<p><strong>ಶುಕ್ರವಾರ 17.8.1973</strong></p><p><br><strong>ರಾಜ್ಯ ರಾಜಕೀಯ ಸಮಸ್ಯೆ ಪ್ರಧಾನಿವರೆಗೆ ಒಯ್ಯದೇ ಇಲ್ಲೇ ಪರಿಹರಿಸಲು ಯತ್ನ</strong></p><p>ಬೆಂಗಳೂರು, ಆ. 16– ಉದ್ಭವವಾಗಬಹುದಾದ ರಾಜಕೀಯ ಸಮಸ್ಯೆಗಳನ್ನು ರಾಜ್ಯ ಮಟ್ಟದಲ್ಲೇ ಪರಿಹರಿಸಲು ಪ್ರಯತ್ನಿಸಿ ಪ್ರಧಾನಿಗೆ ತೊಂದರೆ ಕೊಡದಿರುವ ನೀತಿಯನ್ನು ಮುಖ್ಯಮಂತ್ರಿ ಶ್ರೀ ಅರಸು ಅವರು ಅನುಸರಿಸಿಕೊಂಡು ಬಂದಿದ್ದಾರೆ.</p><p>‘ರಾಜ್ಯದ ರಾಜಕೀಯ ಸಮಸ್ಯೆಗಳನ್ನು ಅವರಿಗೆ ಒಡ್ಡದಿರುವವರು ನೀವು ಒಬ್ಬರೆ ಎಂದು ಪ್ರಧಾನಿ ನಿಮಗೆ ಮೆಚ್ಚುಗೆ ವ್ಯಕ್ತಪಡಿಸಿದರೆ?’ ಎಂದು ವರದಿಗಾರರೊಬ್ಬರು ಕೇಳಿದಾಗ, ಪ್ರಧಾನಿ ಅವರನ್ನು ಕಂಡು ಬೆಳಿಗ್ಗೆ ನಗರಕ್ಕೆ ಹಿಂದಿರುಗಿದ ಮುಖ್ಯಮಂತ್ರಿಗಳು ‘ಸಾಮಾನ್ಯವಾಗಿ ರಾಜ್ಯದ ಸಮಸ್ಯೆಗಳನ್ನು ಪ್ರಧಾನಿಗೆ ಒಡ್ಡುವುದಿಲ್ಲ. ಇಲ್ಲೇ ಪರಿಹರಿಸಲು ಪ್ರಯತ್ನಿಸುತ್ತೇನೆ. ಅಗತ್ಯ ಬಿದ್ದರೆ ಮಾತ್ರ ಹೈಕಮಾಂಡಿನ ಸಹಾಯವನ್ನು ಪಡೆಯುತ್ತೇನೆ. ಸಾಮಾನ್ಯವಾಗಿ ಇಲ್ಲೇ ನಾವೇ ಪರಿಹರಿಸಲು ಪ್ರಯತ್ನಿಸುತ್ತೇವೆ ಎಂದರು.</p><p><strong>ಮಲ ಹೊರುವ ಹೇಯ ಪದ್ಧತಿ ರಾಜ್ಯದಲ್ಲಿ ಅಂತ್ಯ</strong></p><p>ಬೆಂಗಳೂರು, ಆ. 16– ಶತಮಾನಗಳಿಂದ ಮಾನವ ಗೌರವಕ್ಕೆ ಕಳಂಕವಾಗಿದ್ದ ಮಲ ಹೊರುವ ಪದ್ಧತಿ ಆಗಸ್ಟ್ 15ರಿಂದ ರದ್ದಾಗಿ, ಮೈಸೂರು ರಾಜ್ಯ ಒಂದು ಐತಿಹಾಸಿಕ ಹಾಗೂ ಸ್ಮರಣೀಯ ಹೆಜ್ಜೆಯನ್ನಿಟ್ಟಿದೆ.</p><p>ಈ ಅನಾಗರೀಕ ಪದ್ಧತಿಯ ನಿರ್ಮೂಲನಕ್ಕಾಗಿ ಕ್ರಮ ಕೈಗೊಂಡುದು ಇಡೀ ಭಾರತದಲ್ಲಿ ರಾಜ್ಯ ಸರ್ಕಾರ ಪ್ರಥಮವಾದುದು.</p><p>ಜಾಡಮಾಲಿಗೆ ಬದಲಾಗಿ ‘ಪೌರ ಕಾರ್ಮಿಕ’ ಎಂಬ ಹೊಸ ಗೌರವಾನ್ವಿತ ನಾಮಕರಣ ಹೊಂದಿರುವ ಇವರು ನಿನ್ನೆಯಿಂದ ಮಲ ತೆಗೆಯುವ ಕೆಲಸಕ್ಕೆ ಹೋಗುತ್ತಿಲ್ಲ. ಈ ಪದ್ಧತಿಯ ನಿರ್ಮೂಲನದ ಜೊತೆಗೆ ಎಲ್ಲ ನಗರಗಳಲ್ಲೂ ಪ್ಲಷ್ ಔಟ್ ಕಕ್ಕಸ್ಸುಗಳನ್ನು ನಿರ್ಮಿಸುವ ಕಾರ್ಯ ಭರದಿಂದ ಸಾಗುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶುಕ್ರವಾರ 17.8.1973</strong></p><p><br><strong>ರಾಜ್ಯ ರಾಜಕೀಯ ಸಮಸ್ಯೆ ಪ್ರಧಾನಿವರೆಗೆ ಒಯ್ಯದೇ ಇಲ್ಲೇ ಪರಿಹರಿಸಲು ಯತ್ನ</strong></p><p>ಬೆಂಗಳೂರು, ಆ. 16– ಉದ್ಭವವಾಗಬಹುದಾದ ರಾಜಕೀಯ ಸಮಸ್ಯೆಗಳನ್ನು ರಾಜ್ಯ ಮಟ್ಟದಲ್ಲೇ ಪರಿಹರಿಸಲು ಪ್ರಯತ್ನಿಸಿ ಪ್ರಧಾನಿಗೆ ತೊಂದರೆ ಕೊಡದಿರುವ ನೀತಿಯನ್ನು ಮುಖ್ಯಮಂತ್ರಿ ಶ್ರೀ ಅರಸು ಅವರು ಅನುಸರಿಸಿಕೊಂಡು ಬಂದಿದ್ದಾರೆ.</p><p>‘ರಾಜ್ಯದ ರಾಜಕೀಯ ಸಮಸ್ಯೆಗಳನ್ನು ಅವರಿಗೆ ಒಡ್ಡದಿರುವವರು ನೀವು ಒಬ್ಬರೆ ಎಂದು ಪ್ರಧಾನಿ ನಿಮಗೆ ಮೆಚ್ಚುಗೆ ವ್ಯಕ್ತಪಡಿಸಿದರೆ?’ ಎಂದು ವರದಿಗಾರರೊಬ್ಬರು ಕೇಳಿದಾಗ, ಪ್ರಧಾನಿ ಅವರನ್ನು ಕಂಡು ಬೆಳಿಗ್ಗೆ ನಗರಕ್ಕೆ ಹಿಂದಿರುಗಿದ ಮುಖ್ಯಮಂತ್ರಿಗಳು ‘ಸಾಮಾನ್ಯವಾಗಿ ರಾಜ್ಯದ ಸಮಸ್ಯೆಗಳನ್ನು ಪ್ರಧಾನಿಗೆ ಒಡ್ಡುವುದಿಲ್ಲ. ಇಲ್ಲೇ ಪರಿಹರಿಸಲು ಪ್ರಯತ್ನಿಸುತ್ತೇನೆ. ಅಗತ್ಯ ಬಿದ್ದರೆ ಮಾತ್ರ ಹೈಕಮಾಂಡಿನ ಸಹಾಯವನ್ನು ಪಡೆಯುತ್ತೇನೆ. ಸಾಮಾನ್ಯವಾಗಿ ಇಲ್ಲೇ ನಾವೇ ಪರಿಹರಿಸಲು ಪ್ರಯತ್ನಿಸುತ್ತೇವೆ ಎಂದರು.</p><p><strong>ಮಲ ಹೊರುವ ಹೇಯ ಪದ್ಧತಿ ರಾಜ್ಯದಲ್ಲಿ ಅಂತ್ಯ</strong></p><p>ಬೆಂಗಳೂರು, ಆ. 16– ಶತಮಾನಗಳಿಂದ ಮಾನವ ಗೌರವಕ್ಕೆ ಕಳಂಕವಾಗಿದ್ದ ಮಲ ಹೊರುವ ಪದ್ಧತಿ ಆಗಸ್ಟ್ 15ರಿಂದ ರದ್ದಾಗಿ, ಮೈಸೂರು ರಾಜ್ಯ ಒಂದು ಐತಿಹಾಸಿಕ ಹಾಗೂ ಸ್ಮರಣೀಯ ಹೆಜ್ಜೆಯನ್ನಿಟ್ಟಿದೆ.</p><p>ಈ ಅನಾಗರೀಕ ಪದ್ಧತಿಯ ನಿರ್ಮೂಲನಕ್ಕಾಗಿ ಕ್ರಮ ಕೈಗೊಂಡುದು ಇಡೀ ಭಾರತದಲ್ಲಿ ರಾಜ್ಯ ಸರ್ಕಾರ ಪ್ರಥಮವಾದುದು.</p><p>ಜಾಡಮಾಲಿಗೆ ಬದಲಾಗಿ ‘ಪೌರ ಕಾರ್ಮಿಕ’ ಎಂಬ ಹೊಸ ಗೌರವಾನ್ವಿತ ನಾಮಕರಣ ಹೊಂದಿರುವ ಇವರು ನಿನ್ನೆಯಿಂದ ಮಲ ತೆಗೆಯುವ ಕೆಲಸಕ್ಕೆ ಹೋಗುತ್ತಿಲ್ಲ. ಈ ಪದ್ಧತಿಯ ನಿರ್ಮೂಲನದ ಜೊತೆಗೆ ಎಲ್ಲ ನಗರಗಳಲ್ಲೂ ಪ್ಲಷ್ ಔಟ್ ಕಕ್ಕಸ್ಸುಗಳನ್ನು ನಿರ್ಮಿಸುವ ಕಾರ್ಯ ಭರದಿಂದ ಸಾಗುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>