<p><strong>ವಿರೋಧಿ ಸಭೆ ಚದುರಿಸುವ ಚಮತ್ಕಾರ ಯಂತ್ರ<br />ಇಂದೋರ್, ಫೆ. 16:</strong>ಮಧ್ಯಪ್ರದೇಶದ ಗ್ರಾಮಾಂತರ ಪ್ರದೇಶದಲ್ಲಿ ಪ್ರತಿಸ್ಪರ್ಧಿ ಮಾತನಾಡುತ್ತಿರುವ ಚುನಾವಣೆ ಸಭೆ ಯಿಂದ ಜನರ ಗಮನ ಪರಿಣಾಮಕಾರಿಯಾಗಿ ಬೇರೆ ಕಡೆಗೆ ತಿರುಗಿಸಲು ಅತ್ಯುತ್ತಮ ಸಾಧನ ಯಾವುದು?</p>.<p>ಆ ಪ್ರದೇಶದಲ್ಲೇ ಹೆಲಿಕಾಪ್ಟರನ್ನು ಇಳಿಸಿ ದರೆ, ಚುನಾವಣೆ ಸಭೆ ನಿರ್ಜನವಾಗುತ್ತದೆ. ಹಳ್ಳಿಗಾಡಿನ ಮುಗ್ಧ ಜನ ಹೆಲಿಕಾಪ್ಟರನ್ನು ನೋಡಲು ಓಡಿ ಬರುತ್ತಾರೆ.</p>.<p>ಕಳೆದ ಮಹಾ ಚುನಾವಣೆಗಳಲ್ಲಿ ಗ್ವಾಲಿ ಯರ್ನ ರಾಜಮಾತೆ ಈ ತಂತ್ರವನ್ನು ಅನುಸರಿಸಿದವರಲ್ಲಿ ಮೊದಲನೆಯವರು. ಆಡಳಿತ ಕಾಂಗ್ರೆಸ್ಸಿನ ಅಭ್ಯರ್ಥಿಗ್ವಾಲಿಯರ್ನಲ್ಲಿ ಸೋತರು. ತಮ್ಮ ಪ್ರತಿಸ್ಪರ್ಧಿ ಹೆಲಿಕಾಪ್ಟರನ್ನು ಬಳಸಿದ್ದು ತಮ್ಮ ಸೋಲಿಗೆ ಕಾರಣಗಳಲ್ಲೊಂದು ಎಂದು ಅವರು ಒಪ್ಪಿಕೊಂಡಿದ್ದಾರೆ. ಈ ಸಲ ಆಡಳಿತ ಕಾಂಗ್ರೆಸ್ ಪಕ್ಷವೂ ಸವಾಲನ್ನೆದುರಿ ಸಲು ಎರಡು ಹೆಲಿಕಾಪ್ಟರುಗಳನ್ನು ಹೊಂದಿದೆ.</p>.<p><strong>ಪಾಕಿಸ್ತಾನದಲ್ಲಿನ ಭಾರತ ರಾಯಭಾರಿಗೆ ದೆಹಲಿಗೆ ಬರಲು ಕರೆ<br />ನವದೆಹಲಿ, ಫೆ. 16: </strong>ಇಂಡಿಯನ್ ಏರ್ಲೈನ್ಸ್ನ ವಿಮಾನವನ್ನು ಅಪಹರಿಸಿ, ಅದನ್ನು ಸುಟ್ಟನಂತರ ಕಂಡುಬಂದ ಪಾಕಿ ಸ್ತಾನದ ಹಗೆತನದ ಮನೋಭಾವ ಕುರಿತು ತುರ್ತು ಸಮಾಲೋಚನೆಗಳನ್ನು ನಡೆಸಲು ದೆಹಲಿಗೆ ಬರುವಂತೆ, ಪಾಕಿಸ್ತಾನದಲ್ಲಿನ ತನ್ನ ಹೈಕಮಿಷನರರಿಗೆ ಭಾರತ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿರೋಧಿ ಸಭೆ ಚದುರಿಸುವ ಚಮತ್ಕಾರ ಯಂತ್ರ<br />ಇಂದೋರ್, ಫೆ. 16:</strong>ಮಧ್ಯಪ್ರದೇಶದ ಗ್ರಾಮಾಂತರ ಪ್ರದೇಶದಲ್ಲಿ ಪ್ರತಿಸ್ಪರ್ಧಿ ಮಾತನಾಡುತ್ತಿರುವ ಚುನಾವಣೆ ಸಭೆ ಯಿಂದ ಜನರ ಗಮನ ಪರಿಣಾಮಕಾರಿಯಾಗಿ ಬೇರೆ ಕಡೆಗೆ ತಿರುಗಿಸಲು ಅತ್ಯುತ್ತಮ ಸಾಧನ ಯಾವುದು?</p>.<p>ಆ ಪ್ರದೇಶದಲ್ಲೇ ಹೆಲಿಕಾಪ್ಟರನ್ನು ಇಳಿಸಿ ದರೆ, ಚುನಾವಣೆ ಸಭೆ ನಿರ್ಜನವಾಗುತ್ತದೆ. ಹಳ್ಳಿಗಾಡಿನ ಮುಗ್ಧ ಜನ ಹೆಲಿಕಾಪ್ಟರನ್ನು ನೋಡಲು ಓಡಿ ಬರುತ್ತಾರೆ.</p>.<p>ಕಳೆದ ಮಹಾ ಚುನಾವಣೆಗಳಲ್ಲಿ ಗ್ವಾಲಿ ಯರ್ನ ರಾಜಮಾತೆ ಈ ತಂತ್ರವನ್ನು ಅನುಸರಿಸಿದವರಲ್ಲಿ ಮೊದಲನೆಯವರು. ಆಡಳಿತ ಕಾಂಗ್ರೆಸ್ಸಿನ ಅಭ್ಯರ್ಥಿಗ್ವಾಲಿಯರ್ನಲ್ಲಿ ಸೋತರು. ತಮ್ಮ ಪ್ರತಿಸ್ಪರ್ಧಿ ಹೆಲಿಕಾಪ್ಟರನ್ನು ಬಳಸಿದ್ದು ತಮ್ಮ ಸೋಲಿಗೆ ಕಾರಣಗಳಲ್ಲೊಂದು ಎಂದು ಅವರು ಒಪ್ಪಿಕೊಂಡಿದ್ದಾರೆ. ಈ ಸಲ ಆಡಳಿತ ಕಾಂಗ್ರೆಸ್ ಪಕ್ಷವೂ ಸವಾಲನ್ನೆದುರಿ ಸಲು ಎರಡು ಹೆಲಿಕಾಪ್ಟರುಗಳನ್ನು ಹೊಂದಿದೆ.</p>.<p><strong>ಪಾಕಿಸ್ತಾನದಲ್ಲಿನ ಭಾರತ ರಾಯಭಾರಿಗೆ ದೆಹಲಿಗೆ ಬರಲು ಕರೆ<br />ನವದೆಹಲಿ, ಫೆ. 16: </strong>ಇಂಡಿಯನ್ ಏರ್ಲೈನ್ಸ್ನ ವಿಮಾನವನ್ನು ಅಪಹರಿಸಿ, ಅದನ್ನು ಸುಟ್ಟನಂತರ ಕಂಡುಬಂದ ಪಾಕಿ ಸ್ತಾನದ ಹಗೆತನದ ಮನೋಭಾವ ಕುರಿತು ತುರ್ತು ಸಮಾಲೋಚನೆಗಳನ್ನು ನಡೆಸಲು ದೆಹಲಿಗೆ ಬರುವಂತೆ, ಪಾಕಿಸ್ತಾನದಲ್ಲಿನ ತನ್ನ ಹೈಕಮಿಷನರರಿಗೆ ಭಾರತ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>