ನವದೆಹಲಿ: ಏ. 20– ಕಾಂಗ್ರೆಸ್ ನೇತೃತ್ವದಲ್ಲಿ ಸರ್ಕಾರ ರಚನೆಗಾಗಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಇಂದು ಇಬ್ಬರು ಮಾಜಿ ಪ್ರಧಾನಿಗಳು ಮತ್ತು ಸಿಪಿಎಂ ನಾಯಕ ಜ್ಯೋತಿ ಬಸು ಅವರನ್ನು ಭೇಟಿಯಾಗಿ ಸಹಕಾರ ಕೋರುವ ಮೂಲಕ ಸರ್ಕಾರ ರಚಿಸುವ ತಮ್ಮ ಪ್ರಯತ್ನವನ್ನು ಚುರುಕುಗೊಳಿಸಿದರು.
ಎಐಎಡಿಎಂಕೆ ನಾಯಕಿ ಜಯಲಲಿತಾ ಅವರು, ಜ್ಯೋತಿಬಸು ಅವರು ಪ್ರಧಾನಿ ಸ್ಥಾನಕ್ಕೆ ಒಪ್ಪುವುದಾದರೆ ತಮ್ಮ ಸಂಪೂರ್ಣ ಬೆಂಬಲ ಇದೆ ಎಂಬ ಹೇಳಿಕೆಯಿಂದ ಕಾಂಗ್ರೆಸ್ ವಲಯದಲ್ಲಿ ಕಳವಳ ಉಂಟಾಗಿದೆ.