<p><strong>ವರ್ಷದಲ್ಲಿ ಎರಡನೇ ಬಾರಿ ಜನತೆಗೆ ಮತ್ತಷ್ಟು ಕರಭಾರ</strong></p>.<p><strong>ನವದೆಹಲಿ,</strong> ಜುಲೈ 22– ಕೇಂದ್ರ ಸರ್ಕಾರವು ಈ ವರ್ಷ ಎರಡನೇ ಬಾರಿಗೆ ಮತ್ತಷ್ಟು ತೆರಿಗೆ ವಿಧಿಸಿದೆ.</p>.<p>ಈ ಬಗ್ಗೆ ಹೆಚ್ಚುವರಿ ಮುಂಗಡಪತ್ರವನ್ನು ಈ ತಿಂಗಳ 30ರಂದು ಮಂಡಿಸಲಾಗುವುದು ಎಂದು ಕೇಂದ್ರ ಸಂಸತ್ ವ್ಯವಹಾರ ಖಾತೆ ಸಚಿವ ಕೆ. ರಘುರಾಮಯ್ಯ ಅವರು ಇಂದು ಲೋಕಸಭೆಗೆ ತಿಳಿಸಿದರು.</p>.<p>ಹಣದುಬ್ಬರವನ್ನು ತಡೆಗಟ್ಟಲು ಮತ್ತಷ್ಟು ಕ್ರಮಗಳನ್ನು ಕೈಗೊಳ್ಳುವುದಕ್ಕೆ ಈ ವಿಧೇಯಕ ಅನುವು ಮಾಡಿಕೊಡುತ್ತದೆಂದೂ ರಘುರಾಮಯ್ಯ ಅವರು ತಿಳಿಸಿದರು.</p>.<p><strong>ಗಡಿ ತಂಟೆ ಮಾಡಿದರೆ ಪಾಕ್ಗೆ ತಕ್ಕ ಶಾಸ್ತಿ: ರಾಂ ಎಚ್ಚರಿಕೆ</strong></p>.<p><strong>ನವದೆಹಲಿ,</strong> ಜುಲೈ 22– ಪಾಕಿಸ್ತಾನವು ಗಡಿಯಲ್ಲೇನಾದರೂ ತಂಟೆ ಮಾಡಿದರೆ ಭಾರತವು ಅದರ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ರಕ್ಷಣಾ ಸಚಿವ ಜಗಜೀವನ ರಾಂ ಅವರು ಇಂದು ಎಚ್ಚರಿಕೆ ನೀಡಿದರು.</p>.<p>‘ಸಶಸ್ತ್ರ ಪಡೆಗಳು ಜಾಗರೂಕವಾಗಿವೆ. ಯಾವುದೇ ಪರಿಸ್ಥಿತಿ ಎದುರಿಸಲು ಸನ್ನದ್ಧ<br>ವಾಗಿವೆ’ ಎಂದು ರಾಜ್ಯಸಭೆಯಲ್ಲಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವರ್ಷದಲ್ಲಿ ಎರಡನೇ ಬಾರಿ ಜನತೆಗೆ ಮತ್ತಷ್ಟು ಕರಭಾರ</strong></p>.<p><strong>ನವದೆಹಲಿ,</strong> ಜುಲೈ 22– ಕೇಂದ್ರ ಸರ್ಕಾರವು ಈ ವರ್ಷ ಎರಡನೇ ಬಾರಿಗೆ ಮತ್ತಷ್ಟು ತೆರಿಗೆ ವಿಧಿಸಿದೆ.</p>.<p>ಈ ಬಗ್ಗೆ ಹೆಚ್ಚುವರಿ ಮುಂಗಡಪತ್ರವನ್ನು ಈ ತಿಂಗಳ 30ರಂದು ಮಂಡಿಸಲಾಗುವುದು ಎಂದು ಕೇಂದ್ರ ಸಂಸತ್ ವ್ಯವಹಾರ ಖಾತೆ ಸಚಿವ ಕೆ. ರಘುರಾಮಯ್ಯ ಅವರು ಇಂದು ಲೋಕಸಭೆಗೆ ತಿಳಿಸಿದರು.</p>.<p>ಹಣದುಬ್ಬರವನ್ನು ತಡೆಗಟ್ಟಲು ಮತ್ತಷ್ಟು ಕ್ರಮಗಳನ್ನು ಕೈಗೊಳ್ಳುವುದಕ್ಕೆ ಈ ವಿಧೇಯಕ ಅನುವು ಮಾಡಿಕೊಡುತ್ತದೆಂದೂ ರಘುರಾಮಯ್ಯ ಅವರು ತಿಳಿಸಿದರು.</p>.<p><strong>ಗಡಿ ತಂಟೆ ಮಾಡಿದರೆ ಪಾಕ್ಗೆ ತಕ್ಕ ಶಾಸ್ತಿ: ರಾಂ ಎಚ್ಚರಿಕೆ</strong></p>.<p><strong>ನವದೆಹಲಿ,</strong> ಜುಲೈ 22– ಪಾಕಿಸ್ತಾನವು ಗಡಿಯಲ್ಲೇನಾದರೂ ತಂಟೆ ಮಾಡಿದರೆ ಭಾರತವು ಅದರ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ರಕ್ಷಣಾ ಸಚಿವ ಜಗಜೀವನ ರಾಂ ಅವರು ಇಂದು ಎಚ್ಚರಿಕೆ ನೀಡಿದರು.</p>.<p>‘ಸಶಸ್ತ್ರ ಪಡೆಗಳು ಜಾಗರೂಕವಾಗಿವೆ. ಯಾವುದೇ ಪರಿಸ್ಥಿತಿ ಎದುರಿಸಲು ಸನ್ನದ್ಧ<br>ವಾಗಿವೆ’ ಎಂದು ರಾಜ್ಯಸಭೆಯಲ್ಲಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>