<p>ಮಾನವರಿರುವ ರಷ್ಯಾದ ಅಂತರಿಕ್ಷನೌಕೆ ಪ್ರಯೋಗ</p><p>ಮಾಸ್ಕೋ, ಸೆ. 27– ಮಾನವರಿರುವ ಅಂತರಿಕ್ಷ ನೌಕೆ ಸೋಯುಜ್ ಅನ್ನು ರಷ್ಯಾ ಇಂದು ಹಾರಿಬಿಟ್ಟಿತೆಂದು ತಾಸ್ ವಾರ್ತಾ ಸಂಸ್ಥೆ ಪ್ರಕಟಿಸಿದೆ.</p><p>ನೌಕೆಯಲ್ಲಿ ಎಷ್ಟು ಜನರಿದ್ದಾರೆಂಬುದನ್ನು ಪ್ರಕಟಣೆ ತಿಳಿಸಲಿಲ್ಲವಾದರೂ, ಅಂತರಿಕ್ಷ ಯಾತ್ರಿಗಳ ನಾಯಕತ್ವವನ್ನು ಕರ್ನಲ್ ವಾಸಿಲಿ ಲಾಜರೆವ್ ವಹಿಸಿದ್ದಾರೆಂದು ತಿಳಿಸಿತು.</p><p>ಕಚ್ಚಾರೇಷ್ಮೆ ರಫ್ತು ನಿಷೇಧ</p><p>ನವದೆಹಲಿ, ಸೆ. 27– ಈ ವರ್ಷದ ಅಂತ್ಯದವರೆಗೆ ಕಚ್ಚಾ ರೇಷ್ಮೆ ರಫ್ತನ್ನು ಸರ್ಕಾರ ನಿಷೇಧಿಸಿದೆ.</p><p>ಕೈಮಗ್ಗದ ನೇಕಾರರು ಮತ್ತು ರಫ್ತು ಉತ್ಪಾದಕರು ಮಾಡಿಕೊಂಡ ಮನವಿಯ ನಂತರ ಸರ್ಕಾರವು ಈ ಕ್ರಮವನ್ನು ಕೈಗೊಂಡಿತು.</p><p>ಕನಕಪುರದ ಬಳಿ ಕೆರೆ ಒಡೆದು ಇಬ್ಬರ ಜಲಸಮಾಧಿ</p><p>ಕನಕಪುರ, ಸೆ. 27– ನಿನ್ನೆ ರಾತ್ರಿ ಬಿದ್ದ ಭಾರಿ ಮಳೆಯಿಂದಾಗಿ ಕನಕಪುರದ ಬಳಿಯ ಮಾವತ್ತೂರು ಕೆರೆಯ ಕಟ್ಟೆ ಇಂದು ಬೆಳಿಗ್ಗೆ ಒಡೆದು, ಇಬ್ಬರು ಮಹಿಳೆಯರು ಜಲಸಮಾಧಿ ಹೊಂದಿದರಲ್ಲದೆ, ಹಾರೋಹಳ್ಳಿ ಮತ್ತು ಕನಕಪುರದ ಸುತ್ತಮುತ್ತ ಲಕ್ಷಾಂತರ ರೂಪಾಯಿ ಬೆಲೆಯ ಬೆಳೆಗಳಿಗೆ ನಷ್ಟ ಉಂಟಾಗಿದೆಯೆಂದು ತಿಳಿದು ಬಂದಿದೆ.</p><p>ಕೆರೆ ಒಡೆದು ನೀರಿನ ಪ್ರವಾಹ, ಸಮೀಪದಲ್ಲಿದ್ದ ಗುಡಿಸಲೊಂದನ್ನು ಕೊಚ್ಚಿಕೊಂಡು ಹೋಯಿತೆಂದೂ, ಗುಡಿಸಲಲ್ಲಿ ಇದ್ದ 8 ಮಂದಿಯಲ್ಲಿ ಇತರರು ತೆಂಗಿನ ಮರವನ್ನು ಏರಿದ್ದರೆಂದೂ, ಸಣ್ಣಮ್ಮ (55) ಮತ್ತು ಅವರ ಪುತ್ರಿ ಲಕ್ಷಮ್ಮ (30) ಎಂಬ ಇಬ್ಬರು ಮಹಿಳೆಯರನ್ನು ನೀರಿನ ಪ್ರವಾಹ ಸೆಳೆದುಕೊಂಡು ಹೋಯಿತೆಂದೂ ವರದಿಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಾನವರಿರುವ ರಷ್ಯಾದ ಅಂತರಿಕ್ಷನೌಕೆ ಪ್ರಯೋಗ</p><p>ಮಾಸ್ಕೋ, ಸೆ. 27– ಮಾನವರಿರುವ ಅಂತರಿಕ್ಷ ನೌಕೆ ಸೋಯುಜ್ ಅನ್ನು ರಷ್ಯಾ ಇಂದು ಹಾರಿಬಿಟ್ಟಿತೆಂದು ತಾಸ್ ವಾರ್ತಾ ಸಂಸ್ಥೆ ಪ್ರಕಟಿಸಿದೆ.</p><p>ನೌಕೆಯಲ್ಲಿ ಎಷ್ಟು ಜನರಿದ್ದಾರೆಂಬುದನ್ನು ಪ್ರಕಟಣೆ ತಿಳಿಸಲಿಲ್ಲವಾದರೂ, ಅಂತರಿಕ್ಷ ಯಾತ್ರಿಗಳ ನಾಯಕತ್ವವನ್ನು ಕರ್ನಲ್ ವಾಸಿಲಿ ಲಾಜರೆವ್ ವಹಿಸಿದ್ದಾರೆಂದು ತಿಳಿಸಿತು.</p><p>ಕಚ್ಚಾರೇಷ್ಮೆ ರಫ್ತು ನಿಷೇಧ</p><p>ನವದೆಹಲಿ, ಸೆ. 27– ಈ ವರ್ಷದ ಅಂತ್ಯದವರೆಗೆ ಕಚ್ಚಾ ರೇಷ್ಮೆ ರಫ್ತನ್ನು ಸರ್ಕಾರ ನಿಷೇಧಿಸಿದೆ.</p><p>ಕೈಮಗ್ಗದ ನೇಕಾರರು ಮತ್ತು ರಫ್ತು ಉತ್ಪಾದಕರು ಮಾಡಿಕೊಂಡ ಮನವಿಯ ನಂತರ ಸರ್ಕಾರವು ಈ ಕ್ರಮವನ್ನು ಕೈಗೊಂಡಿತು.</p><p>ಕನಕಪುರದ ಬಳಿ ಕೆರೆ ಒಡೆದು ಇಬ್ಬರ ಜಲಸಮಾಧಿ</p><p>ಕನಕಪುರ, ಸೆ. 27– ನಿನ್ನೆ ರಾತ್ರಿ ಬಿದ್ದ ಭಾರಿ ಮಳೆಯಿಂದಾಗಿ ಕನಕಪುರದ ಬಳಿಯ ಮಾವತ್ತೂರು ಕೆರೆಯ ಕಟ್ಟೆ ಇಂದು ಬೆಳಿಗ್ಗೆ ಒಡೆದು, ಇಬ್ಬರು ಮಹಿಳೆಯರು ಜಲಸಮಾಧಿ ಹೊಂದಿದರಲ್ಲದೆ, ಹಾರೋಹಳ್ಳಿ ಮತ್ತು ಕನಕಪುರದ ಸುತ್ತಮುತ್ತ ಲಕ್ಷಾಂತರ ರೂಪಾಯಿ ಬೆಲೆಯ ಬೆಳೆಗಳಿಗೆ ನಷ್ಟ ಉಂಟಾಗಿದೆಯೆಂದು ತಿಳಿದು ಬಂದಿದೆ.</p><p>ಕೆರೆ ಒಡೆದು ನೀರಿನ ಪ್ರವಾಹ, ಸಮೀಪದಲ್ಲಿದ್ದ ಗುಡಿಸಲೊಂದನ್ನು ಕೊಚ್ಚಿಕೊಂಡು ಹೋಯಿತೆಂದೂ, ಗುಡಿಸಲಲ್ಲಿ ಇದ್ದ 8 ಮಂದಿಯಲ್ಲಿ ಇತರರು ತೆಂಗಿನ ಮರವನ್ನು ಏರಿದ್ದರೆಂದೂ, ಸಣ್ಣಮ್ಮ (55) ಮತ್ತು ಅವರ ಪುತ್ರಿ ಲಕ್ಷಮ್ಮ (30) ಎಂಬ ಇಬ್ಬರು ಮಹಿಳೆಯರನ್ನು ನೀರಿನ ಪ್ರವಾಹ ಸೆಳೆದುಕೊಂಡು ಹೋಯಿತೆಂದೂ ವರದಿಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>