ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಶನಿವಾರ, 23–1–1971

Last Updated 22 ಜನವರಿ 2021, 19:30 IST
ಅಕ್ಷರ ಗಾತ್ರ

ವರ್ಣಭೇದ ನೀತಿ ಅನುಸರಿಸುವ ರಾಷ್ಟ್ರಗಳಿಗೆ ಎಲ್ಲ ನೆರವನ್ನೂ ನಿರಾಕರಿಸಲು ದೃಢ ನಿರ್ಧಾರ

ಸಿಂಗಪುರ, ಜ. 22– ವರ್ಣದ್ವೇಷ ನೀತಿಯನ್ನು ಅನುಸರಿಸುವ ರಾಷ್ಟ್ರಗಳಿಗೆ ಯಾವ ಬಗೆಯ ನೆರವನ್ನೂ ನೀಡದಿರಲು ಕಾಮನ್‌ವೆಲ್ತ್‌ ಒಕ್ಕೂಟಕ್ಕೆ ಸೇರಿದ 31 ರಾಷ್ಟ್ರಗಳು ಇಂದು ದೃಢ ನಿರ್ಧಾರ ಕೈಗೊಂಡವು.

ಸಮಾಜ ಕಂಟಕವಾದ ವರ್ಣದ್ವೇಷ ನೀತಿಯು ಮಾನವ ಜನಾಂಗದ ಪುರೋಭಿವೃದ್ಧಿಗೆ ಮಾರಕವಾದುದು ಎಂದು ಪರಿಗಣಿಸಿ, ‘ಇಂತಹ ಪ್ರವೃತ್ತಿ ಎಲ್ಲೇ ಕಂಡುಬಂದರೂ ಅದನ್ನು ದಮನಗೊಳಿಸಲು ನಾವು ಯತ್ನಿಸುತ್ತೇವೆ’ ಎಂದು ಈ ರಾಷ್ಟ್ರಗಳ ನಾಯಕರು ಘೋಷಿಸಿದರು.

ಬೆಂಗಳೂರಿನಿಂದ ಲೋಕಸಭೆಗೆ ಅಡಿಗರ ಸ್ಪರ್ಧೆ

ಮಂಗಳೂರು, ಜ. 22– ಬೆಂಗಳೂರು ನಗರ ಕ್ಷೇತ್ರದಿಂದ ಕನ್ನಡದ ಖ್ಯಾತ ಕವಿ ಪ್ರೊ. ಗೋಪಾಲಕೃಷ್ಣ ಅಡಿಗ ಅವರು ಜನಸಂಘದ ಅಭ್ಯರ್ಥಿಯಾಗಿ ಲೋಕಸಭೆಗೆ ಸ್ಪರ್ಧಿಸುತ್ತಾರೆಂದು ಭಾರತೀಯ ಜನಸಂಘದ ಕರ್ನಾಟಕ ಪ್ರಾಂತೀಯ ಸಮಿತಿಯ ಸಂಘಟನಾ ಕಾರ್ಯದರ್ಶಿ ಶ್ರೀ ಭಾವೂರಾವ್‌ ದೇಶಪಾಂಡೆ ಅವರು ಇಂದು ಇಲ್ಲಿ ಪತ್ರಕರ್ತರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT