<p><strong>ಖೋಟಾ ಮಾರ್ಕ್ಸ್ಕಾರ್ಡ್ ಜಾಲ ಪತ್ತೆ</strong></p><p>ಬೆಂಗಳೂರು, ಫೆ. 16– ಪದವಿ ಸರ್ಟಿಫಿಕೇಟ್ ಗಳನ್ನೂ ಒಳಗೊಂಡು ಖೋಟಾ ಮಾರ್ಕ್ಸ್ಕಾರ್ಡ್ ನಾನಾ ಪರೀಕ್ಷೆಗಳ ಸರ್ಟಿಫಿಕೇಟ್ಗಳು ಮೊದಲಾದವನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ವಂಚಕರ ಜಾಲವೊಂದನ್ನು ನಗರ ಪೊಲೀಸರು ಪತ್ತೆಹಚ್ಚಿ ಬಯಲಿಗೆಳೆದಿದ್ದಾರೆ.</p><p><strong>ಗೋಡ್ಸೆಗೆ ಕ್ಷಮಾದಾನ ನೀಡಲು ಕೋರಿದ್ದ ಗಾಂಧೀಪುತ್ರರು</strong></p><p>ನವದೆಹಲಿ, ಫೆ. 16– ಅಹಿಂಸಾ ಪ್ರವರ್ತಕರಾಗಿದ್ದ ಗಾಂಧೀಜಿಯವರನ್ನು ಕೊಲೆಗೈದ ನಾಥುರಾಮ ಗೋಡ್ಸೆ ಅವರಿಗೆ ಮರಣ ದಂಡನೆ ವಿಧಿಸುವುದನ್ನು ತಪ್ಪಿಸಲು ಗಾಂಧೀಜಿಯವರ ಮಕ್ಕಳು ಶ್ರಮಿಸಿದರು. ಆದರೆ ಗವರ್ನರ್ ಜನರಲ್ ಆಗಿದ್ದ<br>ಸಿ. ರಾಜಗೋಪಾಲಾಚಾರಿ ಮತ್ತು ಸರ್ದಾರ್ ಪಟೇಲ್ ಅವರು ಅದಕ್ಕೆ ಒಪ್ಪಲಿಲ್ಲ. </p><p>ಸರ್ದಾರ್ ಪಟೇಲ್ ಅವರ ಪತ್ರವ್ಯವಹಾರದ ಎಂಟನೆಯ ಸಂಪುಟ ಇಂದು ಬೆಳಕು ಕಂಡಿತು. ಅದರಿಂದ ಈ ಸಂಗತಿ ವ್ಯಕ್ತವಾಗಿದೆ. </p><p>ಗಾಂಧೀಜಿಯವರು ಸ್ವತಃ ಮರಣ ದಂಡನೆ ಶಿಕ್ಷೆಯನ್ನು ವಿರೋಧಿಸುತ್ತಿದ್ದರಾದ್ದರಿಂದ ಹಂತಕನಿಗೆ ಕ್ಷಮಾದಾನ ನೀಡಬೇಕೆಂದು ಗಾಂಧೀಜಿಯವರ ಮಕ್ಕಳಾದ ರಾಮದಾಸ್ ಗಾಂಧಿ ಮತ್ತು ಮಣಿಲಾಲ್ ಗಾಂಧಿ ಅವರು ಒತ್ತಾಯಿಸಿರುವುದಾಗಿ ತಿಳಿದುಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಖೋಟಾ ಮಾರ್ಕ್ಸ್ಕಾರ್ಡ್ ಜಾಲ ಪತ್ತೆ</strong></p><p>ಬೆಂಗಳೂರು, ಫೆ. 16– ಪದವಿ ಸರ್ಟಿಫಿಕೇಟ್ ಗಳನ್ನೂ ಒಳಗೊಂಡು ಖೋಟಾ ಮಾರ್ಕ್ಸ್ಕಾರ್ಡ್ ನಾನಾ ಪರೀಕ್ಷೆಗಳ ಸರ್ಟಿಫಿಕೇಟ್ಗಳು ಮೊದಲಾದವನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ವಂಚಕರ ಜಾಲವೊಂದನ್ನು ನಗರ ಪೊಲೀಸರು ಪತ್ತೆಹಚ್ಚಿ ಬಯಲಿಗೆಳೆದಿದ್ದಾರೆ.</p><p><strong>ಗೋಡ್ಸೆಗೆ ಕ್ಷಮಾದಾನ ನೀಡಲು ಕೋರಿದ್ದ ಗಾಂಧೀಪುತ್ರರು</strong></p><p>ನವದೆಹಲಿ, ಫೆ. 16– ಅಹಿಂಸಾ ಪ್ರವರ್ತಕರಾಗಿದ್ದ ಗಾಂಧೀಜಿಯವರನ್ನು ಕೊಲೆಗೈದ ನಾಥುರಾಮ ಗೋಡ್ಸೆ ಅವರಿಗೆ ಮರಣ ದಂಡನೆ ವಿಧಿಸುವುದನ್ನು ತಪ್ಪಿಸಲು ಗಾಂಧೀಜಿಯವರ ಮಕ್ಕಳು ಶ್ರಮಿಸಿದರು. ಆದರೆ ಗವರ್ನರ್ ಜನರಲ್ ಆಗಿದ್ದ<br>ಸಿ. ರಾಜಗೋಪಾಲಾಚಾರಿ ಮತ್ತು ಸರ್ದಾರ್ ಪಟೇಲ್ ಅವರು ಅದಕ್ಕೆ ಒಪ್ಪಲಿಲ್ಲ. </p><p>ಸರ್ದಾರ್ ಪಟೇಲ್ ಅವರ ಪತ್ರವ್ಯವಹಾರದ ಎಂಟನೆಯ ಸಂಪುಟ ಇಂದು ಬೆಳಕು ಕಂಡಿತು. ಅದರಿಂದ ಈ ಸಂಗತಿ ವ್ಯಕ್ತವಾಗಿದೆ. </p><p>ಗಾಂಧೀಜಿಯವರು ಸ್ವತಃ ಮರಣ ದಂಡನೆ ಶಿಕ್ಷೆಯನ್ನು ವಿರೋಧಿಸುತ್ತಿದ್ದರಾದ್ದರಿಂದ ಹಂತಕನಿಗೆ ಕ್ಷಮಾದಾನ ನೀಡಬೇಕೆಂದು ಗಾಂಧೀಜಿಯವರ ಮಕ್ಕಳಾದ ರಾಮದಾಸ್ ಗಾಂಧಿ ಮತ್ತು ಮಣಿಲಾಲ್ ಗಾಂಧಿ ಅವರು ಒತ್ತಾಯಿಸಿರುವುದಾಗಿ ತಿಳಿದುಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>