‘ವಿಜಯನಗರ ಉಕ್ಕು ಕಾರ್ಖಾನೆಸ್ಥಾಪನೆಗೆ ಸರ್ಕಾರ ಬದ್ಧ’
ನವದೆಹಲಿ, ನವೆಂಬರ್ 16– ಮೈಸೂರು ರಾಜ್ಯದ ವಿಜಯನಗರ ಮತ್ತು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಎರಡು ಹೊಸ ಉಕ್ಕು ಕಾರ್ಖಾನೆಗಳನ್ನು ಸ್ಥಾಪಿಸುವ ನಿರ್ಧಾರಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಉಕ್ಕು ಮತ್ತು ಗಣಿ ಖಾತೆ ಸಚಿವ ಮೋಹನ ಕುಮಾರಮಂಗಳಂ ಅವರು ಇಂದು ಲೋಕಸಭೆಯಲ್ಲಿ ತಿಳಿಸಿದರು.