<p><strong>ಕುಲಗೆಡುವ ಮತಗಳನ್ನು ಕಡಿಮೆ ಮಾಡಲು ಗುರುತಿನ ಸ್ವರೂಪ ಬದಲಾವಣೆ</strong></p>.<p>ಬೆಂಗಳೂರು, ಫೆ. 1–ಮತದಾನದಲ್ಲಿ ಮತಗಳು ಕುಲಗೆಡುವುದನ್ನು ಸಾಧ್ಯವಾದಷ್ಟೂ ಕಡಿಮೆ ಮಾಡಲು ಚುನಾವಣೆ ಆಯೋಗವು ಮತದಾರ ಒತ್ತುವ ಗುರುತಿನ ಸ್ವರೂಪವನ್ನು ಬದಲಾಯಿಸಿದೆ.</p>.<p>ಇಲ್ಲಿಯವರೆಗೆ ಮತದಾರರು ತಾವು ಬೆಂಬಲ ನೀಡುವ ಅಭ್ಯರ್ಥಿಯ ಸಂಕೇತದ ಮುಂದೆ ಆವೃತ್ತದೊಳಗಿನ ಕ್ರಾಸ್ ಮುದ್ರೆಯನ್ನು ಒತ್ತುತ್ತಿದ್ದರು. ವೋಟಿನ ಚೀಟಿಯನ್ನು ಮಡಿಸಿ ಹಾಕಿದಾಗ ಈ ಗುರುತು ಬೇರೆ ಕಡೆಯೂ ಬೀಳುವ ಸಂದರ್ಭಗಳಿದ್ದು, ಎಣಿಕೆ ಕಾಲದಲ್ಲಿ ವಿವಾದಗಳೇಳುತ್ತಿದ್ದವು. ಎಷ್ಟೋ ಮತಗಳು ಕುಲಗೆಡುತ್ತಿದ್ದವು.</p>.<p>ಈಗ ಹೊಸ ಗುರುತಿನಲ್ಲಿ ಬಾಣದ ಮೊನಚುಗಳಿವೆ. ಈ ಗುರುತಿನ ಪ್ರತಿಗುರುತು ಬೇರೆ ಕಡೆ ಬಿದ್ದರೂ ಅದು ತಿರುಗುಮುರುಗಾಗಿ ಬೀಳುವುದರಿಂದ ಮತದಾರನ ಇಚ್ಛೆ ಏನಾಗಿತ್ತೆಂಬುದನ್ನು ಸ್ಪಷ್ಟವಾಗಿ ತಿಳಿಯಲು ಸಾಧ್ಯವಾಗುತ್ತದೆ.</p>.<p><strong>ಅಪಹೃತ ವಿಮಾನದಲ್ಲಿ ಇದ್ದವರೆಲ್ಲ ಭೂಮಾರ್ಗದಲ್ಲಿ ಭಾರತಕ್ಕೆ ವಾಪಸು</strong></p>.<p>ನವದೆಹಲಿ, ಫೆ. 1–ಪಿಸ್ತೂಲಿನ ಬೆದರಿಕೆ ಒಡ್ಡಿ ಬಲಾತ್ಕಾರವಾಗಿ ಲಾಹೋರಿಗೆ ಅಪಹರಿಸಿಕೊಂಡು ಹೋಗಿದ್ದ ಭಾರತೀಯ ವಿಮಾನದ ನಾಲ್ವರು ಚಾಲಕ ವರ್ಗದವರು ಮತ್ತು 26 ಮಂದಿ ಪ್ರಯಾಣಿಕರು, ಪಾಕಿಸ್ತಾನದ ಪೊಲೀಸರ ಉಸ್ತುವಾರಿಯಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ಸ್ವದೇಶಕ್ಕೆ ಸುರಕ್ಷಿತವಾಗಿ ವಾಪಸಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಲಗೆಡುವ ಮತಗಳನ್ನು ಕಡಿಮೆ ಮಾಡಲು ಗುರುತಿನ ಸ್ವರೂಪ ಬದಲಾವಣೆ</strong></p>.<p>ಬೆಂಗಳೂರು, ಫೆ. 1–ಮತದಾನದಲ್ಲಿ ಮತಗಳು ಕುಲಗೆಡುವುದನ್ನು ಸಾಧ್ಯವಾದಷ್ಟೂ ಕಡಿಮೆ ಮಾಡಲು ಚುನಾವಣೆ ಆಯೋಗವು ಮತದಾರ ಒತ್ತುವ ಗುರುತಿನ ಸ್ವರೂಪವನ್ನು ಬದಲಾಯಿಸಿದೆ.</p>.<p>ಇಲ್ಲಿಯವರೆಗೆ ಮತದಾರರು ತಾವು ಬೆಂಬಲ ನೀಡುವ ಅಭ್ಯರ್ಥಿಯ ಸಂಕೇತದ ಮುಂದೆ ಆವೃತ್ತದೊಳಗಿನ ಕ್ರಾಸ್ ಮುದ್ರೆಯನ್ನು ಒತ್ತುತ್ತಿದ್ದರು. ವೋಟಿನ ಚೀಟಿಯನ್ನು ಮಡಿಸಿ ಹಾಕಿದಾಗ ಈ ಗುರುತು ಬೇರೆ ಕಡೆಯೂ ಬೀಳುವ ಸಂದರ್ಭಗಳಿದ್ದು, ಎಣಿಕೆ ಕಾಲದಲ್ಲಿ ವಿವಾದಗಳೇಳುತ್ತಿದ್ದವು. ಎಷ್ಟೋ ಮತಗಳು ಕುಲಗೆಡುತ್ತಿದ್ದವು.</p>.<p>ಈಗ ಹೊಸ ಗುರುತಿನಲ್ಲಿ ಬಾಣದ ಮೊನಚುಗಳಿವೆ. ಈ ಗುರುತಿನ ಪ್ರತಿಗುರುತು ಬೇರೆ ಕಡೆ ಬಿದ್ದರೂ ಅದು ತಿರುಗುಮುರುಗಾಗಿ ಬೀಳುವುದರಿಂದ ಮತದಾರನ ಇಚ್ಛೆ ಏನಾಗಿತ್ತೆಂಬುದನ್ನು ಸ್ಪಷ್ಟವಾಗಿ ತಿಳಿಯಲು ಸಾಧ್ಯವಾಗುತ್ತದೆ.</p>.<p><strong>ಅಪಹೃತ ವಿಮಾನದಲ್ಲಿ ಇದ್ದವರೆಲ್ಲ ಭೂಮಾರ್ಗದಲ್ಲಿ ಭಾರತಕ್ಕೆ ವಾಪಸು</strong></p>.<p>ನವದೆಹಲಿ, ಫೆ. 1–ಪಿಸ್ತೂಲಿನ ಬೆದರಿಕೆ ಒಡ್ಡಿ ಬಲಾತ್ಕಾರವಾಗಿ ಲಾಹೋರಿಗೆ ಅಪಹರಿಸಿಕೊಂಡು ಹೋಗಿದ್ದ ಭಾರತೀಯ ವಿಮಾನದ ನಾಲ್ವರು ಚಾಲಕ ವರ್ಗದವರು ಮತ್ತು 26 ಮಂದಿ ಪ್ರಯಾಣಿಕರು, ಪಾಕಿಸ್ತಾನದ ಪೊಲೀಸರ ಉಸ್ತುವಾರಿಯಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ಸ್ವದೇಶಕ್ಕೆ ಸುರಕ್ಷಿತವಾಗಿ ವಾಪಸಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>