<p><strong>ಕೇಂದ್ರ ಸಂಪುಟದ ಸಲಹೆ ಒಪ್ಪಿದರೆ ರಾಷ್ಟ್ರಪತಿ ದೋಷಾರೋಪಣೆಯೇ?</strong></p>.<p><strong>ಬೆಂಗಳೂರು, ಅ. 12– </strong>ಸುಮಾರು 22 ವರ್ಷಗಳ ಹಿಂದೆ, ಭಾರತದ ಸಂವಿಧಾನ ರೂಪಿಸುತ್ತಿದ್ದ ಸಭೆಯಲ್ಲಿ, ರಾಷ್ಟ್ರಪತಿಯ ಮೇಲೆ ದೋಷಾರೋಪಣೆ ಹೊರಿಸುವುದಕ್ಕೆ ಸಂಬಂಧಿಸಿದ ವಿಧಿಯ ಮೇಲೆ ಚರ್ಚೆ ನಡೆಯುತ್ತಿತ್ತು.</p>.<p>ಈಗ ಪಿ.ಎಸ್.ಪಿ.ಯಲ್ಲಿರುವ ಶ್ರೀ ಎಚ್.ವಿ.ಕಾಮತ್ ಅವರು, ರಾಷ್ಟ್ರಪತಿ ಅವರು ‘ಕೇಂದ್ರ ಮಂತ್ರಿಮಂಡಲದ ಸಲಹೆಯನ್ನು ಒಪ್ಪಲು ನಿರಾಕರಿಸಿದರೆ, ದೋಷಾರೋಪಣೆಗೆ ಬಾಧ್ಯರಾಗುವರೇ?’ ಎಂದು ಕೇಳಿದರು.</p>.<p>ಸಂವಿಧಾನ ಶಿಲ್ಪಿ ದಿವಂಗತ ಡಾ. ಬಿ.ಆರ್.ಅಂಬೇಡ್ಕರ್ ಅವರು, ‘ಈ ಬಗ್ಗೆ ಸ್ವಲ್ಪವೂ ಸಂಶಯವಿಲ್ಲ’ ಎಂದು ಉತ್ತರ ನೀಡಿದರು.</p>.<p>ಆಗ ಸಂವಿಧಾನ ಸಭೆಯಲ್ಲಿ ನಡೆದ ಈ ಚರ್ಚೆಯನ್ನು ಇಂದು ವರದಿಗಾರರಲ್ಲಿ ಪ್ರಸ್ತಾಪಿಸಿದ ಪಿ.ಎಸ್.ಪಿ. ಪ್ರಧಾನ ಕಾರ್ಯದರ್ಶಿ ಶ್ರೀ ಪ್ರೇಮ್ ಭಾಸಿನ್ ಅವರು, ‘ಇದು ಸಂವಿಧಾನದ ಸೃಷ್ಟಿಕರ್ತರ ಉದ್ದೇಶವಾಗಿತ್ತು. ಈಗ ರಾಷ್ಟ್ರಪತಿಗಳು ಮಂತ್ರಿಮಂಡಲದ ಶಿಫಾರಸನ್ನು ಒಪ್ಪಿಕೊಂಡದ್ದಕ್ಕೆ ದೋಷಾರೋಪಣೆಗೆ ಬಾಧ್ಯರಾಗುವರೇ ಎಂಬುದನ್ನು ಪರಿಶೀಲಿಸಬೇಕಾಗಿದೆ’ ಎಂದು ನಗುತ್ತ ಹೇಳಿದರು.</p>.<p><strong>ಸಾಧ್ಯವಾದಷ್ಟು ಬೇಗ ನಗರ ಆಸ್ತಿ ಮಿತಿ ನಿಗದಿ</strong></p>.<p><strong>ಪಟ್ನಾ, ಅ. 12– </strong>ನಗರಗಳಲ್ಲಿ ಆಸ್ತಿ ಮೇಲೆ ಮಿತಿ ಹೇರಲು ಸಾಧ್ಯವಾದಷ್ಟು ಶೀಘ್ರವಾಗಿ ಶಾಸನ ರಚಿಸುವಂತೆ ರಾಜ್ಯ ಸರ್ಕಾರಗಳಿಗೆ ಕರೆ ನೀಡಬೇಕೆಂದು ಎಐಸಿಸಿಗೆ ಶಿಫಾರಸು ಮಾಡಲು ಆಡಳಿತ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಇಂದು ರಾತ್ರಿ ನಿರ್ಧರಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೇಂದ್ರ ಸಂಪುಟದ ಸಲಹೆ ಒಪ್ಪಿದರೆ ರಾಷ್ಟ್ರಪತಿ ದೋಷಾರೋಪಣೆಯೇ?</strong></p>.<p><strong>ಬೆಂಗಳೂರು, ಅ. 12– </strong>ಸುಮಾರು 22 ವರ್ಷಗಳ ಹಿಂದೆ, ಭಾರತದ ಸಂವಿಧಾನ ರೂಪಿಸುತ್ತಿದ್ದ ಸಭೆಯಲ್ಲಿ, ರಾಷ್ಟ್ರಪತಿಯ ಮೇಲೆ ದೋಷಾರೋಪಣೆ ಹೊರಿಸುವುದಕ್ಕೆ ಸಂಬಂಧಿಸಿದ ವಿಧಿಯ ಮೇಲೆ ಚರ್ಚೆ ನಡೆಯುತ್ತಿತ್ತು.</p>.<p>ಈಗ ಪಿ.ಎಸ್.ಪಿ.ಯಲ್ಲಿರುವ ಶ್ರೀ ಎಚ್.ವಿ.ಕಾಮತ್ ಅವರು, ರಾಷ್ಟ್ರಪತಿ ಅವರು ‘ಕೇಂದ್ರ ಮಂತ್ರಿಮಂಡಲದ ಸಲಹೆಯನ್ನು ಒಪ್ಪಲು ನಿರಾಕರಿಸಿದರೆ, ದೋಷಾರೋಪಣೆಗೆ ಬಾಧ್ಯರಾಗುವರೇ?’ ಎಂದು ಕೇಳಿದರು.</p>.<p>ಸಂವಿಧಾನ ಶಿಲ್ಪಿ ದಿವಂಗತ ಡಾ. ಬಿ.ಆರ್.ಅಂಬೇಡ್ಕರ್ ಅವರು, ‘ಈ ಬಗ್ಗೆ ಸ್ವಲ್ಪವೂ ಸಂಶಯವಿಲ್ಲ’ ಎಂದು ಉತ್ತರ ನೀಡಿದರು.</p>.<p>ಆಗ ಸಂವಿಧಾನ ಸಭೆಯಲ್ಲಿ ನಡೆದ ಈ ಚರ್ಚೆಯನ್ನು ಇಂದು ವರದಿಗಾರರಲ್ಲಿ ಪ್ರಸ್ತಾಪಿಸಿದ ಪಿ.ಎಸ್.ಪಿ. ಪ್ರಧಾನ ಕಾರ್ಯದರ್ಶಿ ಶ್ರೀ ಪ್ರೇಮ್ ಭಾಸಿನ್ ಅವರು, ‘ಇದು ಸಂವಿಧಾನದ ಸೃಷ್ಟಿಕರ್ತರ ಉದ್ದೇಶವಾಗಿತ್ತು. ಈಗ ರಾಷ್ಟ್ರಪತಿಗಳು ಮಂತ್ರಿಮಂಡಲದ ಶಿಫಾರಸನ್ನು ಒಪ್ಪಿಕೊಂಡದ್ದಕ್ಕೆ ದೋಷಾರೋಪಣೆಗೆ ಬಾಧ್ಯರಾಗುವರೇ ಎಂಬುದನ್ನು ಪರಿಶೀಲಿಸಬೇಕಾಗಿದೆ’ ಎಂದು ನಗುತ್ತ ಹೇಳಿದರು.</p>.<p><strong>ಸಾಧ್ಯವಾದಷ್ಟು ಬೇಗ ನಗರ ಆಸ್ತಿ ಮಿತಿ ನಿಗದಿ</strong></p>.<p><strong>ಪಟ್ನಾ, ಅ. 12– </strong>ನಗರಗಳಲ್ಲಿ ಆಸ್ತಿ ಮೇಲೆ ಮಿತಿ ಹೇರಲು ಸಾಧ್ಯವಾದಷ್ಟು ಶೀಘ್ರವಾಗಿ ಶಾಸನ ರಚಿಸುವಂತೆ ರಾಜ್ಯ ಸರ್ಕಾರಗಳಿಗೆ ಕರೆ ನೀಡಬೇಕೆಂದು ಎಐಸಿಸಿಗೆ ಶಿಫಾರಸು ಮಾಡಲು ಆಡಳಿತ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಇಂದು ರಾತ್ರಿ ನಿರ್ಧರಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>