<p><strong>ರಾಜ್ಯ ವಿಧಾನಸಭೆ ವಿಸರ್ಜನೆ,ಅಕ್ಟೋಬರ್ನಲ್ಲಿ ಚುನಾವಣೆ</strong></p>.<p><strong>ನವದೆಹಲಿ, ಏ. 14– </strong>ರಾಷ್ಟ್ರಪತಿ ಶ್ರೀ ವಿ.ವಿ.ಗಿರಿ ಅವರು ಇಂದು ಮೈಸೂರು ವಿಧಾನ<br />ಸಭೆಯನ್ನು ವಿಸರ್ಜಿಸಿದ್ದಾರೆ.</p>.<p>ರಾಜ್ಯಪಾಲ ಶ್ರೀ ಧರ್ಮವೀರ ಅವರ ಶಿಫಾರಸಿನ ಮೇರೆಗೆ ರಾಷ್ಟ್ರಪತಿ ಈ ನಿರ್ಧಾರ ಕೈಗೊಂಡರು.</p>.<p>ಯಾವ ಪಕ್ಷವೂ ಒಂಟಿಯಾಗಿ ಅಥವಾ ಇತರ ಪಕ್ಷಗಳೊಡನೆ ಸೇರಿಕೊಂಡು ಮೈಸೂರು ರಾಜ್ಯದಲ್ಲಿ ಸುಭದ್ರ ಸರ್ಕಾರ ರಚಿಸುವ ಭರವಸೆ ನೀಡುವ ಸ್ಥಿತಿಯಲ್ಲಿ ಇಲ್ಲವೆಂದು ಶ್ರೀ ಧರ್ಮವೀರ ಅವರು ತಮ್ಮ ಇತ್ತೀಚಿನ ವರದಿಯಲ್ಲಿ ತಿಳಿಸಿದ್ದರೆಂದು ಗೊತ್ತಾಗಿದೆ.</p>.<p>ಕಳೆದ ತಿಂಗಳು ಮೈಸೂರು ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಬಂದಾಗಿನಿಂದಸ್ಥಗಿತಗೊಳಿಸಲಾಗಿದ್ದ ವಿಧಾನಸಭೆಯನ್ನು ವಿಸರ್ಜಿಸುವಂತೆ ಅವರು ಸಲಹೆ ಮಾಡಿದ್ದರು.</p>.<p><strong>ಮುಕ್ತಿ ಫೌಜ್ ಸಮರ ಸಾಮರ್ಥ್ಯದ ಬಗ್ಗೆ ಪಶ್ಚಿಮ ರಾಷ್ಟ್ರಗಳ ಮೆಚ್ಚುಗೆ</strong></p>.<p>ನ್ಯೂಯಾರ್ಕ್, ಏ. 14– ಎರಡು ವಾರಗಳಿಗೂ ಹೆಚ್ಚು ದಿನಗಳಿಂದ ಪಶ್ಚಿಮ ಪಾಕಿಸ್ತಾನದ ವ್ಯವಸ್ಥಿತ ಸೇನೆಯ ವಿರುದ್ಧ ಹೋರಾಟ ನಡೆಸಿರುವ ಬಾಂಗ್ಲಾ ದೇಶದ ಸ್ವಾತಂತ್ರ್ಯ ಹೋರಾಟಗಾರರ ಸಮರ ಸಾಮರ್ಥ್ಯವು ಪಶ್ಚಿಮ ರಾಷ್ಟ್ರಗಳ ಮೆಚ್ಚುಗೆ ಗಳಿಸಿದೆ.</p>.<p>ಪಶ್ಚಿಮ ಪಾಕಿಸ್ತಾನದ ವೃತ್ತಿನಿರತ ಸೈನಿಕರ ವ್ಯವಸ್ಥಿತ ದಮನ ಕಾರ್ಯಗಳ ವಿರುದ್ಧ ಸ್ವಾತಂತ್ರ್ಯ ಹೋರಾಟಗಾರರು ನಡೆಸಿರುವ ಕೆಚ್ಚೆದೆಯ ಸಮರ ತುಂಬ ಗಮನಾರ್ಹವಾದದ್ದು ಎಂದು<br />ಪಾಶ್ಚಿಮಾತ್ಯ ರಾಷ್ಟ್ರಗಳ ಗುಪ್ತ ವರದಿಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಜ್ಯ ವಿಧಾನಸಭೆ ವಿಸರ್ಜನೆ,ಅಕ್ಟೋಬರ್ನಲ್ಲಿ ಚುನಾವಣೆ</strong></p>.<p><strong>ನವದೆಹಲಿ, ಏ. 14– </strong>ರಾಷ್ಟ್ರಪತಿ ಶ್ರೀ ವಿ.ವಿ.ಗಿರಿ ಅವರು ಇಂದು ಮೈಸೂರು ವಿಧಾನ<br />ಸಭೆಯನ್ನು ವಿಸರ್ಜಿಸಿದ್ದಾರೆ.</p>.<p>ರಾಜ್ಯಪಾಲ ಶ್ರೀ ಧರ್ಮವೀರ ಅವರ ಶಿಫಾರಸಿನ ಮೇರೆಗೆ ರಾಷ್ಟ್ರಪತಿ ಈ ನಿರ್ಧಾರ ಕೈಗೊಂಡರು.</p>.<p>ಯಾವ ಪಕ್ಷವೂ ಒಂಟಿಯಾಗಿ ಅಥವಾ ಇತರ ಪಕ್ಷಗಳೊಡನೆ ಸೇರಿಕೊಂಡು ಮೈಸೂರು ರಾಜ್ಯದಲ್ಲಿ ಸುಭದ್ರ ಸರ್ಕಾರ ರಚಿಸುವ ಭರವಸೆ ನೀಡುವ ಸ್ಥಿತಿಯಲ್ಲಿ ಇಲ್ಲವೆಂದು ಶ್ರೀ ಧರ್ಮವೀರ ಅವರು ತಮ್ಮ ಇತ್ತೀಚಿನ ವರದಿಯಲ್ಲಿ ತಿಳಿಸಿದ್ದರೆಂದು ಗೊತ್ತಾಗಿದೆ.</p>.<p>ಕಳೆದ ತಿಂಗಳು ಮೈಸೂರು ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಬಂದಾಗಿನಿಂದಸ್ಥಗಿತಗೊಳಿಸಲಾಗಿದ್ದ ವಿಧಾನಸಭೆಯನ್ನು ವಿಸರ್ಜಿಸುವಂತೆ ಅವರು ಸಲಹೆ ಮಾಡಿದ್ದರು.</p>.<p><strong>ಮುಕ್ತಿ ಫೌಜ್ ಸಮರ ಸಾಮರ್ಥ್ಯದ ಬಗ್ಗೆ ಪಶ್ಚಿಮ ರಾಷ್ಟ್ರಗಳ ಮೆಚ್ಚುಗೆ</strong></p>.<p>ನ್ಯೂಯಾರ್ಕ್, ಏ. 14– ಎರಡು ವಾರಗಳಿಗೂ ಹೆಚ್ಚು ದಿನಗಳಿಂದ ಪಶ್ಚಿಮ ಪಾಕಿಸ್ತಾನದ ವ್ಯವಸ್ಥಿತ ಸೇನೆಯ ವಿರುದ್ಧ ಹೋರಾಟ ನಡೆಸಿರುವ ಬಾಂಗ್ಲಾ ದೇಶದ ಸ್ವಾತಂತ್ರ್ಯ ಹೋರಾಟಗಾರರ ಸಮರ ಸಾಮರ್ಥ್ಯವು ಪಶ್ಚಿಮ ರಾಷ್ಟ್ರಗಳ ಮೆಚ್ಚುಗೆ ಗಳಿಸಿದೆ.</p>.<p>ಪಶ್ಚಿಮ ಪಾಕಿಸ್ತಾನದ ವೃತ್ತಿನಿರತ ಸೈನಿಕರ ವ್ಯವಸ್ಥಿತ ದಮನ ಕಾರ್ಯಗಳ ವಿರುದ್ಧ ಸ್ವಾತಂತ್ರ್ಯ ಹೋರಾಟಗಾರರು ನಡೆಸಿರುವ ಕೆಚ್ಚೆದೆಯ ಸಮರ ತುಂಬ ಗಮನಾರ್ಹವಾದದ್ದು ಎಂದು<br />ಪಾಶ್ಚಿಮಾತ್ಯ ರಾಷ್ಟ್ರಗಳ ಗುಪ್ತ ವರದಿಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>