<p>ಕಳ್ಳಸಾಗಣೆ: ನಗರದಲ್ಲಿ ‘ಬೆಳ್ಳಿ ದೊರೆ’ ಶ್ರೀನಿವಾಸ ಶೆಟ್ಟಿ ಸೇರಿ ಇಬ್ಬರ ಬಂಧನ</p>.<p>ಬೆಂಗಳೂರು, ಸೆ. 27– ‘ಬೆಳ್ಳಿ ದೊರೆ’ ಎಂದು ಹೇಳಲಾದವನೊಬ್ಬನೂ ಸೇರಿ, ನಗರದ ಪೊಲೀಸರು ಇಬ್ಬರು ಕಳ್ಳಸಾಗಣೆದಾರರನ್ನು ಆಂತರಿಕ ಸ್ಥಾನಬದ್ಧತಾ ಕಾಯ್ದೆ ರೀತ್ಯ ಇಂದು ಇಲ್ಲಿ ಬಂಧಿಸಿದರು.</p>.<p>ಒಬ್ಬನ ಹೆಸರು ಮನೊಭಾಯ್ ಷಾ (30) ಇನ್ನೊಬ್ಬನ ಹೆಸರು ಟಿ. ಶ್ರೀನಿವಾಸ ಶೆಟ್ಟಿ (44) ಎಂದು ಪೊಲೀಸರು ತಿಳಿಸಿದರು.</p>.<p>‘ಬೆಳ್ಳಿ ದೊರೆ’ ಎನ್ನಲಾದ ಶ್ರೀನಿವಾಸ ಶೆಟ್ಟಿ ನಗರದಲ್ಲಿ ಆಭರಣಗಳ ಅಂಗಡಿಯೊಂದರ ಮಾಲೀಕ. ಬಂಧಿತರಿಬ್ಬರನ್ನು ಸೆಂಟ್ರಲ್ ಜೈಲಿಗೆ ಕಳುಹಿಸಲಾಯಿತು. ನಿನ್ನೆ ಪೊಲೀಸರು ಆರು ಮಂದಿಯನ್ನು ಇದೇ ಆಪಾದನೆ ಮೇಲೆ ಬಂಧಿಸಿದರು.</p>.<p>ಮನೊಭಾಯ್ ಎಂಬುವನನ್ನು ಅವನ ಅಂಗಡಿಯಲ್ಲೂ ಶ್ರೀನಿವಾಸ ಶೆಟ್ಟಿಯನ್ನು ಬೇರೊಂದು ಕಡೆಯೂ ಬೆಳಗಿನ ಜಾವವೇ ಪೊಲೀಸರು ತಮ್ಮ ಬುಟ್ಟಿಗೆ <br>ಹಾಕಿಕೊಂಡರು.</p>.<p><strong>ಗದಗ– ಬೆಂಗಳೂರು ಬಸ್ ಅಪಘಾತದಲ್ಲಿ ಏಳು ಮಂದಿ ಸಾವು</strong></p>.<p>ತುಮಕೂರು, ಸೆ. 27– ಗದಗ– ಬೆಂಗಳೂರು ಕೆ.ಎಸ್.ಆರ್.ಟಿ.ಸಿ. ಬಸ್ ಶುಕ್ರವಾರ ಬೆಳಗಿನ ಜಾವ ತುಮಕೂರಿಗೆ 15 ಮೈಲಿ ದೂರದ ಬಿಲ್ಲನಕುಂಟೆ ಬಳಿ ಮರಕ್ಕೆ ಡಿಕ್ಕಿ ಹೊಡೆದು ಏಳು ಮಂದಿ ಮೃತರಾಗಿ, ಏಳು ಮಂದಿ ಗಾಯಗೊಂಡರು.</p>.<p>ಮೃತರಲ್ಲಿ ಇಬ್ಬರು ವೈದ್ಯರಾದ ತಂದೆ ಮತ್ತು ಮಗ ಸೇರಿದ್ದಾರೆ. ಅವರು ತಮ್ಮ ಕುಟುಂಬದೊಂದಿಗೆ ರಾಮೇಶ್ವರಕ್ಕೆ ಯಾತ್ರೆ ಹೊರಟಿದ್ದರು. ಬಸ್ನಲ್ಲಿ 27 ಮಂದಿ <br>ಪ್ರಯಾಣಿಸುತ್ತಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಳ್ಳಸಾಗಣೆ: ನಗರದಲ್ಲಿ ‘ಬೆಳ್ಳಿ ದೊರೆ’ ಶ್ರೀನಿವಾಸ ಶೆಟ್ಟಿ ಸೇರಿ ಇಬ್ಬರ ಬಂಧನ</p>.<p>ಬೆಂಗಳೂರು, ಸೆ. 27– ‘ಬೆಳ್ಳಿ ದೊರೆ’ ಎಂದು ಹೇಳಲಾದವನೊಬ್ಬನೂ ಸೇರಿ, ನಗರದ ಪೊಲೀಸರು ಇಬ್ಬರು ಕಳ್ಳಸಾಗಣೆದಾರರನ್ನು ಆಂತರಿಕ ಸ್ಥಾನಬದ್ಧತಾ ಕಾಯ್ದೆ ರೀತ್ಯ ಇಂದು ಇಲ್ಲಿ ಬಂಧಿಸಿದರು.</p>.<p>ಒಬ್ಬನ ಹೆಸರು ಮನೊಭಾಯ್ ಷಾ (30) ಇನ್ನೊಬ್ಬನ ಹೆಸರು ಟಿ. ಶ್ರೀನಿವಾಸ ಶೆಟ್ಟಿ (44) ಎಂದು ಪೊಲೀಸರು ತಿಳಿಸಿದರು.</p>.<p>‘ಬೆಳ್ಳಿ ದೊರೆ’ ಎನ್ನಲಾದ ಶ್ರೀನಿವಾಸ ಶೆಟ್ಟಿ ನಗರದಲ್ಲಿ ಆಭರಣಗಳ ಅಂಗಡಿಯೊಂದರ ಮಾಲೀಕ. ಬಂಧಿತರಿಬ್ಬರನ್ನು ಸೆಂಟ್ರಲ್ ಜೈಲಿಗೆ ಕಳುಹಿಸಲಾಯಿತು. ನಿನ್ನೆ ಪೊಲೀಸರು ಆರು ಮಂದಿಯನ್ನು ಇದೇ ಆಪಾದನೆ ಮೇಲೆ ಬಂಧಿಸಿದರು.</p>.<p>ಮನೊಭಾಯ್ ಎಂಬುವನನ್ನು ಅವನ ಅಂಗಡಿಯಲ್ಲೂ ಶ್ರೀನಿವಾಸ ಶೆಟ್ಟಿಯನ್ನು ಬೇರೊಂದು ಕಡೆಯೂ ಬೆಳಗಿನ ಜಾವವೇ ಪೊಲೀಸರು ತಮ್ಮ ಬುಟ್ಟಿಗೆ <br>ಹಾಕಿಕೊಂಡರು.</p>.<p><strong>ಗದಗ– ಬೆಂಗಳೂರು ಬಸ್ ಅಪಘಾತದಲ್ಲಿ ಏಳು ಮಂದಿ ಸಾವು</strong></p>.<p>ತುಮಕೂರು, ಸೆ. 27– ಗದಗ– ಬೆಂಗಳೂರು ಕೆ.ಎಸ್.ಆರ್.ಟಿ.ಸಿ. ಬಸ್ ಶುಕ್ರವಾರ ಬೆಳಗಿನ ಜಾವ ತುಮಕೂರಿಗೆ 15 ಮೈಲಿ ದೂರದ ಬಿಲ್ಲನಕುಂಟೆ ಬಳಿ ಮರಕ್ಕೆ ಡಿಕ್ಕಿ ಹೊಡೆದು ಏಳು ಮಂದಿ ಮೃತರಾಗಿ, ಏಳು ಮಂದಿ ಗಾಯಗೊಂಡರು.</p>.<p>ಮೃತರಲ್ಲಿ ಇಬ್ಬರು ವೈದ್ಯರಾದ ತಂದೆ ಮತ್ತು ಮಗ ಸೇರಿದ್ದಾರೆ. ಅವರು ತಮ್ಮ ಕುಟುಂಬದೊಂದಿಗೆ ರಾಮೇಶ್ವರಕ್ಕೆ ಯಾತ್ರೆ ಹೊರಟಿದ್ದರು. ಬಸ್ನಲ್ಲಿ 27 ಮಂದಿ <br>ಪ್ರಯಾಣಿಸುತ್ತಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>