<p><strong>ಬಾಂಗ್ಲಾದೇಶಕ್ಕೆ ಮನ್ನಣೆ ನೀಡಲು ಭುಟ್ಟೋ ಸಿದ್ಧ: ಕಾಶ್ಮೀರ ಬಗ್ಗೆ ರಾಜಿ ಇಲ್ಲ</strong></p><p><strong>ಪ್ಯಾರಿಸ್, ಜುಲೈ 26–</strong> ಬಾಂಗ್ಲಾದೇಶಕ್ಕೆ ಮನ್ನಣೆ ನೀಡಲು ತಾವು ಸಿದ್ಧವಾಗಿರುವುದಾಗಿಯೂ ಆದರೆ, ಕಾಶ್ಮೀರದ ಬಗ್ಗೆ ತಾವು ಜಗ್ಗುವುದಿಲ್ಲವೆಂದು ಪಾಕಿಸ್ತಾನದ ಅಧ್ಯಕ್ಷ ಭುಟ್ಟೋ ಅವರು ಇಂದು ಇಲ್ಲಿ ಘೋಷಿಸಿದರು.</p><p>ಭಾರತದಲ್ಲಿರುವ 60 ಸಾವಿರಮಂದಿ ಯುದ್ಧ ಬಂಧಿಗಳ, ಬ್ರಿಟಿಷ್ ಮತ್ತು ಫ್ರೆಂಚ್ ನಾಯಕರ ಅಭಿಪ್ರಾಯ ಪಾಕಿಸ್ತಾನಕ್ಕೆ ಅನುಕೂಲವಾಗಿದೆ ಎಂದರು.</p>.<p>***</p>.<p><strong>ಕಪಿಲಾ ಯೋಜನೆ ಅಕ್ರಮಗಳ ಬಗ್ಗೆ ಕ್ರಮ ವಿಳಂಬ</strong></p><p><strong>ಬೆಂಗಳೂರು, ಜುಲೈ 26–</strong> ಕಪಿಲಾ ಯೋಜನೆಗೆ ಸೇರಿದ ನಾಲೆ ಕೆಲಸದಲ್ಲಿ ಕಂಡು ಬಂದ ಕೆಲ ಅಕ್ರಮಗಳ ಬಗ್ಗೆ ವಿಚಾರಣೆ ನಡೆಯಬೇಕೆಂದು ಕಳೆದ ಫೆಬ್ರವರಿಯಲ್ಲಿ ಸರ್ಕಾರದ ಆಜ್ಞೆಯಾಗಿದ್ದರೂ, ಈ ಬಗ್ಗೆ ತೀವ್ರತರವಾದ ಯಾವ ಕ್ರಮವನ್ನೂ ಇನ್ನೂ ಕೈಗೊಂಡಿಲ್ಲವೆಂದು ತಿಳಿದುಬಂದಿದೆ.</p><p>ವಿಚಾರಣೆ ವಿಳಂಬವಾದಲ್ಲಿ ಅಕ್ರಮಗಳನ್ನು ಸಾಬೀತು ಮಾಡಲು ಸಹಾಯಕವಾದ ಸಾಕ್ಷ್ಯಗಳನ್ನು ಮುಚ್ಚಲು ಸಾಧ್ಯವಾಗುವುದೆಂದು ಶಂಕೆ ವ್ಯಕ್ತಪಡಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಂಗ್ಲಾದೇಶಕ್ಕೆ ಮನ್ನಣೆ ನೀಡಲು ಭುಟ್ಟೋ ಸಿದ್ಧ: ಕಾಶ್ಮೀರ ಬಗ್ಗೆ ರಾಜಿ ಇಲ್ಲ</strong></p><p><strong>ಪ್ಯಾರಿಸ್, ಜುಲೈ 26–</strong> ಬಾಂಗ್ಲಾದೇಶಕ್ಕೆ ಮನ್ನಣೆ ನೀಡಲು ತಾವು ಸಿದ್ಧವಾಗಿರುವುದಾಗಿಯೂ ಆದರೆ, ಕಾಶ್ಮೀರದ ಬಗ್ಗೆ ತಾವು ಜಗ್ಗುವುದಿಲ್ಲವೆಂದು ಪಾಕಿಸ್ತಾನದ ಅಧ್ಯಕ್ಷ ಭುಟ್ಟೋ ಅವರು ಇಂದು ಇಲ್ಲಿ ಘೋಷಿಸಿದರು.</p><p>ಭಾರತದಲ್ಲಿರುವ 60 ಸಾವಿರಮಂದಿ ಯುದ್ಧ ಬಂಧಿಗಳ, ಬ್ರಿಟಿಷ್ ಮತ್ತು ಫ್ರೆಂಚ್ ನಾಯಕರ ಅಭಿಪ್ರಾಯ ಪಾಕಿಸ್ತಾನಕ್ಕೆ ಅನುಕೂಲವಾಗಿದೆ ಎಂದರು.</p>.<p>***</p>.<p><strong>ಕಪಿಲಾ ಯೋಜನೆ ಅಕ್ರಮಗಳ ಬಗ್ಗೆ ಕ್ರಮ ವಿಳಂಬ</strong></p><p><strong>ಬೆಂಗಳೂರು, ಜುಲೈ 26–</strong> ಕಪಿಲಾ ಯೋಜನೆಗೆ ಸೇರಿದ ನಾಲೆ ಕೆಲಸದಲ್ಲಿ ಕಂಡು ಬಂದ ಕೆಲ ಅಕ್ರಮಗಳ ಬಗ್ಗೆ ವಿಚಾರಣೆ ನಡೆಯಬೇಕೆಂದು ಕಳೆದ ಫೆಬ್ರವರಿಯಲ್ಲಿ ಸರ್ಕಾರದ ಆಜ್ಞೆಯಾಗಿದ್ದರೂ, ಈ ಬಗ್ಗೆ ತೀವ್ರತರವಾದ ಯಾವ ಕ್ರಮವನ್ನೂ ಇನ್ನೂ ಕೈಗೊಂಡಿಲ್ಲವೆಂದು ತಿಳಿದುಬಂದಿದೆ.</p><p>ವಿಚಾರಣೆ ವಿಳಂಬವಾದಲ್ಲಿ ಅಕ್ರಮಗಳನ್ನು ಸಾಬೀತು ಮಾಡಲು ಸಹಾಯಕವಾದ ಸಾಕ್ಷ್ಯಗಳನ್ನು ಮುಚ್ಚಲು ಸಾಧ್ಯವಾಗುವುದೆಂದು ಶಂಕೆ ವ್ಯಕ್ತಪಡಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>