ರಸಋಷಿ ಕುವೆಂಪು ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮ ಮರಾಠಿ, ಅಸ್ಸಾಮಿ ಮತ್ತು ಪಂಜಾಬಿ ಸಾಹಿತ್ಯ ವಿಮರ್ಶಕರು ಅನಿವಾರ್ಯವಾಗಿ ಭಾಗವಹಿಸಲು ಸಾಧ್ಯವಾಗದಿದ್ದರೂ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಇತರ ಭಾಷಾ ಸಾಹಿತಿಗಳ ಮೇಳವಾಗಿತ್ತು. ಕನ್ನಡಿಗರ ಸೌಜನ್ಯ, ಪರಿಷತ್ತಿನ ದೂರದೃಷ್ಟಿ ಮೆಚ್ಚುಗೆ ಪಡೆದವು. ಗೋಷ್ಠಿಯ ನಿರ್ದೇಶಕ ಡಾ. ರಂ.ಶ್ರೀ.ಮುಗಳಿ ಅವರು ನುಡಿದಂತೆ, ಭಿನ್ನತೆಯಲ್ಲಿ ಏಕತೆ ಇರುವ ಭಾರತಾಂಬೆಯ ವೈಶಿಷ್ಟ್ಯ ಬೆಳಗುವ ಸಂಕೇತ– ಆಯಾ ಭಾಷಾ ಕವಿ.