<p><strong>ನಾಯಕತ್ವ ಪ್ರಶ್ನೆ: ದೆಹಲಿ ಮಾತುಕತೆ ಬಗ್ಗೆ ಅರಸು ತೃಪ್ತಿ</strong></p><p><strong>ಬೆಂಗಳೂರು:</strong> ರಾಜ್ಯದ ರಾಜಕೀಯ ಪರಿಸ್ಥಿತಿ, ಅದರಲ್ಲೂ ನಾಯಕತ್ವದ ಪ್ರಶ್ನೆ ಕುರಿತು ದೆಹಲಿಯಲ್ಲಿ ಕೇಂದ್ರದ ನಾಯಕರೊಡನೆ ನಡೆಸಿದ ಮಾತುಕತೆಯಿಂದ ತಮಗೆ ಸಂತೃಪ್ತಿಯಾಗಿದೆಯೆಂಬ ಸೂಚನೆಯನ್ನು ಮುಖ್ಯಮಂತ್ರಿ ದೇವರಾಜ ಅರಸು ಅವರು ಇಂದು ಇಲ್ಲಿ ನೀಡಿದರು.</p><p>ದೆಹಲಿಗೆ ಐದು ದಿನಗಳ ಭೇಟಿಯ ನಂತರ ಇಂದು ನಗರಕ್ಕೆ ಹಿಂದಿರುಗಿದ ಮುಖ್ಯಮಂತ್ರಿಯವರು ತಾವು ದೆಹಲಿಗೆ ತೆರಳುವ ಮುನ್ನ ಸಂಶಯದ ವಾತಾವರಣ ನಿರ್ಮಾಣವಾಗಿದ್ದು ಏನೇನೋ ವದಂತಿಗಳನ್ನು ಹರಡಲಾಗಿತ್ತೆಂದು ಹೇಳಿ ‘ದೆಹಲಿಗೆ ಹೋದಮೇಲೆ ಈ ವದಂತಿಗಳಿಗೆ ಆಧಾರವಿಲ್ಲವೆಂದು ಗೊತ್ತಾಯಿತು’ ಎಂದರು.</p><p>***</p><p><strong>ರಾಜ್ಯದಲ್ಲಿ ಮೂವರ ಸಮಿತಿ ರಚನೆ</strong></p><p><strong>ಬೆಂಗಳೂರು</strong>: ಕರ್ನಾಟಕದಲ್ಲಿ ಚಳವಳಿ ಸಂಘಟಿಸಲು ಸರ್ವೋದಯ ನಾಯಕ ಜಯಪ್ರಕಾಶ ನಾರಾಯಣ್ ಅವರು ಮೂವರ ವ್ಯವಸ್ಥಾ ಸಮಿತಿಯೊಂದನ್ನು ರಚಿಸಿದ್ದಾರೆ.</p><p>ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಕೆ.ಎಸ್. ಹೆಗ್ಡೆಯವರು ಸಂಚಾಲಕರಾಗಿರುವ ಈ ಸಮಿತಿಯಲ್ಲಿ ಕಡಿದಾಳ್ ಮಂಜಪ್ಪ ಮತ್ತು ಪಿ. ವೆಂಕೋಬರಾವ್ ಅವರು ಸದಸ್ಯರು. ರಾಜ್ಯದಲ್ಲಿ 4 ದಿನಗಳ ಪ್ರವಾಸದ ನಂತರ ನಗರ ಬಿಡುವ ಮುನ್ನ ಜಯಪ್ರಕಾಶ ನಾರಾಯಣ್ ಅವರು ಈ ಸಮಿತಿ ರಚನೆ ಪ್ರಕಟಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಾಯಕತ್ವ ಪ್ರಶ್ನೆ: ದೆಹಲಿ ಮಾತುಕತೆ ಬಗ್ಗೆ ಅರಸು ತೃಪ್ತಿ</strong></p><p><strong>ಬೆಂಗಳೂರು:</strong> ರಾಜ್ಯದ ರಾಜಕೀಯ ಪರಿಸ್ಥಿತಿ, ಅದರಲ್ಲೂ ನಾಯಕತ್ವದ ಪ್ರಶ್ನೆ ಕುರಿತು ದೆಹಲಿಯಲ್ಲಿ ಕೇಂದ್ರದ ನಾಯಕರೊಡನೆ ನಡೆಸಿದ ಮಾತುಕತೆಯಿಂದ ತಮಗೆ ಸಂತೃಪ್ತಿಯಾಗಿದೆಯೆಂಬ ಸೂಚನೆಯನ್ನು ಮುಖ್ಯಮಂತ್ರಿ ದೇವರಾಜ ಅರಸು ಅವರು ಇಂದು ಇಲ್ಲಿ ನೀಡಿದರು.</p><p>ದೆಹಲಿಗೆ ಐದು ದಿನಗಳ ಭೇಟಿಯ ನಂತರ ಇಂದು ನಗರಕ್ಕೆ ಹಿಂದಿರುಗಿದ ಮುಖ್ಯಮಂತ್ರಿಯವರು ತಾವು ದೆಹಲಿಗೆ ತೆರಳುವ ಮುನ್ನ ಸಂಶಯದ ವಾತಾವರಣ ನಿರ್ಮಾಣವಾಗಿದ್ದು ಏನೇನೋ ವದಂತಿಗಳನ್ನು ಹರಡಲಾಗಿತ್ತೆಂದು ಹೇಳಿ ‘ದೆಹಲಿಗೆ ಹೋದಮೇಲೆ ಈ ವದಂತಿಗಳಿಗೆ ಆಧಾರವಿಲ್ಲವೆಂದು ಗೊತ್ತಾಯಿತು’ ಎಂದರು.</p><p>***</p><p><strong>ರಾಜ್ಯದಲ್ಲಿ ಮೂವರ ಸಮಿತಿ ರಚನೆ</strong></p><p><strong>ಬೆಂಗಳೂರು</strong>: ಕರ್ನಾಟಕದಲ್ಲಿ ಚಳವಳಿ ಸಂಘಟಿಸಲು ಸರ್ವೋದಯ ನಾಯಕ ಜಯಪ್ರಕಾಶ ನಾರಾಯಣ್ ಅವರು ಮೂವರ ವ್ಯವಸ್ಥಾ ಸಮಿತಿಯೊಂದನ್ನು ರಚಿಸಿದ್ದಾರೆ.</p><p>ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಕೆ.ಎಸ್. ಹೆಗ್ಡೆಯವರು ಸಂಚಾಲಕರಾಗಿರುವ ಈ ಸಮಿತಿಯಲ್ಲಿ ಕಡಿದಾಳ್ ಮಂಜಪ್ಪ ಮತ್ತು ಪಿ. ವೆಂಕೋಬರಾವ್ ಅವರು ಸದಸ್ಯರು. ರಾಜ್ಯದಲ್ಲಿ 4 ದಿನಗಳ ಪ್ರವಾಸದ ನಂತರ ನಗರ ಬಿಡುವ ಮುನ್ನ ಜಯಪ್ರಕಾಶ ನಾರಾಯಣ್ ಅವರು ಈ ಸಮಿತಿ ರಚನೆ ಪ್ರಕಟಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>