ಇಂದು ಸಾಯಂಕಾಲ ರಾಜಭವನದಲ್ಲಿ, ಸಿಂಹಳದಿಂದ ನಿನ್ನೆ ಬಂದ ನಾಲ್ಕು ಕಣ್ಣು ಗುಡ್ಡೆಗಳನ್ನುಳ್ಳ ಸಣ್ಣಪೆಟ್ಟಿಗೆಯೊಂದನ್ನು ಬಿಡುಗಡೆ ಮಾಡುವ ಮೂಲಕ, ರಾಜ್ಯಪಾಲ ಶ್ರೀ ಧರ್ಮವೀರ ಅವರು ಈ ಯೋಜನೆಯನ್ನು ಸಾಂಕೇತಿಕವಾಗಿ ಉದ್ಘಾಟಿಸಿದರು. ಇವುಗಳಲ್ಲಿ ಒಂದು ಜೊತೆ ಗುಡ್ಡೆಗಳನ್ನು ಸೇಂಟ್ ಮಾರ್ತಾ ಆಸ್ಪತ್ರೆಗೂ ಇನ್ನೊಂದು ಜತೆಯನ್ನು ಮಿಂಟೊ ಕಣ್ಣಾಸ್ಪತ್ರೆಗೂ
ನೀಡಲಾಗುವುದು.