<p><strong>ಮಹಾಜನ್ ವರದಿ ಬಗ್ಗೆ ಸಂಸತ್ತಿನದೇ ಅಂತಿಮ ತೀರ್ಮಾನ: ಅರಸು</strong></p>.<p>ಬೆಂಗಳೂರು, ಏ. 18– ಮೈಸೂರು–ಮಹಾರಾಷ್ಟ್ರ ಗಡಿ ವಿವಾದ ಪರಿಹಾರಕ್ಕೆ ಮಹಾಜನ್ ವರದಿಯನ್ನು ಮುಂದಿಟ್ಟು<br />ಕೊಂಡಿರುವ ಸಂಸತ್ತಿನದೇ ಅಂತಿಮ ನುಡಿ ಎಂದು ಮುಖ್ಯಮಂತ್ರಿ ದೇವರಾಜ ಅರಸು ಇಂದು ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿದರು.</p>.<p>‘ಈ ಪ್ರಶ್ನೆಯ ಪರಿಹಾರದ ಹೊಣೆಯನ್ನು ಪ್ರಧಾನಿಯವರಿಗೆ ಬಿಟ್ಟಿಲ್ಲ’ ಎಂದು ಸದಸ್ಯರ ಸಂದೇಹಗಳನ್ನು ನಿವಾರಿಸಿದ ಮುಖ್ಯಮಂತ್ರಿ ಅವರು ‘ಅಂತಿಮ ತೀರ್ಪಿನ ಅಧಿಕಾರ ಪಾರ್ಲಿಮೆಂಟ್ಗೆ ಬಿಟ್ಟಿದ್ದು, ಕಾದು ನೋಡೋಣ’ ಎಂದರು.</p>.<p><strong>ರಾಸಾಯನಿಕ ಗೊಬ್ಬರ ಬಳಕೆ ಬಗ್ಗೆ ಶೀಘ್ರವೇ ಕಾಯಿದೆ ಜಾರಿ</strong></p>.<p>ಬೆಂಗಳೂರು, ಏ. 18– ರಾಸಾಯನಿಕ ಗೊಬ್ಬರ ಬಳಕೆ ಮತ್ತು ವಹಿವಾಟು ಸಂಬಂಧದಲ್ಲಿ ಕಾಯಿದೆಯೊಂದು ಕಾರ್ಯ<br />ಗತವಾಗುವ ಸಂಭವವಿದೆ.</p>.<p>ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸಬೇಕೆಂಬ ನಿರ್ಣಯದ ಮೇಲೆ ವಿಧಾನಪರಿಷತ್ತಿನಲ್ಲಿ ಚರ್ಚೆ ನಡೆಯುತ್ತಿದ್ದಾಗ<br />ಪಶುಪಾಲನೆ ರಾಜ್ಯ ಸಚಿವ ಎನ್. ಚಿಕ್ಕೇಗೌಡ ಅವರು ಇಂದು ಮಧ್ಯಪ್ರವೇಶಿಸಿ, ‘ರಾಸಾಯನಿಕ ಗೊಬ್ಬರ ಕಾಯಿದೆಯೊಂದನ್ನು ತೀವ್ರವಾಗಿ ಕಾರ್ಯಗತಗೊಳಿಸಲು ಉದ್ದೇಶಿಸಿರುವುದಾಗಿ’ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಹಾಜನ್ ವರದಿ ಬಗ್ಗೆ ಸಂಸತ್ತಿನದೇ ಅಂತಿಮ ತೀರ್ಮಾನ: ಅರಸು</strong></p>.<p>ಬೆಂಗಳೂರು, ಏ. 18– ಮೈಸೂರು–ಮಹಾರಾಷ್ಟ್ರ ಗಡಿ ವಿವಾದ ಪರಿಹಾರಕ್ಕೆ ಮಹಾಜನ್ ವರದಿಯನ್ನು ಮುಂದಿಟ್ಟು<br />ಕೊಂಡಿರುವ ಸಂಸತ್ತಿನದೇ ಅಂತಿಮ ನುಡಿ ಎಂದು ಮುಖ್ಯಮಂತ್ರಿ ದೇವರಾಜ ಅರಸು ಇಂದು ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿದರು.</p>.<p>‘ಈ ಪ್ರಶ್ನೆಯ ಪರಿಹಾರದ ಹೊಣೆಯನ್ನು ಪ್ರಧಾನಿಯವರಿಗೆ ಬಿಟ್ಟಿಲ್ಲ’ ಎಂದು ಸದಸ್ಯರ ಸಂದೇಹಗಳನ್ನು ನಿವಾರಿಸಿದ ಮುಖ್ಯಮಂತ್ರಿ ಅವರು ‘ಅಂತಿಮ ತೀರ್ಪಿನ ಅಧಿಕಾರ ಪಾರ್ಲಿಮೆಂಟ್ಗೆ ಬಿಟ್ಟಿದ್ದು, ಕಾದು ನೋಡೋಣ’ ಎಂದರು.</p>.<p><strong>ರಾಸಾಯನಿಕ ಗೊಬ್ಬರ ಬಳಕೆ ಬಗ್ಗೆ ಶೀಘ್ರವೇ ಕಾಯಿದೆ ಜಾರಿ</strong></p>.<p>ಬೆಂಗಳೂರು, ಏ. 18– ರಾಸಾಯನಿಕ ಗೊಬ್ಬರ ಬಳಕೆ ಮತ್ತು ವಹಿವಾಟು ಸಂಬಂಧದಲ್ಲಿ ಕಾಯಿದೆಯೊಂದು ಕಾರ್ಯ<br />ಗತವಾಗುವ ಸಂಭವವಿದೆ.</p>.<p>ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸಬೇಕೆಂಬ ನಿರ್ಣಯದ ಮೇಲೆ ವಿಧಾನಪರಿಷತ್ತಿನಲ್ಲಿ ಚರ್ಚೆ ನಡೆಯುತ್ತಿದ್ದಾಗ<br />ಪಶುಪಾಲನೆ ರಾಜ್ಯ ಸಚಿವ ಎನ್. ಚಿಕ್ಕೇಗೌಡ ಅವರು ಇಂದು ಮಧ್ಯಪ್ರವೇಶಿಸಿ, ‘ರಾಸಾಯನಿಕ ಗೊಬ್ಬರ ಕಾಯಿದೆಯೊಂದನ್ನು ತೀವ್ರವಾಗಿ ಕಾರ್ಯಗತಗೊಳಿಸಲು ಉದ್ದೇಶಿಸಿರುವುದಾಗಿ’ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>