<p><strong>ನಾಲ್ವರ ಮತಾಂತರ, ಮೇಲ್ಮನೆಗೆ ಎರಡೂ ಕಾಂಗ್ರೆಸಿಗರ ಆಯ್ಕೆ</strong></p><p>ಬೆಂಗಳೂರು, ಮೇ 9– ಅತ್ಯಧಿಕ ಮತ ಗಳಿಸಿದ ಸಂಸ್ಥಾ ಕಾಂಗ್ರೆಸ್ಸಿನ ಶ್ರೀಮತಿ ಸರೋಜಿನಿ ತಿಮ್ಮೇಗೌಡ ಹಾಗೂ ಉಳಿದ ಎಲ್ಲ ಆರುಮಂದಿ ಕಾಂಗ್ರೆಸ್ ಅಭ್ಯರ್ಥಿಗಳು ವಿಧಾನಸಭಾ ಕ್ಷೇತ್ರದಿಂದ ವಿಧಾನಪರಿಷತ್ತಿಗೆ ಆಯ್ಕೆಯಾಗಿದ್ದಾರೆ.</p><p>ಕಾಂಗ್ರೆಸ್ ಪಕ್ಷದ ನಾಲ್ಕು ಮತಗಳು ಹೊರಕ್ಕೆ ಹೋಗಿರುವುದೇ ಅಲ್ಲದೆ, ಪಕ್ಷದ ಅಭ್ಯರ್ಥಿಗಳ ನಡುವೆಯೂ ಸ್ವಲ್ಪ ಮಟ್ಟಿಗೆ ಮತಾಂತರ ನಡೆದಿದೆ.</p><p>ಸಂಸ್ಥಾ ಕಾಂಗ್ರೆಸ್ಸಿನ ಶ್ರೀಮತಿ ಸರೋಜಿನಿ ತಿಮ್ಮೇಗೌಡ 33, ಕಾಂಗ್ರೆಸ್ಸಿನ ಎಫ್.ಎಂ. ಖಾನ್ 30, ಕಲ್ಯಾಣರಾವ್ ಮರುಗುತ್ತಿ 28, ರಾಘವೇಂದ್ರರಾವ್ ಜಾಗೀರ್ದಾರ್ 27 ಹಾಗೂ ಎಸ್. ಶಿವಪ್ಪ 27 ಪ್ರಥಮ ಮತಗಳನ್ನು ಗಳಿಸಿ ಮೊದಲಿನ ಸುತ್ತಿನಲ್ಲೇ ಆಯ್ಕೆಯಾದರು. </p><p><strong>ಅಕ್ಕಿ–ಭತ್ತದ ಅಂತರಜಿಲ್ಲಾ ಸಾಗಾಣಿಕೆ ನಿರ್ಬಂಧ ರದ್ದಾಗದು</strong></p><p>ಬೆಂಗಳೂರು, ಮೇ 90 – ರಾಜ್ಯದ ಹಿತದೃಷ್ಟಿಯಿಂದ ಅಂತರ ಜಿಲ್ಲಾ ಅಕ್ಕಿ– ಭತ್ತ ಸಾಗಾಣಿಕೆ ಪ್ರತಿಬಂಧಿಸುವ ಪರಿಸ್ಥಿತಿ ಮುಂದುವರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.</p><p>ಶ್ರೀ ಬಿ.ವಿ. ಕಕ್ಕಿಲ್ಲಾಯ ಅವರು ಕಳುಹಿಸಿದ್ದ ಗಮನ ಸೆಳೆಯುವ ನೋಟಿಸಿಗೆ ಉತ್ತರಿಸಿದ ಆಹಾರ ಸಚಿವ ಶ್ರೀ ಕೆ.ಎಚ್. ಪಾಟೀಲರು ಅಂತರ್ ಜಿಲ್ಲಾ ಅಕ್ಕಿ– ಭತ್ತ ಸಾಗಾಣಿಕೆ ನಿರ್ಬಂಧ ತೆಗೆದುಹಾಕಬಹುದೆಂಬ ಪ್ರಶ್ನೆಯನ್ನು ಸರ್ವದೃಷ್ಟಿಯಿಂದ ಆಲೋಚಿಸಿ ಈ ತೀರ್ಮಾನಕ್ಕೆ ಬರಲಾಗಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಾಲ್ವರ ಮತಾಂತರ, ಮೇಲ್ಮನೆಗೆ ಎರಡೂ ಕಾಂಗ್ರೆಸಿಗರ ಆಯ್ಕೆ</strong></p><p>ಬೆಂಗಳೂರು, ಮೇ 9– ಅತ್ಯಧಿಕ ಮತ ಗಳಿಸಿದ ಸಂಸ್ಥಾ ಕಾಂಗ್ರೆಸ್ಸಿನ ಶ್ರೀಮತಿ ಸರೋಜಿನಿ ತಿಮ್ಮೇಗೌಡ ಹಾಗೂ ಉಳಿದ ಎಲ್ಲ ಆರುಮಂದಿ ಕಾಂಗ್ರೆಸ್ ಅಭ್ಯರ್ಥಿಗಳು ವಿಧಾನಸಭಾ ಕ್ಷೇತ್ರದಿಂದ ವಿಧಾನಪರಿಷತ್ತಿಗೆ ಆಯ್ಕೆಯಾಗಿದ್ದಾರೆ.</p><p>ಕಾಂಗ್ರೆಸ್ ಪಕ್ಷದ ನಾಲ್ಕು ಮತಗಳು ಹೊರಕ್ಕೆ ಹೋಗಿರುವುದೇ ಅಲ್ಲದೆ, ಪಕ್ಷದ ಅಭ್ಯರ್ಥಿಗಳ ನಡುವೆಯೂ ಸ್ವಲ್ಪ ಮಟ್ಟಿಗೆ ಮತಾಂತರ ನಡೆದಿದೆ.</p><p>ಸಂಸ್ಥಾ ಕಾಂಗ್ರೆಸ್ಸಿನ ಶ್ರೀಮತಿ ಸರೋಜಿನಿ ತಿಮ್ಮೇಗೌಡ 33, ಕಾಂಗ್ರೆಸ್ಸಿನ ಎಫ್.ಎಂ. ಖಾನ್ 30, ಕಲ್ಯಾಣರಾವ್ ಮರುಗುತ್ತಿ 28, ರಾಘವೇಂದ್ರರಾವ್ ಜಾಗೀರ್ದಾರ್ 27 ಹಾಗೂ ಎಸ್. ಶಿವಪ್ಪ 27 ಪ್ರಥಮ ಮತಗಳನ್ನು ಗಳಿಸಿ ಮೊದಲಿನ ಸುತ್ತಿನಲ್ಲೇ ಆಯ್ಕೆಯಾದರು. </p><p><strong>ಅಕ್ಕಿ–ಭತ್ತದ ಅಂತರಜಿಲ್ಲಾ ಸಾಗಾಣಿಕೆ ನಿರ್ಬಂಧ ರದ್ದಾಗದು</strong></p><p>ಬೆಂಗಳೂರು, ಮೇ 90 – ರಾಜ್ಯದ ಹಿತದೃಷ್ಟಿಯಿಂದ ಅಂತರ ಜಿಲ್ಲಾ ಅಕ್ಕಿ– ಭತ್ತ ಸಾಗಾಣಿಕೆ ಪ್ರತಿಬಂಧಿಸುವ ಪರಿಸ್ಥಿತಿ ಮುಂದುವರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.</p><p>ಶ್ರೀ ಬಿ.ವಿ. ಕಕ್ಕಿಲ್ಲಾಯ ಅವರು ಕಳುಹಿಸಿದ್ದ ಗಮನ ಸೆಳೆಯುವ ನೋಟಿಸಿಗೆ ಉತ್ತರಿಸಿದ ಆಹಾರ ಸಚಿವ ಶ್ರೀ ಕೆ.ಎಚ್. ಪಾಟೀಲರು ಅಂತರ್ ಜಿಲ್ಲಾ ಅಕ್ಕಿ– ಭತ್ತ ಸಾಗಾಣಿಕೆ ನಿರ್ಬಂಧ ತೆಗೆದುಹಾಕಬಹುದೆಂಬ ಪ್ರಶ್ನೆಯನ್ನು ಸರ್ವದೃಷ್ಟಿಯಿಂದ ಆಲೋಚಿಸಿ ಈ ತೀರ್ಮಾನಕ್ಕೆ ಬರಲಾಗಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>