ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಶನಿವಾರ, ನವೆಂಬರ್‌ 18, 2072

Last Updated 17 ನವೆಂಬರ್ 2022, 18:45 IST
ಅಕ್ಷರ ಗಾತ್ರ

ವಾರದೊಳಗಾಗಿ ಕೃಷ್ಣಾ ನಾಲೆ ಕೆಲಸ ಆರಂಭ: 2 ಕೋಟಿ ರೂ. ನೀಡಿಕೆ
ಕಲ್ಬುರ್ಗಿ ನ. 17– ಮೇಲಣ ಕೃಷ್ಣಾ ಯೋಜನೆಯ ನಾಲೆ ಕೆಲಸ ಪ್ರಾರಂಭಿಸಲು ರಾಜ್ಯ ಸರ್ಕಾರ ಎರಡು ಕೋಟಿ ರೂಪಾಯಿ ಮಂಜೂರು ಮಾಡಿದೆ. ಒಂದು ವಾರದೊಳಗೆ ಕೆಲಸ ಆರಂಭವಾಗುವುದೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನಾಲೆ ಕೆಲಸಕ್ಕಾಗಿ ರಚಿಸಲಿರುವ ಕಾರ್ಮಿಕ ಶಿಬಿರಗಳಿಗೆ ಕೊನೆಯ ಪಕ್ಷ 10 ಸಹಸ್ರ ಕಾರ್ಮಿಕರನ್ನು ಕಳುಹಿಸಲು ಜಿಲ್ಲಾಧಿಕಾರಿ ಶ್ರೀ ಬಾಲಸುಬ್ರಹ್ಮಣಿಯನ್‌ ಅವರು ತಾಲ್ಲೂಕು ಬೋರ್ಡ್‌ಗಳಿಗೆ ಮನವಿ ಮಾಡಿದ್ದಾರೆ. ಸರ್ಕಾರ ವ್ಯವಸ್ಥೆಗೊಳಿಸುವ ಈ ಶಿಬಿರಗಳಲ್ಲಿ ಧಾನ್ಯ ಪೂರೈಕೆ ಮತ್ತು ವೈದ್ಯಕೀಯ ನೆರವಿನ ವ್ಯವಸ್ಥೆ ಮಾಡಲಾಗುವುದೆಂದು ಅವರು ತಿಳಿಸಿದ್ದಾರೆ. ನಾಸಾ ಕೆಲಸದಲ್ಲಿ 10ರಿಂದ 15 ಸಹಸ್ರ ಜನರಿಗೆ ಉದ್ಯೋಗ ಒದಗಿಸಲಾಗುವುದೆಂದು ಜಿಲ್ಲಾಧಿಕಾರಿಗಳು ಪ್ರಕಟಿಸಿದ್ದಾರೆ.

ಸಿ.ಐ.ಎ ಚಟುವಟಿಕೆ ಹತ್ತಿಕ್ಕಲು ಬಲವಾದ ಗೂಢಚಾರ ಜಾಲ ರಚನೆಗೆ ರಾಜ್ಯಸಭೆ ಒತ್ತಾಯ
ನವದೆಹಲಿ, ನ. 17– ಸಿ.ಐ.ಎ. ಚಟುವಟಿಕೆಗಳನ್ನು ಪರಿಣಾಮಕರವಾಗಿ ಹತ್ತಿಕ್ಕಲು ಭಾರತೀಯ ಗೂಢಚಾರ ಜಾಲವನ್ನು ಬಲಪಡಿಸಬೇಕೆಂದು ಕಾಂಗ್ರೆಸ್‌ ಮತ್ತು ವಿರೋಧ ಪಕ್ಷಗಳೆರಡೂ ಇಂದು ರಾಜ್ಯಸಭೆಯಲ್ಲಿ ಸರ್ಕಾರವನ್ನು ಒತ್ತಾಯಪಡಿಸಿದವು.

ಭಾರತದಲ್ಲಿ ವಿದೇಶೀ ಗೂಢಚಾರ ಸಂಸ್ಥೆಗಳ ಚಟುವಟಿಕೆ ಕುರಿತ ನಿರ್ಣಯದ ಮೇಲೆ ಚರ್ಚೆ ಆರಂಭಿಸುವ ಸಂಸ್ಥಾ ಕಾಂಗ್ರೆಸ್‌ ಸದಸ್ಯ ಶಾಮಲಾಲ್‌ ಮಿಶ್ರಾ ಅವರು, ವಿದೇಶೀ ರಹಸ್ಯ ಕೈವಾಡ ತನಿಖೆಗಾಗಿ ಸುಪ್ರೀಂ ಕೋರ್ಟ್‌ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಉನ್ನತಾಧಿಕಾರ ಆಯೋಗ ಒಂದನ್ನು ರಚಿಸಬೇಕೆಂದು ಒತ್ತಾಯಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT