ನವದೆಹಲಿ, ಮಾರ್ಚ್ 28– ಒಂದು ವರ್ಷದ ಹಿಂದೆ ಗೋಧಿ ಸಗಟು ವ್ಯಾಪಾರವನ್ನು ಸರಕಾರ ಸ್ವಾಧೀನಪಡಿಸಿಕೊಂಡ ನೀತಿ ಅಂತ್ಯಗೊಂಡು, ಲಭ್ಯವಿರುವ ಗೋಧಿ ಪ್ರಮಾಣ ಹೆಚ್ಚಿಸುವುದಕ್ಕಾಗಿ ಸಂಗ್ರಹ ಮತ್ತು ಸರಕಾರಿ ಮಾರಾಟ ಬೆಲೆಗಳನ್ನು ವಿಪರೀತ ಏರಿಸಿರುವುದನ್ನು ಕೇಂದ್ರ ಆಹಾರ ಮತ್ತು ಕೃಷಿ ಸಚಿವ ಫಕ್ರುದ್ದೀನ್ ಅಲೀ ಅಹಮದ್ ಅವರು ಇಂದು ಲೋಕಸಭೆಯಲ್ಲಿ ವಿಧ್ಯುಕ್ತವಾಗಿ ಪ್ರಕಟಿಸಿದರು.