿಸಿದರು.</p>.<p>ಈ ವಿಷಯದಲ್ಲಿ ಭಾರತದ ಅಭಿಪ್ರಾಯಗಳನ್ನು ಅಮೆರಿಕ ಸರ್ಕಾರಕ್ಕೆ ಆ ರಾಷ್ಟ್ರದ ಹೊಸ ರಾಯಭಾರಿ ಡೇನಿಯಲ್ ಪ್ಯಾಟ್ರಿಕ್ ಮೊಯ್ನಿಹಾನ್ ಅವರ ಮೂಲಕ ರವಾನಿಸುವುದಾಗಿ ಅವರು ತಿಳಿಸಿದರು.</p>.<p>***</p>.<p><strong>ಇಂದಿರಾ ಗಾಂಧಿ ಧೋರಣೆಗಳು ವಿಫಲ– ಎಸ್ಸೆನ್<br />ಬೆಂಗಳೂರು, ಮಾರ್ಚ್ 14–</strong> ‘ಜನತೆಗೆ ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಶ್ರೀಮತಿ ಇಂದಿರಾ ಗಾಂಧಿಯವರ ಧೋರಣೆಗಳು ವಿಫಲವಾಗಿವೆ’ ಎಂದು ಇಲ್ಲಿ ಕಟುವಾಗಿ ಟೀಕಿಸಿದ ಸಂಸ್ಥಾ ಕಾಂಗ್ರೆಸ್ ನಾಯಕ ಶ್ರೀ ಎಸ್. ನಿಜಲಿಂಗಪ್ಪ ಅವರು, ‘ತಮ್ಮ ಧೋರಣೆಗಳ ತಳಹದಿಯ ಮೇಲೆ ಮತ್ತೆ ಚುನಾವಣೆಗಳನ್ನು ಎದುರಿಸಲಿ’ ಎಂದು ಸವಾಲು ಹಾಕಿದರು.</p>.<p>‘ಬೆಲೆಗಳು ಯಾವೊಂದೂ ತಡೆಯಿಲ್ಲದೆ ಏರುತ್ತಿವೆ. ಪ್ರತಿಯೊಂದು ಕ್ಷೇತ್ರದಲ್ಲೂ ಉತ್ಪಾದನೆ ಇಳಿಮುಖವಾಗಿದೆ’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>