<p><strong>ವಾರದೊಳಗಾಗಿ ಕೃಷ್ಣಾ ನಾಲೆ ಕೆಲಸ ಆರಂಭ: 2 ಕೋಟಿ ರೂ. ನೀಡಿಕೆ</strong><br /><strong>ಕಲ್ಬುರ್ಗಿ ನ. 17–</strong> ಮೇಲಣ ಕೃಷ್ಣಾ ಯೋಜನೆಯ ನಾಲೆ ಕೆಲಸ ಪ್ರಾರಂಭಿಸಲು ರಾಜ್ಯ ಸರ್ಕಾರ ಎರಡು ಕೋಟಿ ರೂಪಾಯಿ ಮಂಜೂರು ಮಾಡಿದೆ. ಒಂದು ವಾರದೊಳಗೆ ಕೆಲಸ ಆರಂಭವಾಗುವುದೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.</p>.<p>ನಾಲೆ ಕೆಲಸಕ್ಕಾಗಿ ರಚಿಸಲಿರುವ ಕಾರ್ಮಿಕ ಶಿಬಿರಗಳಿಗೆ ಕೊನೆಯ ಪಕ್ಷ 10 ಸಹಸ್ರ ಕಾರ್ಮಿಕರನ್ನು ಕಳುಹಿಸಲು ಜಿಲ್ಲಾಧಿಕಾರಿ ಶ್ರೀ ಬಾಲಸುಬ್ರಹ್ಮಣಿಯನ್ ಅವರು ತಾಲ್ಲೂಕು ಬೋರ್ಡ್ಗಳಿಗೆ ಮನವಿ ಮಾಡಿದ್ದಾರೆ. ಸರ್ಕಾರ ವ್ಯವಸ್ಥೆಗೊಳಿಸುವ ಈ ಶಿಬಿರಗಳಲ್ಲಿ ಧಾನ್ಯ ಪೂರೈಕೆ ಮತ್ತು ವೈದ್ಯಕೀಯ ನೆರವಿನ ವ್ಯವಸ್ಥೆ ಮಾಡಲಾಗುವುದೆಂದು ಅವರು ತಿಳಿಸಿದ್ದಾರೆ. ನಾಸಾ ಕೆಲಸದಲ್ಲಿ 10ರಿಂದ 15 ಸಹಸ್ರ ಜನರಿಗೆ ಉದ್ಯೋಗ ಒದಗಿಸಲಾಗುವುದೆಂದು ಜಿಲ್ಲಾಧಿಕಾರಿಗಳು ಪ್ರಕಟಿಸಿದ್ದಾರೆ.</p>.<p><strong>ಸಿ.ಐ.ಎ ಚಟುವಟಿಕೆ ಹತ್ತಿಕ್ಕಲು ಬಲವಾದ ಗೂಢಚಾರ ಜಾಲ ರಚನೆಗೆ ರಾಜ್ಯಸಭೆ ಒತ್ತಾಯ</strong><br /><strong>ನವದೆಹಲಿ, ನ. 17</strong>– ಸಿ.ಐ.ಎ. ಚಟುವಟಿಕೆಗಳನ್ನು ಪರಿಣಾಮಕರವಾಗಿ ಹತ್ತಿಕ್ಕಲು ಭಾರತೀಯ ಗೂಢಚಾರ ಜಾಲವನ್ನು ಬಲಪಡಿಸಬೇಕೆಂದು ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳೆರಡೂ ಇಂದು ರಾಜ್ಯಸಭೆಯಲ್ಲಿ ಸರ್ಕಾರವನ್ನು ಒತ್ತಾಯಪಡಿಸಿದವು.</p>.<p>ಭಾರತದಲ್ಲಿ ವಿದೇಶೀ ಗೂಢಚಾರ ಸಂಸ್ಥೆಗಳ ಚಟುವಟಿಕೆ ಕುರಿತ ನಿರ್ಣಯದ ಮೇಲೆ ಚರ್ಚೆ ಆರಂಭಿಸುವ ಸಂಸ್ಥಾ ಕಾಂಗ್ರೆಸ್ ಸದಸ್ಯ ಶಾಮಲಾಲ್ ಮಿಶ್ರಾ ಅವರು, ವಿದೇಶೀ ರಹಸ್ಯ ಕೈವಾಡ ತನಿಖೆಗಾಗಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಉನ್ನತಾಧಿಕಾರ ಆಯೋಗ ಒಂದನ್ನು ರಚಿಸಬೇಕೆಂದು ಒತ್ತಾಯಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಾರದೊಳಗಾಗಿ ಕೃಷ್ಣಾ ನಾಲೆ ಕೆಲಸ ಆರಂಭ: 2 ಕೋಟಿ ರೂ. ನೀಡಿಕೆ</strong><br /><strong>ಕಲ್ಬುರ್ಗಿ ನ. 17–</strong> ಮೇಲಣ ಕೃಷ್ಣಾ ಯೋಜನೆಯ ನಾಲೆ ಕೆಲಸ ಪ್ರಾರಂಭಿಸಲು ರಾಜ್ಯ ಸರ್ಕಾರ ಎರಡು ಕೋಟಿ ರೂಪಾಯಿ ಮಂಜೂರು ಮಾಡಿದೆ. ಒಂದು ವಾರದೊಳಗೆ ಕೆಲಸ ಆರಂಭವಾಗುವುದೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.</p>.<p>ನಾಲೆ ಕೆಲಸಕ್ಕಾಗಿ ರಚಿಸಲಿರುವ ಕಾರ್ಮಿಕ ಶಿಬಿರಗಳಿಗೆ ಕೊನೆಯ ಪಕ್ಷ 10 ಸಹಸ್ರ ಕಾರ್ಮಿಕರನ್ನು ಕಳುಹಿಸಲು ಜಿಲ್ಲಾಧಿಕಾರಿ ಶ್ರೀ ಬಾಲಸುಬ್ರಹ್ಮಣಿಯನ್ ಅವರು ತಾಲ್ಲೂಕು ಬೋರ್ಡ್ಗಳಿಗೆ ಮನವಿ ಮಾಡಿದ್ದಾರೆ. ಸರ್ಕಾರ ವ್ಯವಸ್ಥೆಗೊಳಿಸುವ ಈ ಶಿಬಿರಗಳಲ್ಲಿ ಧಾನ್ಯ ಪೂರೈಕೆ ಮತ್ತು ವೈದ್ಯಕೀಯ ನೆರವಿನ ವ್ಯವಸ್ಥೆ ಮಾಡಲಾಗುವುದೆಂದು ಅವರು ತಿಳಿಸಿದ್ದಾರೆ. ನಾಸಾ ಕೆಲಸದಲ್ಲಿ 10ರಿಂದ 15 ಸಹಸ್ರ ಜನರಿಗೆ ಉದ್ಯೋಗ ಒದಗಿಸಲಾಗುವುದೆಂದು ಜಿಲ್ಲಾಧಿಕಾರಿಗಳು ಪ್ರಕಟಿಸಿದ್ದಾರೆ.</p>.<p><strong>ಸಿ.ಐ.ಎ ಚಟುವಟಿಕೆ ಹತ್ತಿಕ್ಕಲು ಬಲವಾದ ಗೂಢಚಾರ ಜಾಲ ರಚನೆಗೆ ರಾಜ್ಯಸಭೆ ಒತ್ತಾಯ</strong><br /><strong>ನವದೆಹಲಿ, ನ. 17</strong>– ಸಿ.ಐ.ಎ. ಚಟುವಟಿಕೆಗಳನ್ನು ಪರಿಣಾಮಕರವಾಗಿ ಹತ್ತಿಕ್ಕಲು ಭಾರತೀಯ ಗೂಢಚಾರ ಜಾಲವನ್ನು ಬಲಪಡಿಸಬೇಕೆಂದು ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳೆರಡೂ ಇಂದು ರಾಜ್ಯಸಭೆಯಲ್ಲಿ ಸರ್ಕಾರವನ್ನು ಒತ್ತಾಯಪಡಿಸಿದವು.</p>.<p>ಭಾರತದಲ್ಲಿ ವಿದೇಶೀ ಗೂಢಚಾರ ಸಂಸ್ಥೆಗಳ ಚಟುವಟಿಕೆ ಕುರಿತ ನಿರ್ಣಯದ ಮೇಲೆ ಚರ್ಚೆ ಆರಂಭಿಸುವ ಸಂಸ್ಥಾ ಕಾಂಗ್ರೆಸ್ ಸದಸ್ಯ ಶಾಮಲಾಲ್ ಮಿಶ್ರಾ ಅವರು, ವಿದೇಶೀ ರಹಸ್ಯ ಕೈವಾಡ ತನಿಖೆಗಾಗಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಉನ್ನತಾಧಿಕಾರ ಆಯೋಗ ಒಂದನ್ನು ರಚಿಸಬೇಕೆಂದು ಒತ್ತಾಯಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>