<p><strong>ಬಸು ಹತ್ಯೆಗೆ ವಿಫಲ ಯತ್ನ<br />ಪಟ್ನಾ, ಮಾರ್ಚ್ 31–</strong> ಪಶ್ಚಿಮ ಬಂಗಾಳದ ಮಾಜಿ ಉಪಮುಖ್ಯಮಂತ್ರಿ ಮತ್ತು ಮಾರ್ಕ್ಸ್ವಾದಿ ಕಮ್ಯುನಿಸ್ಟ್ ನಾಯಕ ಜ್ಯೋತಿ ಬಸು ಅವರನ್ನು ಕೊಲೆ ಮಾಡಲು ಅಪರಿಚಿತ ಹಂತಕನೊಬ್ಬ ಇಂದು ಇಲ್ಲಿನ ರೈಲು ನಿಲ್ದಾಣದಲ್ಲಿ ನಡೆಸಿದ ಯತ್ನ ವಿಫಲವಾಯಿತು.</p>.<p>ಹಂತಕನು ಜ್ಯೋತಿ ಬಸು ಅವರತ್ತ ಹಾರಿಸಿದ ಗುಂಡು ಗುರಿ ತಪ್ಪಿ ಅವರ ಪಕ್ಕದಲ್ಲಿದ್ದ ಜೀವವಿಮಾ ಕಾರ್ಪೊರೇಷನ್ ಅಧಿಕಾರಿ ಅಲಿ ಇಮಾಂ ಅವರಿಗೆ ತಗುಲಿತು. ಇಮಾಂ ಅವರು ಆಸ್ಪತ್ರೆಯಲ್ಲಿ ನಿಧನ ಹೊಂದಿದರು.</p>.<p>ಕಲ್ಕತ್ತೆಯಿಂದ ಇಂದು ಬೆಳಿಗ್ಗೆ ಇಲ್ಲಿಗೆ ಆಗಮಿಸಿದ ಜ್ಯೋತಿ ಬಸು ಅವರನ್ನು ಸ್ವಾಗತಿಸಲು ರೈಲು ನಿಲ್ದಾಣದಲ್ಲಿ ಅಸಂಖ್ಯಾತ ಜನ ಸೇರಿದ್ದಾಗ ಈ ದುರ್ಘಟನೆ ಸಂಭವಿಸಿತು.</p>.<p><strong>‘ಮಂತ್ರಿಮಂಡಲ ಉರುಳಿಸುವ ಆಟದಲ್ಲಿ ತೊಡಗದಿರೋಣ’<br />ಬೆಂಗಳೂರು, ಮಾರ್ಚ್ 31–</strong> ರಾಜಕೀಯ ಅಭದ್ರತೆಯಿಂದ ಆರ್ಥಿಕ ಬೆಳವಣಿಗೆಗೆ ಅಡ್ಡಿಯಾಗುವುದರಿಂದ ‘ಮೈಸೂರಿನಲ್ಲಿ ಮಂತ್ರಿಮಂಡಲ ಉರುಳಿಸುವ ಆಟದಲ್ಲಿ ತೊಡಗದಿರೋಣ’ ಎಂದು ಅರ್ಥ ಸಚಿವ ಶ್ರೀ ರಾಮಕೃಷ್ಣ ಹೆಗಡೆಯವರು ಇಂದು ಮೇಲ್ಮನೆಯಲ್ಲಿ ಕಳಕಳಿಯ ಮನವಿ ಮಾಡಿಕೊಂಡರು.</p>.<p>ಮಂತ್ರಿಮಂಡಲ ಉರುಳಿಸುವ ‘ಆಟದಲ್ಲಿ’ ಹೊಲ ಗದ್ದೆಯಲ್ಲಿ, ಕಾರ್ಖಾನೆಯಲ್ಲಿ ಕೆಲಸ ಮಾಡುವ ಸಾಮಾನ್ಯ ಮನುಷ್ಯನಿಗೆ ಆಸಕ್ತಿಯಿಲ್ಲವೆಂದೂ ಅವನಿಗೆ ಆಸಕ್ತಿ ಇರುವುದು ತನ್ನ ಜೇಬಿಗೆ ಸ್ವಲ್ಪ ಹೆಚ್ಚಿನ ಹಣ ಸೇರಬೇಕೆಂಬುದರಲ್ಲಿ ಎಂದೂ ರಾಜಕೀಯ ಅಭದ್ರತೆಯುಂಟಾದರೆ ಜನತೊಂದರೆಗೀಡಾಗುವರೆಂದೂ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಸು ಹತ್ಯೆಗೆ ವಿಫಲ ಯತ್ನ<br />ಪಟ್ನಾ, ಮಾರ್ಚ್ 31–</strong> ಪಶ್ಚಿಮ ಬಂಗಾಳದ ಮಾಜಿ ಉಪಮುಖ್ಯಮಂತ್ರಿ ಮತ್ತು ಮಾರ್ಕ್ಸ್ವಾದಿ ಕಮ್ಯುನಿಸ್ಟ್ ನಾಯಕ ಜ್ಯೋತಿ ಬಸು ಅವರನ್ನು ಕೊಲೆ ಮಾಡಲು ಅಪರಿಚಿತ ಹಂತಕನೊಬ್ಬ ಇಂದು ಇಲ್ಲಿನ ರೈಲು ನಿಲ್ದಾಣದಲ್ಲಿ ನಡೆಸಿದ ಯತ್ನ ವಿಫಲವಾಯಿತು.</p>.<p>ಹಂತಕನು ಜ್ಯೋತಿ ಬಸು ಅವರತ್ತ ಹಾರಿಸಿದ ಗುಂಡು ಗುರಿ ತಪ್ಪಿ ಅವರ ಪಕ್ಕದಲ್ಲಿದ್ದ ಜೀವವಿಮಾ ಕಾರ್ಪೊರೇಷನ್ ಅಧಿಕಾರಿ ಅಲಿ ಇಮಾಂ ಅವರಿಗೆ ತಗುಲಿತು. ಇಮಾಂ ಅವರು ಆಸ್ಪತ್ರೆಯಲ್ಲಿ ನಿಧನ ಹೊಂದಿದರು.</p>.<p>ಕಲ್ಕತ್ತೆಯಿಂದ ಇಂದು ಬೆಳಿಗ್ಗೆ ಇಲ್ಲಿಗೆ ಆಗಮಿಸಿದ ಜ್ಯೋತಿ ಬಸು ಅವರನ್ನು ಸ್ವಾಗತಿಸಲು ರೈಲು ನಿಲ್ದಾಣದಲ್ಲಿ ಅಸಂಖ್ಯಾತ ಜನ ಸೇರಿದ್ದಾಗ ಈ ದುರ್ಘಟನೆ ಸಂಭವಿಸಿತು.</p>.<p><strong>‘ಮಂತ್ರಿಮಂಡಲ ಉರುಳಿಸುವ ಆಟದಲ್ಲಿ ತೊಡಗದಿರೋಣ’<br />ಬೆಂಗಳೂರು, ಮಾರ್ಚ್ 31–</strong> ರಾಜಕೀಯ ಅಭದ್ರತೆಯಿಂದ ಆರ್ಥಿಕ ಬೆಳವಣಿಗೆಗೆ ಅಡ್ಡಿಯಾಗುವುದರಿಂದ ‘ಮೈಸೂರಿನಲ್ಲಿ ಮಂತ್ರಿಮಂಡಲ ಉರುಳಿಸುವ ಆಟದಲ್ಲಿ ತೊಡಗದಿರೋಣ’ ಎಂದು ಅರ್ಥ ಸಚಿವ ಶ್ರೀ ರಾಮಕೃಷ್ಣ ಹೆಗಡೆಯವರು ಇಂದು ಮೇಲ್ಮನೆಯಲ್ಲಿ ಕಳಕಳಿಯ ಮನವಿ ಮಾಡಿಕೊಂಡರು.</p>.<p>ಮಂತ್ರಿಮಂಡಲ ಉರುಳಿಸುವ ‘ಆಟದಲ್ಲಿ’ ಹೊಲ ಗದ್ದೆಯಲ್ಲಿ, ಕಾರ್ಖಾನೆಯಲ್ಲಿ ಕೆಲಸ ಮಾಡುವ ಸಾಮಾನ್ಯ ಮನುಷ್ಯನಿಗೆ ಆಸಕ್ತಿಯಿಲ್ಲವೆಂದೂ ಅವನಿಗೆ ಆಸಕ್ತಿ ಇರುವುದು ತನ್ನ ಜೇಬಿಗೆ ಸ್ವಲ್ಪ ಹೆಚ್ಚಿನ ಹಣ ಸೇರಬೇಕೆಂಬುದರಲ್ಲಿ ಎಂದೂ ರಾಜಕೀಯ ಅಭದ್ರತೆಯುಂಟಾದರೆ ಜನತೊಂದರೆಗೀಡಾಗುವರೆಂದೂ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>