<p><strong>‘ವಿಜಯನಗರ ಉಕ್ಕು ಕಾರ್ಖಾನೆಸ್ಥಾಪನೆಗೆ ಸರ್ಕಾರ ಬದ್ಧ’<br />ನವದೆಹಲಿ, ನವೆಂಬರ್ 16– </strong>ಮೈಸೂರು ರಾಜ್ಯದ ವಿಜಯನಗರ ಮತ್ತು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಎರಡು ಹೊಸ ಉಕ್ಕು ಕಾರ್ಖಾನೆಗಳನ್ನು ಸ್ಥಾಪಿಸುವ ನಿರ್ಧಾರಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಉಕ್ಕು ಮತ್ತು ಗಣಿ ಖಾತೆ ಸಚಿವ ಮೋಹನ ಕುಮಾರಮಂಗಳಂ ಅವರು ಇಂದು ಲೋಕಸಭೆಯಲ್ಲಿ ತಿಳಿಸಿದರು.</p>.<p>ಸದರಿ ಉಕ್ಕು ಕಾರ್ಖಾನೆಗಳ ಗಾತ್ರ ಮತ್ತು ತತ್ಸಂಬಂಧಿ ವಿಷಯಗಳ ಬಗ್ಗೆ ಸರ್ಕಾರ ಈಗ ಪರಿಶೀಲನೆ ನಡೆಸುತ್ತಿದೆ. ಎರಡೂ ಕಾರ್ಖಾನೆಗಳ ಕಾರ್ಯಸಾಧ್ಯತೆಯ ವರದಿಗಳನ್ನು ಈಗ ಪರಿಶೀಲಿಸಲಾಗುತ್ತಿದ್ದು, ನಂತರ ಸರ್ಕಾರದ ನೀತಿಗೆ ಅನುಗುಣವಾಗಿ ಈ ಕಾರ್ಖಾನೆಗಳನ್ನು ನಡೆಸಲು ಹೊಸ ಸಂಸ್ಥೆಗಳನ್ನು ರಚಿಸಲಾಗುವುದು ಎಂದೂ ಸಚಿವರು ಹೇಳಿದರು.</p>.<p><strong>ಹತೋಟಿ ರೇಖೆ: ರಾಜಕೀಯ ಮಟ್ಟದ ಚರ್ಚೆಗೆ ಭುಟ್ಟೋ ಪತ್ರವಿಲ್ಲ–ಪ್ರಧಾನಿ<br />ನವದೆಹಲಿ, ನವೆಂಬರ್ 16– </strong>ಜಮ್ಮು ಕಾಶ್ಮೀರದಲ್ಲಿ ಹತೋಟಿ ರೇಖೆ ಗುರುತಿಸುವ ಪ್ರಶ್ನೆಯನ್ನು ರಾಜಕೀಯ ಮಟ್ಟದಲ್ಲಿ ಇತ್ಯರ್ಥಪಡಿಸಬೇಕೆಂದು ಸೂಚಿಸುವ ಯಾವ ಪತ್ರವೂ ಪಾಕಿಸ್ತಾನದ ಅಧ್ಯಕ್ಷ ಭುಟ್ಟೋ ಅವರಿಂದ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಬಂದಿಲ್ಲ.</p>.<p>ಇಲ್ಲಿ ಕೆಲವು ದಿನಗಳ ಹಿಂದೆ ಕರಾಚಿಯ ‘ಡಾನ್’ ಪತ್ರಿಕೆಯ ಬಾತ್ಮೀದಾರ ಗಜೀಮುಲ್ಲಾ ಅವರಿಗೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ಅವರು, ‘ಭುಟ್ಟೋ ಹಾಗೂ ನಮ್ಮ ನಡುವೆ ಪತ್ರ ವ್ಯವಹಾರ ನಡೆಯುತ್ತಿದ್ದಾಗ್ಯೂ ಅವರಿಂದ (ಭುಟ್ಟೋ) ಇಂಥ ಸಲಹೆ ಯಾವುದೂ ಬಂದಿಲ್ಲ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>‘ವಿಜಯನಗರ ಉಕ್ಕು ಕಾರ್ಖಾನೆಸ್ಥಾಪನೆಗೆ ಸರ್ಕಾರ ಬದ್ಧ’<br />ನವದೆಹಲಿ, ನವೆಂಬರ್ 16– </strong>ಮೈಸೂರು ರಾಜ್ಯದ ವಿಜಯನಗರ ಮತ್ತು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಎರಡು ಹೊಸ ಉಕ್ಕು ಕಾರ್ಖಾನೆಗಳನ್ನು ಸ್ಥಾಪಿಸುವ ನಿರ್ಧಾರಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಉಕ್ಕು ಮತ್ತು ಗಣಿ ಖಾತೆ ಸಚಿವ ಮೋಹನ ಕುಮಾರಮಂಗಳಂ ಅವರು ಇಂದು ಲೋಕಸಭೆಯಲ್ಲಿ ತಿಳಿಸಿದರು.</p>.<p>ಸದರಿ ಉಕ್ಕು ಕಾರ್ಖಾನೆಗಳ ಗಾತ್ರ ಮತ್ತು ತತ್ಸಂಬಂಧಿ ವಿಷಯಗಳ ಬಗ್ಗೆ ಸರ್ಕಾರ ಈಗ ಪರಿಶೀಲನೆ ನಡೆಸುತ್ತಿದೆ. ಎರಡೂ ಕಾರ್ಖಾನೆಗಳ ಕಾರ್ಯಸಾಧ್ಯತೆಯ ವರದಿಗಳನ್ನು ಈಗ ಪರಿಶೀಲಿಸಲಾಗುತ್ತಿದ್ದು, ನಂತರ ಸರ್ಕಾರದ ನೀತಿಗೆ ಅನುಗುಣವಾಗಿ ಈ ಕಾರ್ಖಾನೆಗಳನ್ನು ನಡೆಸಲು ಹೊಸ ಸಂಸ್ಥೆಗಳನ್ನು ರಚಿಸಲಾಗುವುದು ಎಂದೂ ಸಚಿವರು ಹೇಳಿದರು.</p>.<p><strong>ಹತೋಟಿ ರೇಖೆ: ರಾಜಕೀಯ ಮಟ್ಟದ ಚರ್ಚೆಗೆ ಭುಟ್ಟೋ ಪತ್ರವಿಲ್ಲ–ಪ್ರಧಾನಿ<br />ನವದೆಹಲಿ, ನವೆಂಬರ್ 16– </strong>ಜಮ್ಮು ಕಾಶ್ಮೀರದಲ್ಲಿ ಹತೋಟಿ ರೇಖೆ ಗುರುತಿಸುವ ಪ್ರಶ್ನೆಯನ್ನು ರಾಜಕೀಯ ಮಟ್ಟದಲ್ಲಿ ಇತ್ಯರ್ಥಪಡಿಸಬೇಕೆಂದು ಸೂಚಿಸುವ ಯಾವ ಪತ್ರವೂ ಪಾಕಿಸ್ತಾನದ ಅಧ್ಯಕ್ಷ ಭುಟ್ಟೋ ಅವರಿಂದ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಬಂದಿಲ್ಲ.</p>.<p>ಇಲ್ಲಿ ಕೆಲವು ದಿನಗಳ ಹಿಂದೆ ಕರಾಚಿಯ ‘ಡಾನ್’ ಪತ್ರಿಕೆಯ ಬಾತ್ಮೀದಾರ ಗಜೀಮುಲ್ಲಾ ಅವರಿಗೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ಅವರು, ‘ಭುಟ್ಟೋ ಹಾಗೂ ನಮ್ಮ ನಡುವೆ ಪತ್ರ ವ್ಯವಹಾರ ನಡೆಯುತ್ತಿದ್ದಾಗ್ಯೂ ಅವರಿಂದ (ಭುಟ್ಟೋ) ಇಂಥ ಸಲಹೆ ಯಾವುದೂ ಬಂದಿಲ್ಲ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>