<p><strong>ಹೊಸ ಮಾದರಿ ಎಸ್ಎಸ್ಎಲ್ಸಿ ಪರೀಕ್ಷೆ ಇಂದು ಆರಂಭ<br />ಬೆಂಗಳೂರು, ಏ. 25– </strong>ಸುಮಾರು ಒಂದು ಲಕ್ಷ 22 ಸಾವಿರ ವಿದ್ಯಾರ್ಥಿ, ವಿದ್ಯಾರ್ಥಿನಿ ಯರು ಸೋಮವಾರ ಪ್ರಾರಂಭವಾಗಲಿ ರುವ ಮೈಸೂರು ಎಸ್ಎಸ್ಎಲ್ಸಿ ಪುನರ್ವಿಮರ್ಶಿತ ಯೋಜನೆ ಪರೀಕ್ಷೆಗೆ ಕುಳಿತಿದ್ದಾರೆ.</p>.<p>ಪುನರ್ವಿಮರ್ಶಿತ ಯೋಜನೆ ಪರೀಕ್ಷಾ ಕ್ರಮವನ್ನು ಜಾರಿಗೆ ತಂದಿರುವುದು ಇದೇ ಮೊದಲ ಬಾರಿ. ಅದರಲ್ಲಿ ಐಚ್ಛಿಕ ವಿಷಯಗಳು ಸೇರಿಲ್ಲ.</p>.<p>ಮತ್ತೊಂದು ಗಮನಾರ್ಹ ಅಂಶವೆಂದರೆ, ಯಾವುದೇ ಪ್ರಶ್ನೆಪತ್ರಿಕೆ ಯಲ್ಲಿ ಶೇ 35ರಷ್ಟು ಅಂಕ ಗಳಿಸಿದಲ್ಲಿ ಆ ವಿದ್ಯಾರ್ಥಿಯು ಪರೀಕ್ಷೆಯಲ್ಲಿ ನಪಾಸಾದರೂ ಮುಂದಿನ ಬಾರಿ ಆ ವಿಷಯದಲ್ಲಿ ಪರೀಕ್ಷೆಗೆ ಕೂರಬೇಕಾಗಿಲ್ಲ. ಈಗಾಗಲೇ ಮುಕ್ತಾಯವಾದ ಹಳೇ ಕ್ರಮದ ಎಸ್ಎಸ್ಎಲ್ಸಿ ಪರೀಕ್ಷೆಗೆ 82,200 ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕುಳಿತಿದ್ದರು.</p>.<p><strong>‘ಹಿಂದುಳಿದವರ ಪ್ರಗತಿಗೆ ಪ್ರಯತ್ನ ಪಡದಿದ್ದರೆ ಹಿಂದೂ ಧರ್ಮಕ್ಕೆ ಅಪಾಯ ಖಚಿತ’<br />ಬೆಂಗಳೂರು, ಏ. 25–</strong> ಧಾರ್ಮಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದವರ ಅಭಿವೃದ್ಧಿಗೆ ಯತ್ನಿಸದಿದ್ದಲ್ಲಿಹಿಂದೂ ಧರ್ಮಕ್ಕೆ ಅಪಾಯವಿದೆಯೆಂದು ಪೇಜಾವರ ಮಠಾಧೀಶ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳು ಇಂದು ಇಲ್ಲಿ ಎಚ್ಚರಿಕೆ ನೀಡಿದರು.</p>.<p>ವಿಶ್ವ ಹಿಂದೂ ಪರಿಷತ್ ವ್ಯವಸ್ಥೆ ಮಾಡಿದ್ದ ನಗರ ಸಮ್ಮೇಳನವನ್ನು ಬಸವನಗುಡಿಯ ವಾಸವಿ ಧರ್ಮಶಾಲೆ ಯಲ್ಲಿ ಉದ್ಘಾಟಿಸಿದ ಅವರು, ‘ನಮ್ಮ ಧರ್ಮ ಹೊರಗಿನ ಆಕ್ರಮಣಕ್ಕೆ ಭಯಪಡಬೇಕಾಗಿಲ್ಲ; ನಮ್ಮ ಶತ್ರು ನಮ್ಮಲ್ಲೇ ಇದ್ದಾನೆ. ಉದಾಸೀನ, ದೌರ್ಬಲ್ಯ, ಸ್ವಾರ್ಥ ಭಾವನೆಗಳೇ ನಮ್ಮ ಶತ್ರುಗಳು’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸ ಮಾದರಿ ಎಸ್ಎಸ್ಎಲ್ಸಿ ಪರೀಕ್ಷೆ ಇಂದು ಆರಂಭ<br />ಬೆಂಗಳೂರು, ಏ. 25– </strong>ಸುಮಾರು ಒಂದು ಲಕ್ಷ 22 ಸಾವಿರ ವಿದ್ಯಾರ್ಥಿ, ವಿದ್ಯಾರ್ಥಿನಿ ಯರು ಸೋಮವಾರ ಪ್ರಾರಂಭವಾಗಲಿ ರುವ ಮೈಸೂರು ಎಸ್ಎಸ್ಎಲ್ಸಿ ಪುನರ್ವಿಮರ್ಶಿತ ಯೋಜನೆ ಪರೀಕ್ಷೆಗೆ ಕುಳಿತಿದ್ದಾರೆ.</p>.<p>ಪುನರ್ವಿಮರ್ಶಿತ ಯೋಜನೆ ಪರೀಕ್ಷಾ ಕ್ರಮವನ್ನು ಜಾರಿಗೆ ತಂದಿರುವುದು ಇದೇ ಮೊದಲ ಬಾರಿ. ಅದರಲ್ಲಿ ಐಚ್ಛಿಕ ವಿಷಯಗಳು ಸೇರಿಲ್ಲ.</p>.<p>ಮತ್ತೊಂದು ಗಮನಾರ್ಹ ಅಂಶವೆಂದರೆ, ಯಾವುದೇ ಪ್ರಶ್ನೆಪತ್ರಿಕೆ ಯಲ್ಲಿ ಶೇ 35ರಷ್ಟು ಅಂಕ ಗಳಿಸಿದಲ್ಲಿ ಆ ವಿದ್ಯಾರ್ಥಿಯು ಪರೀಕ್ಷೆಯಲ್ಲಿ ನಪಾಸಾದರೂ ಮುಂದಿನ ಬಾರಿ ಆ ವಿಷಯದಲ್ಲಿ ಪರೀಕ್ಷೆಗೆ ಕೂರಬೇಕಾಗಿಲ್ಲ. ಈಗಾಗಲೇ ಮುಕ್ತಾಯವಾದ ಹಳೇ ಕ್ರಮದ ಎಸ್ಎಸ್ಎಲ್ಸಿ ಪರೀಕ್ಷೆಗೆ 82,200 ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕುಳಿತಿದ್ದರು.</p>.<p><strong>‘ಹಿಂದುಳಿದವರ ಪ್ರಗತಿಗೆ ಪ್ರಯತ್ನ ಪಡದಿದ್ದರೆ ಹಿಂದೂ ಧರ್ಮಕ್ಕೆ ಅಪಾಯ ಖಚಿತ’<br />ಬೆಂಗಳೂರು, ಏ. 25–</strong> ಧಾರ್ಮಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದವರ ಅಭಿವೃದ್ಧಿಗೆ ಯತ್ನಿಸದಿದ್ದಲ್ಲಿಹಿಂದೂ ಧರ್ಮಕ್ಕೆ ಅಪಾಯವಿದೆಯೆಂದು ಪೇಜಾವರ ಮಠಾಧೀಶ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳು ಇಂದು ಇಲ್ಲಿ ಎಚ್ಚರಿಕೆ ನೀಡಿದರು.</p>.<p>ವಿಶ್ವ ಹಿಂದೂ ಪರಿಷತ್ ವ್ಯವಸ್ಥೆ ಮಾಡಿದ್ದ ನಗರ ಸಮ್ಮೇಳನವನ್ನು ಬಸವನಗುಡಿಯ ವಾಸವಿ ಧರ್ಮಶಾಲೆ ಯಲ್ಲಿ ಉದ್ಘಾಟಿಸಿದ ಅವರು, ‘ನಮ್ಮ ಧರ್ಮ ಹೊರಗಿನ ಆಕ್ರಮಣಕ್ಕೆ ಭಯಪಡಬೇಕಾಗಿಲ್ಲ; ನಮ್ಮ ಶತ್ರು ನಮ್ಮಲ್ಲೇ ಇದ್ದಾನೆ. ಉದಾಸೀನ, ದೌರ್ಬಲ್ಯ, ಸ್ವಾರ್ಥ ಭಾವನೆಗಳೇ ನಮ್ಮ ಶತ್ರುಗಳು’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>