ಪುಣೆ, ಮಾರ್ಚ್ 31– ‘‘ಪ್ರಸಕ್ತ ಪರಿಸ್ಥಿತಿಯಲ್ಲಿ ಭಾರತದ ಪ್ರಜಾಸತ್ತೆ ವಿನಾಶದ ಅಂಚಿನತ್ತ ಸಾಗುತ್ತಿದೆ. ಗೊಂದಲಮಯ ಪರಿಸ್ಥಿತಿ, ಉದ್ದೇಶರಹಿತ ಕಾರ್ಯಕ್ರಮಗಳು, ಸೂಕ್ತ ಮಾರ್ಗದರ್ಶನದ ಕೊರತೆ, ಸರ್ಕಾರದ ಮತ್ತು ರಾಜಕೀಯ ರಂಗದ ಎಲ್ಲ ಹಂತಗಳಲ್ಲೂ ಭ್ರಷ್ಟಾಚಾರ– ಇವೆಲ್ಲ ಪ್ರಧಾನಿ ಇಂದಿರಾ ಗಾಂಧಿಯವರ ನಾಯಕತ್ವದ ಲಕ್ಷಣಗಳಿರಬಹುದು. ಆದರೆ ಇವೆಲ್ಲ ಕಾಂಗ್ರೆಸ್ಸನ್ನು, ಪ್ರಜಾಸತ್ತೆಯನ್ನೂ ವಿನಾಶದ ಅಂಚಿಗೆ ದೂಡುತ್ತಿವೆ’’.