<p><strong>ಗಡಿ ವಿವಾದ: ರಾಷ್ಟ್ರಪತಿಯ ನೇರ ಪ್ರವೇಶಕ್ಕೆ ಒತ್ತಾ</strong>ಯ</p>.<p>ನವದೆಹಲಿ, ಜ. 15– ಮೈಸೂರು– ಮಹಾರಾಷ್ಟ್ರ ನಡುವಣ 12 ವರ್ಷಗಳ ಗಡಿ ವಿವಾದ ಪರಿಹರಿಸಲು ಮಧ್ಯೆ ಪ್ರವೇಶಿಸಬೇಕೆಂದು ಪುಣೆ ವಿಶ್ವವಿದ್ಯಾಲಯದ ಉಪಕುಲಪತಿ ಶ್ರೀ ಎಚ್.ವಿ. ಪಾಟಸ್ಕರ್ ಅವರ ನೇತೃತ್ವದಲ್ಲಿ ಇಂದು ರಾಷ್ಟ್ರಪತಿ ಶ್ರೀ ವಿ.ವಿ. ಗಿರಿ ಅವರನ್ನು ಭೇಟಿ ಮಾಡಿದ್ದ ಒಂದು ನಿಯೋಗ ಒತ್ತಾಯ ಮಾಡಿತು.</p>.<p>ಶ್ರೀ ಪಾಟಸ್ಕರ್ ಅವರ ಜೊತೆಗೆ ಮೈಸೂರು ವಿಧಾನಸಭೆಯಲ್ಲಿ ಕಾರವಾರ ಮತ್ತು ಬೆಳಗಾವಿ ಪ್ರತಿನಿಧಿಗಳಾಗಿರುವ ಶ್ರೀ ಬಿ.ಪಿ. ಕದಂ ಮತ್ತು ಶ್ರೀ ಪಿ.ಬಿ. ನಂದಿಹಳ್ಳಿ ಅವರೂ ಇದ್ದರು.</p>.<p><strong>ಬಿಹಾರ: ವಿರೋಧಿ ಕಾಂಗ್ರೆಸ್ ಸರ್ಕಾರ ತೀರಾ ಅಸಂಭವ</strong></p>.<p>ಪಟನಾ, ಜ. 15– ಶೋಷಿತ ದಳ, ಹುಲ್ ಜಾರ್ಖಂಡ್ ಮತ್ತು ಜಾರ್ಖಂಡ್ ಪಕ್ಷಗಳು ಈ ಮೊದಲು ನೀಡಿದ್ದ ಬೆಂಬಲವನ್ನು ಈಗಹಿಂತೆಗೆದುಕೊಂಡಿರುವುದರಿಂದ ಬಿಹಾರದಲ್ಲಿ ವಿರೋಧಿ ಕಾಂಗ್ರೆಸ್ ಪಕ್ಷವು ಸರ್ಕಾರ ರಚಿಸುವ ಅವಕಾಶ ಕಳೆದುಕೊಂಡಂತಾಗಿದೆ.</p>.<p>ರಾಷ್ಟ್ರಪತಿ ಆಡಳಿತಕ್ಕೆ ಒಳಗಾಗಿರುವ ಈ ರಾಜ್ಯದಲ್ಲಿ ಸರ್ಕಾರ ರಚಿಸಲು ಐದು ದಿನಗಳ ಯತ್ನದ ನಂತರ ಸ್ಪಷ್ಟವಾಗಿ ಕಂಡುಬಂದ ಫಲಿತಾಂಶ ಇದೊಂದೇ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಡಿ ವಿವಾದ: ರಾಷ್ಟ್ರಪತಿಯ ನೇರ ಪ್ರವೇಶಕ್ಕೆ ಒತ್ತಾ</strong>ಯ</p>.<p>ನವದೆಹಲಿ, ಜ. 15– ಮೈಸೂರು– ಮಹಾರಾಷ್ಟ್ರ ನಡುವಣ 12 ವರ್ಷಗಳ ಗಡಿ ವಿವಾದ ಪರಿಹರಿಸಲು ಮಧ್ಯೆ ಪ್ರವೇಶಿಸಬೇಕೆಂದು ಪುಣೆ ವಿಶ್ವವಿದ್ಯಾಲಯದ ಉಪಕುಲಪತಿ ಶ್ರೀ ಎಚ್.ವಿ. ಪಾಟಸ್ಕರ್ ಅವರ ನೇತೃತ್ವದಲ್ಲಿ ಇಂದು ರಾಷ್ಟ್ರಪತಿ ಶ್ರೀ ವಿ.ವಿ. ಗಿರಿ ಅವರನ್ನು ಭೇಟಿ ಮಾಡಿದ್ದ ಒಂದು ನಿಯೋಗ ಒತ್ತಾಯ ಮಾಡಿತು.</p>.<p>ಶ್ರೀ ಪಾಟಸ್ಕರ್ ಅವರ ಜೊತೆಗೆ ಮೈಸೂರು ವಿಧಾನಸಭೆಯಲ್ಲಿ ಕಾರವಾರ ಮತ್ತು ಬೆಳಗಾವಿ ಪ್ರತಿನಿಧಿಗಳಾಗಿರುವ ಶ್ರೀ ಬಿ.ಪಿ. ಕದಂ ಮತ್ತು ಶ್ರೀ ಪಿ.ಬಿ. ನಂದಿಹಳ್ಳಿ ಅವರೂ ಇದ್ದರು.</p>.<p><strong>ಬಿಹಾರ: ವಿರೋಧಿ ಕಾಂಗ್ರೆಸ್ ಸರ್ಕಾರ ತೀರಾ ಅಸಂಭವ</strong></p>.<p>ಪಟನಾ, ಜ. 15– ಶೋಷಿತ ದಳ, ಹುಲ್ ಜಾರ್ಖಂಡ್ ಮತ್ತು ಜಾರ್ಖಂಡ್ ಪಕ್ಷಗಳು ಈ ಮೊದಲು ನೀಡಿದ್ದ ಬೆಂಬಲವನ್ನು ಈಗಹಿಂತೆಗೆದುಕೊಂಡಿರುವುದರಿಂದ ಬಿಹಾರದಲ್ಲಿ ವಿರೋಧಿ ಕಾಂಗ್ರೆಸ್ ಪಕ್ಷವು ಸರ್ಕಾರ ರಚಿಸುವ ಅವಕಾಶ ಕಳೆದುಕೊಂಡಂತಾಗಿದೆ.</p>.<p>ರಾಷ್ಟ್ರಪತಿ ಆಡಳಿತಕ್ಕೆ ಒಳಗಾಗಿರುವ ಈ ರಾಜ್ಯದಲ್ಲಿ ಸರ್ಕಾರ ರಚಿಸಲು ಐದು ದಿನಗಳ ಯತ್ನದ ನಂತರ ಸ್ಪಷ್ಟವಾಗಿ ಕಂಡುಬಂದ ಫಲಿತಾಂಶ ಇದೊಂದೇ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>