<p><strong>ಕಂಟ್ರಾಕ್ಟ್ ಬಸ್ಸು ತರುವ ‘ಅಸೌಕರ್ಯ’</strong></p>.<p><strong>ಬೆಂಗಳೂರು, ಮೇ 7–</strong> ಪ್ರವಾಸಿ ಕಂಟ್ರಾಕ್ಟ್ ಬಸ್ಸುಗಳೆಂದು ನಾಮಫಲಕ ಹಾಕಿ ನಿತ್ಯವೂ ಇತರ ಬಸ್ಸುಗಳಂತೆ ಪ್ರಯಾಣಿಕರನ್ನು ಒಯ್ಯುವ ಬಸ್ಸುಗಳಲ್ಲಿ ಇನ್ನು ಮುಂದೆ ಟಿಕೇಟು ಕೊಂಡು ಪ್ರಯಾಣ ಮಾಡುವವರು ದಾರಿಯಲ್ಲಿ ಅಸೌಕರ್ಯಗಳನ್ನು ಎದುರಿಸಬೇಕಾಗಿ ಬರಬಹುದು.</p>.<p>ಕಂಟ್ರಾಕ್ಟ್ ಬಸ್ಸುಗಳನ್ನು ನಿತ್ಯದ ಬಸ್ಸುಗಳಾಗಿ ಓಡಿಸುವ ಚಟುವಟಿಕೆ ಹೆಚ್ಚುತ್ತಿರುವುದನ್ನು ತಡೆಗಟ್ಟಲು ಸರ್ಕಾರ ಕೆಲವು ತೀವ್ರ ಕ್ರಮಗಳನ್ನು ಕೈಗೊಂಡಿದೆ. ದಾರಿಗಳಲ್ಲಿ ಚೆಕಿಂಗ್ ಹಾಗೂ ತಪ್ಪೆಂದು ಕಂಡುಬಂದರೆ ಬಸ್ಸು ಮಾಲೀಕರ ಮೇಲೆ ಕೇಸು ಹೂಡುವುದು, ಈ ಕ್ರಮಗಳ ಪೈಕಿ ಒಂದು.</p>.<p>ಕಂಟ್ರಾಕ್ಟು ಬಸ್ಸುಗಳೆಂದರೆ ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಮದುವೆ ತಂಡ, ವಿದ್ಯಾರ್ಥಿಗಳು ಅಥವಾ ಪ್ರವಾಸಿಗರ ತಂಡದವರು ಮಾಡಿಕೊಂಡ ಬಸ್ಸು. ಈ ಬಸ್ಸುಗಳನ್ನು ದೈನಿಕ ಪ್ರಯಾಣಿಕ ಬಸ್ಸಿನಂತೆ ಉಪಯೋಗಿಸುವುದು ನಿಯಮಗಳ ಪ್ರಕಾರ ನಿಷಿದ್ಧ. ಇಂಥ ಬಸ್ಸುಗಳಲ್ಲಿ ಸಾರ್ವಜನಿಕರು ಪ್ರಯಾಣ ಮಾಡಬಾರದು. ಮಾಡಿದರೆ ದಾರಿಯಲ್ಲಿ ಚೆಕಿಂಗ್ ಬಂದರೆ ತೊಂದರೆಗಳಿಗೆ ಒಳಗಾಗುವ ಸಂಭವವಿದೆ ಎಂದು ಸರ್ಕಾರಿ ಪ್ರಕಟಣೆಯೊಂದು ತಿಳಿಸಿದೆ.</p>.<p><strong>ರಾಜಧನ ರದ್ದಿನ ಬಗ್ಗೆ 18ರಂದು ಎರಡು ಮಸೂದೆ ಮಂಡನೆ</strong></p>.<p><strong>ನವದೆಹಲಿ, ಮೇ 7–</strong> ಮಾಜಿ ಅರಸರ ರಾಜಧನ ಮತ್ತು ವಿಶೇಷ ಹಕ್ಕುಗಳನ್ನು ರದ್ದುಗೊಳಿಸಲು ಸರ್ಕಾರ ಈ ತಿಂಗಳ 18ರಂದು ಲೋಕಸಭೆಯಲ್ಲಿ ಎರಡು ಮಸೂದೆಗಳನ್ನು ಮಂಡಿಸಲಿದೆ.</p>.<p>ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಮತ್ತು ಕೇಂದ್ರ ಗೃಹ ಸಚಿವ ವೈ.ಬಿ.ಚವಾಣ್ ಅವರು ಇಂದು ಈ ಬಗ್ಗೆ ಅನೌಪಚಾರಿಕ ಚರ್ಚೆ ನಡೆಸಿದರು. ಚರ್ಚೆಯಲ್ಲಿ ಕಾನೂನು ಸಚಿವ ಗೋವಿಂದ ಮೆನನ್ ಅವರೂ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಂಟ್ರಾಕ್ಟ್ ಬಸ್ಸು ತರುವ ‘ಅಸೌಕರ್ಯ’</strong></p>.<p><strong>ಬೆಂಗಳೂರು, ಮೇ 7–</strong> ಪ್ರವಾಸಿ ಕಂಟ್ರಾಕ್ಟ್ ಬಸ್ಸುಗಳೆಂದು ನಾಮಫಲಕ ಹಾಕಿ ನಿತ್ಯವೂ ಇತರ ಬಸ್ಸುಗಳಂತೆ ಪ್ರಯಾಣಿಕರನ್ನು ಒಯ್ಯುವ ಬಸ್ಸುಗಳಲ್ಲಿ ಇನ್ನು ಮುಂದೆ ಟಿಕೇಟು ಕೊಂಡು ಪ್ರಯಾಣ ಮಾಡುವವರು ದಾರಿಯಲ್ಲಿ ಅಸೌಕರ್ಯಗಳನ್ನು ಎದುರಿಸಬೇಕಾಗಿ ಬರಬಹುದು.</p>.<p>ಕಂಟ್ರಾಕ್ಟ್ ಬಸ್ಸುಗಳನ್ನು ನಿತ್ಯದ ಬಸ್ಸುಗಳಾಗಿ ಓಡಿಸುವ ಚಟುವಟಿಕೆ ಹೆಚ್ಚುತ್ತಿರುವುದನ್ನು ತಡೆಗಟ್ಟಲು ಸರ್ಕಾರ ಕೆಲವು ತೀವ್ರ ಕ್ರಮಗಳನ್ನು ಕೈಗೊಂಡಿದೆ. ದಾರಿಗಳಲ್ಲಿ ಚೆಕಿಂಗ್ ಹಾಗೂ ತಪ್ಪೆಂದು ಕಂಡುಬಂದರೆ ಬಸ್ಸು ಮಾಲೀಕರ ಮೇಲೆ ಕೇಸು ಹೂಡುವುದು, ಈ ಕ್ರಮಗಳ ಪೈಕಿ ಒಂದು.</p>.<p>ಕಂಟ್ರಾಕ್ಟು ಬಸ್ಸುಗಳೆಂದರೆ ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಮದುವೆ ತಂಡ, ವಿದ್ಯಾರ್ಥಿಗಳು ಅಥವಾ ಪ್ರವಾಸಿಗರ ತಂಡದವರು ಮಾಡಿಕೊಂಡ ಬಸ್ಸು. ಈ ಬಸ್ಸುಗಳನ್ನು ದೈನಿಕ ಪ್ರಯಾಣಿಕ ಬಸ್ಸಿನಂತೆ ಉಪಯೋಗಿಸುವುದು ನಿಯಮಗಳ ಪ್ರಕಾರ ನಿಷಿದ್ಧ. ಇಂಥ ಬಸ್ಸುಗಳಲ್ಲಿ ಸಾರ್ವಜನಿಕರು ಪ್ರಯಾಣ ಮಾಡಬಾರದು. ಮಾಡಿದರೆ ದಾರಿಯಲ್ಲಿ ಚೆಕಿಂಗ್ ಬಂದರೆ ತೊಂದರೆಗಳಿಗೆ ಒಳಗಾಗುವ ಸಂಭವವಿದೆ ಎಂದು ಸರ್ಕಾರಿ ಪ್ರಕಟಣೆಯೊಂದು ತಿಳಿಸಿದೆ.</p>.<p><strong>ರಾಜಧನ ರದ್ದಿನ ಬಗ್ಗೆ 18ರಂದು ಎರಡು ಮಸೂದೆ ಮಂಡನೆ</strong></p>.<p><strong>ನವದೆಹಲಿ, ಮೇ 7–</strong> ಮಾಜಿ ಅರಸರ ರಾಜಧನ ಮತ್ತು ವಿಶೇಷ ಹಕ್ಕುಗಳನ್ನು ರದ್ದುಗೊಳಿಸಲು ಸರ್ಕಾರ ಈ ತಿಂಗಳ 18ರಂದು ಲೋಕಸಭೆಯಲ್ಲಿ ಎರಡು ಮಸೂದೆಗಳನ್ನು ಮಂಡಿಸಲಿದೆ.</p>.<p>ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಮತ್ತು ಕೇಂದ್ರ ಗೃಹ ಸಚಿವ ವೈ.ಬಿ.ಚವಾಣ್ ಅವರು ಇಂದು ಈ ಬಗ್ಗೆ ಅನೌಪಚಾರಿಕ ಚರ್ಚೆ ನಡೆಸಿದರು. ಚರ್ಚೆಯಲ್ಲಿ ಕಾನೂನು ಸಚಿವ ಗೋವಿಂದ ಮೆನನ್ ಅವರೂ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>