ಗಡಿ ಪ್ರಶ್ನೆ: 15 ದಿನಗಳಲ್ಲಿ ಅಹ್ಮದ್–ಸ್ವರಣ್ಸಿಂಗ್ರ ಹೊಸ ಸೂತ್ರ ಸಲ್ಲಿಕೆ?
ಮುಂಬಯಿ, ಮೇ 2– ಮೈಸೂರು ಮಹಾರಾಷ್ಟ್ರ ಗಡಿ ವಿವಾದದ ಬಗ್ಗೆ ಕೇಂದ್ರ ಸಚಿವರಾದ ಫಕ್ರುದ್ದಿನ್ ಅಲಿ ಅಹ್ಮದ್ ಮತ್ತು ಸ್ವರಣ್ ಸಿಂಗ್ ಅವರು ಇನ್ನು ಹದಿನೈದು ದಿನದೊಳಗೆ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರಿಗೆ ಹೊಸ ಸಲಹೆ, ಸೂಚನೆಗಳನ್ನು ಸಲ್ಲಿಸುವರು.
ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿ ನಿಕಟ ಮೂಲಗಳು ಈ ತೀತಿ ಅಭಿಪ್ರಾಯ ಪಟ್ಟಿವೆ. ಮೈಸೂರು–ಮಹಾರಾಷ್ಟ್ರ ಗಡಿ ವಿವಾದ ಅಧ್ಯಯನಕ್ಕಾಗಿ ಶ್ರೀಮತಿ ಗಾಂಧಿಯವರಿಂದ ನೇಮಕಗೊಂಡಿರುವ ಕೇಂದ್ರ ಸಚಿವರುಗಳಾದ ಫಕ್ರುದ್ದಿನ್ ಅಲಿ ಅಹ್ಮದ್ ಮತ್ತು ಸ್ವರಣ್ಸಿಂಗ್ ಅವರು ಇಂದು ಬೆಳಿಗ್ಗೆ ಬೆಂಗಳೂರಿಗೆ ತೆರಳುವುದಕ್ಕೆ ಮುಂಚೆ ಇಲ್ಲಿನ ಹಿರಿಯ ಕಾಂಗ್ರೆಸ್ಸಿಗರೊಡನೆ ಮಾತುಕತೆ ನಡೆಸಿದರು.