<p><strong>ದೀಕ್ಷಿತ್ ಆರೋಪ ‘ರಾಜಕೀಯಪ್ರೇರಿತ’ ಎಂದ ಅಡ್ವಾಣಿ: ನ್ಯಾಯಾಂಗ ತನಿಖೆಗೆ ಆಗ್ರಹ</strong></p><p><strong>ಅಹಮದಾಬಾದ್, ಜ. 23–</strong> ಗುಜರಾತ್ ಗಲಭೆಗಳಿಗೆ ತಮ್ಮ ಪಕ್ಷದ ಕುಮ್ಮಕ್ಕೇ ಕಾರಣ ಎಂಬ ಕೇಂದ್ರ ಗೃಹ ಸಚಿವ ಉಮಾಶಂಕರ್ ದೀಕ್ಷಿತರ ಆರೋಪವನ್ನು ಜನಸಂಘದ ಅಧ್ಯಕ್ಷ ಎಲ್.ಕೆ. ಅಡ್ವಾಣಿ ಅವರು ಇಂದು ಸ್ಪಷ್ಟವಾಗಿ ನಿರಾಕರಿಸಿ, ಕಳೆದೆರಡು ವಾರಗಳಲ್ಲಿ ನಡೆದ ‘ಎಲ್ಲ ಘಟನೆಗಳ’ ನ್ಯಾಯಾಂಗ ವಿಚಾರಣೆ ನಡೆಸಬೇಕೆಂದು ಆಗ್ರಹಪಡಿಸಿದರು.</p><p>‘ಜನತೆಯಲ್ಲಿ ಕುದಿಯುತ್ತಿರುವ ತಳಮಳವೇ’ ಈಗಿನ ಹಿಂಸಾಕಾಂಡಕ್ಕೆ ನೇರ ಕಾರಣವೆಂಬುದನ್ನು ತನಿಖೆ ಸ್ಪಷ್ಟಪಡಿಸುತ್ತದೆಂಬ ಭರವಸೆ ತಮಗಿದೆಯೆಂದು ಅವರು ನುಡಿದರು.</p><p>***</p><p><strong>ಯಥಾಸ್ಥಿತಿಯಿಂದ ರಾಜ್ಯಕ್ಕೆ ಸಮಸ್ಯೆ ಇಲ್ಲ; ಅರಸು ಸ್ಪಷ್ಟನೆ</strong></p><p><strong>ಬೆಂಗಳೂರು, ಜ. 23–</strong> ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿಗೆ ಸಂಬಂಧಿಸಿದಂತೆ ಯಥಾಸ್ಥಿತಿ ಮುಂದುವರಿದರೆ ಕರ್ನಾಟಕಕ್ಕೆ ಯಾವ ಸಮಸ್ಯೆಯೂ ಇಲ್ಲ.</p><p>ಈ ಅಂಶವನ್ನು ಮುಖ್ಯಮಂತ್ರಿ ಅರಸು, ಕೇಂದ್ರ ಗೃಹ ಸಚಿವ ಉಮಾಶಂಕರ್ ದೀಕ್ಷಿತ್ ಅವರಿಗೆ ಮನವರಿಕೆ ಮಾಡಿಕೊಟ್ಟು ನಗರಕ್ಕೆ ಹಿಂದಿರುಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದೀಕ್ಷಿತ್ ಆರೋಪ ‘ರಾಜಕೀಯಪ್ರೇರಿತ’ ಎಂದ ಅಡ್ವಾಣಿ: ನ್ಯಾಯಾಂಗ ತನಿಖೆಗೆ ಆಗ್ರಹ</strong></p><p><strong>ಅಹಮದಾಬಾದ್, ಜ. 23–</strong> ಗುಜರಾತ್ ಗಲಭೆಗಳಿಗೆ ತಮ್ಮ ಪಕ್ಷದ ಕುಮ್ಮಕ್ಕೇ ಕಾರಣ ಎಂಬ ಕೇಂದ್ರ ಗೃಹ ಸಚಿವ ಉಮಾಶಂಕರ್ ದೀಕ್ಷಿತರ ಆರೋಪವನ್ನು ಜನಸಂಘದ ಅಧ್ಯಕ್ಷ ಎಲ್.ಕೆ. ಅಡ್ವಾಣಿ ಅವರು ಇಂದು ಸ್ಪಷ್ಟವಾಗಿ ನಿರಾಕರಿಸಿ, ಕಳೆದೆರಡು ವಾರಗಳಲ್ಲಿ ನಡೆದ ‘ಎಲ್ಲ ಘಟನೆಗಳ’ ನ್ಯಾಯಾಂಗ ವಿಚಾರಣೆ ನಡೆಸಬೇಕೆಂದು ಆಗ್ರಹಪಡಿಸಿದರು.</p><p>‘ಜನತೆಯಲ್ಲಿ ಕುದಿಯುತ್ತಿರುವ ತಳಮಳವೇ’ ಈಗಿನ ಹಿಂಸಾಕಾಂಡಕ್ಕೆ ನೇರ ಕಾರಣವೆಂಬುದನ್ನು ತನಿಖೆ ಸ್ಪಷ್ಟಪಡಿಸುತ್ತದೆಂಬ ಭರವಸೆ ತಮಗಿದೆಯೆಂದು ಅವರು ನುಡಿದರು.</p><p>***</p><p><strong>ಯಥಾಸ್ಥಿತಿಯಿಂದ ರಾಜ್ಯಕ್ಕೆ ಸಮಸ್ಯೆ ಇಲ್ಲ; ಅರಸು ಸ್ಪಷ್ಟನೆ</strong></p><p><strong>ಬೆಂಗಳೂರು, ಜ. 23–</strong> ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿಗೆ ಸಂಬಂಧಿಸಿದಂತೆ ಯಥಾಸ್ಥಿತಿ ಮುಂದುವರಿದರೆ ಕರ್ನಾಟಕಕ್ಕೆ ಯಾವ ಸಮಸ್ಯೆಯೂ ಇಲ್ಲ.</p><p>ಈ ಅಂಶವನ್ನು ಮುಖ್ಯಮಂತ್ರಿ ಅರಸು, ಕೇಂದ್ರ ಗೃಹ ಸಚಿವ ಉಮಾಶಂಕರ್ ದೀಕ್ಷಿತ್ ಅವರಿಗೆ ಮನವರಿಕೆ ಮಾಡಿಕೊಟ್ಟು ನಗರಕ್ಕೆ ಹಿಂದಿರುಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>