<p><strong>ಬುಧವಾರ, 17–7–1974</strong></p><p>ಸೈಪ್ರಸ್ ಸೇನಾಕ್ರಾಂತಿ ಯಶಸ್ವಿಯಾಗಿಲ್ಲ: ಮಕಾರಿಯೋಸ್ ಹೇಳಿಕೆ</p><p>ಬೈರೂತ್, ಜುಲೈ 16– ಸೈಪ್ರಸ್ನಲ್ಲಿ ನಡೆದ ಕ್ಷಿಪ್ರ ಸೇನಾಕ್ರಾಂತಿ ಎದುರಿಸುವುದರಲ್ಲಿ ಜನತೆಗೆ ನೆರವು ನೀಡಬೇಕೆಂದು ಅಧ್ಯಕ್ಷ ಮಕಾರಿಯೋಸ್ ಅವರು ಇಂದು ವಿಶ್ವದ ಶಕ್ತಿ ರಾಷ್ಟ್ರಗಳಲ್ಲಿ ಮನವಿ ಮಾಡಿಕೊಂಡ ವಿಷಯವನ್ನು ಬೈರೂತ್ ರೇಡಿಯೊ ಬಿತ್ತರಿಸಿತು.</p><p>ಜನತಾ ವಿರೋಧದ ಕಾರಣ ಸೇನಾಕ್ರಾಂತಿ ಫಲಿಸಿಲ್ಲ. ‘ನಾನಿನ್ನೂ ಜೀವಂತ<br>ವಾಗಿದ್ದೇನೆ’ ಎಂದು ಮಕಾರಿಯೋಸ್ ಹೇಳಿದರೆಂದು ಅದೇ ರೇಡಿಯೊ ತಿಳಿಸಿತು.</p><p>ಆರ್ಚ್ ಬಿಷಪ್ ಮಕಾರಿಯೋಸ್ ಅವರು ಸೇನಾಕ್ರಾಂತಿಯಲ್ಲಿ ಸತ್ತುಹೋದರೆಂದು ಬಂಡಾಯ ರೇಡಿಯೊ ಬಿತ್ತರಿಸಿತ್ತು.</p><p>ಕೇಂದ್ರ, ರಾಜ್ಯ ಸರ್ಕಾರಗಳ ಬಲ ಕುಗ್ಗಿಸಲು ವಿರೋಧ ಪಕ್ಷಗಳ ಯತ್ನ</p><p>ಭೋಪಾಲ್, ಜುಲೈ 16– ವಿರೋಧ ಪಕ್ಷಗಳು ‘ಭ್ರಷ್ಟಾಚಾರದ ಸುಳ್ಳು ಆಪಾದನೆಗಳನ್ನು’ ಮಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರ<br>ಗಳನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿವೆ ಎಂದು ಪ್ರಧಾನಿ ಇಂದಿರಾ ಗಾಂಧಿಯವರು ಆರೋಪಿಸಿದ್ದಾರೆ.</p><p>ವಿರೋಧ ಪಕ್ಷಗಳು ದೇಶದ ಆರ್ಥಿಕ ಸಮಸ್ಯೆಗಳನ್ನು ನಿವಾರಣೆ ಮಾಡಲು ಸರ್ಕಾರಕ್ಕೆ ನೆರವಾಗುವುದರ ಬದಲು, ಪರಿಸ್ಥಿತಿ ಮತ್ತಷ್ಟು ಉಲ್ಬಣವಾಗುವಂತೆ ಮಾಡಿ ಬಡಜನರ ಸಂಕಷ್ಟ ಹೆಚ್ಚಲು<br>ಕಾರಣವಾಗುತ್ತಿವೆ ಎಂದೂ ಅವರು ಇಂದು ಇಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯೊಂದರಲ್ಲಿ ಟೀಕಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬುಧವಾರ, 17–7–1974</strong></p><p>ಸೈಪ್ರಸ್ ಸೇನಾಕ್ರಾಂತಿ ಯಶಸ್ವಿಯಾಗಿಲ್ಲ: ಮಕಾರಿಯೋಸ್ ಹೇಳಿಕೆ</p><p>ಬೈರೂತ್, ಜುಲೈ 16– ಸೈಪ್ರಸ್ನಲ್ಲಿ ನಡೆದ ಕ್ಷಿಪ್ರ ಸೇನಾಕ್ರಾಂತಿ ಎದುರಿಸುವುದರಲ್ಲಿ ಜನತೆಗೆ ನೆರವು ನೀಡಬೇಕೆಂದು ಅಧ್ಯಕ್ಷ ಮಕಾರಿಯೋಸ್ ಅವರು ಇಂದು ವಿಶ್ವದ ಶಕ್ತಿ ರಾಷ್ಟ್ರಗಳಲ್ಲಿ ಮನವಿ ಮಾಡಿಕೊಂಡ ವಿಷಯವನ್ನು ಬೈರೂತ್ ರೇಡಿಯೊ ಬಿತ್ತರಿಸಿತು.</p><p>ಜನತಾ ವಿರೋಧದ ಕಾರಣ ಸೇನಾಕ್ರಾಂತಿ ಫಲಿಸಿಲ್ಲ. ‘ನಾನಿನ್ನೂ ಜೀವಂತ<br>ವಾಗಿದ್ದೇನೆ’ ಎಂದು ಮಕಾರಿಯೋಸ್ ಹೇಳಿದರೆಂದು ಅದೇ ರೇಡಿಯೊ ತಿಳಿಸಿತು.</p><p>ಆರ್ಚ್ ಬಿಷಪ್ ಮಕಾರಿಯೋಸ್ ಅವರು ಸೇನಾಕ್ರಾಂತಿಯಲ್ಲಿ ಸತ್ತುಹೋದರೆಂದು ಬಂಡಾಯ ರೇಡಿಯೊ ಬಿತ್ತರಿಸಿತ್ತು.</p><p>ಕೇಂದ್ರ, ರಾಜ್ಯ ಸರ್ಕಾರಗಳ ಬಲ ಕುಗ್ಗಿಸಲು ವಿರೋಧ ಪಕ್ಷಗಳ ಯತ್ನ</p><p>ಭೋಪಾಲ್, ಜುಲೈ 16– ವಿರೋಧ ಪಕ್ಷಗಳು ‘ಭ್ರಷ್ಟಾಚಾರದ ಸುಳ್ಳು ಆಪಾದನೆಗಳನ್ನು’ ಮಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರ<br>ಗಳನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿವೆ ಎಂದು ಪ್ರಧಾನಿ ಇಂದಿರಾ ಗಾಂಧಿಯವರು ಆರೋಪಿಸಿದ್ದಾರೆ.</p><p>ವಿರೋಧ ಪಕ್ಷಗಳು ದೇಶದ ಆರ್ಥಿಕ ಸಮಸ್ಯೆಗಳನ್ನು ನಿವಾರಣೆ ಮಾಡಲು ಸರ್ಕಾರಕ್ಕೆ ನೆರವಾಗುವುದರ ಬದಲು, ಪರಿಸ್ಥಿತಿ ಮತ್ತಷ್ಟು ಉಲ್ಬಣವಾಗುವಂತೆ ಮಾಡಿ ಬಡಜನರ ಸಂಕಷ್ಟ ಹೆಚ್ಚಲು<br>ಕಾರಣವಾಗುತ್ತಿವೆ ಎಂದೂ ಅವರು ಇಂದು ಇಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯೊಂದರಲ್ಲಿ ಟೀಕಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>