<p><strong>ನಾಗಾ ದಂಗೆಕೋರರ ಅಧಿಕ ಹಿಂಸಾಚಾರದ ವಿರುದ್ಧ ಬಿರುಸು ಕ್ರಮ</strong></p><p>ನವದೆಹಲಿ, ಆ. 1– ನಾಗಾಲ್ಯಾಂಡ್ ಅಥವಾ ಮಿಜೋರಾಂಗೆ ಸ್ವತಂತ್ರ ಸ್ಥಾನಮಾನ ನೀಡುವ ವಿಚಾರವನ್ನು ಸರ್ಕಾರ ಯಾವುದೇ ಪರಿಸ್ಥಿತಿಯಲ್ಲೂ ಪರಿಶೀಲಿಸಬಹುದೆಂದು ಇಂದು ಲೋಕಸಭೆಯಲ್ಲಿ ಗೃಹ ಸಚಿವ ಉಮಾಶಂಕರ ದೀಕ್ಷಿತ್ ಖಂಡತುಂಡವಾಗಿ ತಿಳಿಸಿದರು.</p><p>ದಂಗೆಕೋರರ ಹಿಂಸಾಚಾರ ಈಚೆಗೆ ಹೆಚ್ಚುತ್ತಿದ್ದು, ಭದ್ರತಾ ಕಾರ್ಯಾಚರಣೆಗಳನ್ನೂ ಬಿರುಸುಗೊಳಿಸಲಾಗಿದೆಯೆಂದ ಅವರು, ಬಂಡಾಯಕೋರರ ಕದನಕೋರ ಧೋರಣೆಯನ್ನು ಇನ್ನು ಸಹಿಸಲಾಗದೆಂದರು.</p><p>ಜನರ ಅಪಹರಣ ನಡೆಯುತ್ತಿದೆ. ಅವರನ್ನು ದಂಗೆಕೋರರ ಗುಂಪಿಗೆ ಬಲತ್ಕಾರವಾಗಿ ಸೇರಿಸಿಕೊಳ್ಳಲಾಗುತ್ತಿದೆ. ಜನರ ಪ್ರಾಣ ಮತ್ತು ಆಸ್ತಿ ರಕ್ಷಿಸಲು ಸರ್ಕಾರ ಸಾಕಷ್ಟು ಕ್ರಮ ತೆಗೆದುಕೊಳ್ಳಬೇಕು ಎಂದರು.</p><p><strong>ಎಂ.ಎಸ್. ಸುಬ್ಬಲಕ್ಷ್ಮಿಗೆ ಮ್ಯಾಗ್ಸೆಸೆ ಪ್ರಶಸ್ತಿ</strong></p><p>ಮನಿಲಾ, ಆ. 1– ದಕ್ಷಿಣ ಭಾರತದ ಶಾಸ್ತ್ರೀಯ ಸಂಗೀತ ಮತ್ತು ಭಜನೆಗಳನ್ನು ಹಾಡಿ ಸಮಾಜ ಕಲ್ಯಾಣ ಕಾರ್ಯಗಳಿಗಾಗಿ ಹತ್ತು ಲಕ್ಷ ಅಮೆರಿಕನ್ ಡಾಲರ್ಗಳಿಗೂ ಹೆಚ್ಚು ನಿಧಿ ಕೂಡಿಸಿಕೊಟ್ಟಿರುವ ಭಾರತದ ಗಾನಕೋಗಿಲೆ ಎಂ.ಎಸ್. ಸುಬ್ಬಲಕ್ಷ್ಮಿ ಅವರಿಗೆ 1974ನೆಯ ಸಾಲಿನ ರೇಮನ್ ಮ್ಯಾಗ್ಸೆಸೆ ಪ್ರಶಸ್ತಿ ಲಭಿಸಿದೆ.</p><p>ಸಮಾಜ ಸೇವೆಗಾಗಿ ನೀಡುವ ಈ ಪ್ರಶಸ್ತಿಯನ್ನು ಈ ಬಾರಿ ಕರ್ನಾಟಕ ಸಂಗೀತ ವಿದುಷಿ ಶ್ರೀಮತಿ ಸುಬ್ಬಲಕ್ಷ್ಮಿ ಅವರಿಗೆ ನೀಡಲು ಇಂದು ಇಲ್ಲಿ ಸಮಾವೇಶಗೊಂಡಿದ್ದ ಪ್ರಶಸ್ತಿಯ ಧರ್ಮದರ್ಶಿಗಳ ಮಂಡಲಿ ಸಭೆ ನಿರ್ಧರಿಸಿತು.</p><p>ಶ್ರೀಮತಿ ಸುಬ್ಬಲಕ್ಷ್ಮಿಯವರು ಈ ಪ್ರಶಸ್ತಿ ಪಡೆದಿರುವ ಭಾರತೀಯರದಲ್ಲಿ ನಾಲ್ಕನೆಯವರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಾಗಾ ದಂಗೆಕೋರರ ಅಧಿಕ ಹಿಂಸಾಚಾರದ ವಿರುದ್ಧ ಬಿರುಸು ಕ್ರಮ</strong></p><p>ನವದೆಹಲಿ, ಆ. 1– ನಾಗಾಲ್ಯಾಂಡ್ ಅಥವಾ ಮಿಜೋರಾಂಗೆ ಸ್ವತಂತ್ರ ಸ್ಥಾನಮಾನ ನೀಡುವ ವಿಚಾರವನ್ನು ಸರ್ಕಾರ ಯಾವುದೇ ಪರಿಸ್ಥಿತಿಯಲ್ಲೂ ಪರಿಶೀಲಿಸಬಹುದೆಂದು ಇಂದು ಲೋಕಸಭೆಯಲ್ಲಿ ಗೃಹ ಸಚಿವ ಉಮಾಶಂಕರ ದೀಕ್ಷಿತ್ ಖಂಡತುಂಡವಾಗಿ ತಿಳಿಸಿದರು.</p><p>ದಂಗೆಕೋರರ ಹಿಂಸಾಚಾರ ಈಚೆಗೆ ಹೆಚ್ಚುತ್ತಿದ್ದು, ಭದ್ರತಾ ಕಾರ್ಯಾಚರಣೆಗಳನ್ನೂ ಬಿರುಸುಗೊಳಿಸಲಾಗಿದೆಯೆಂದ ಅವರು, ಬಂಡಾಯಕೋರರ ಕದನಕೋರ ಧೋರಣೆಯನ್ನು ಇನ್ನು ಸಹಿಸಲಾಗದೆಂದರು.</p><p>ಜನರ ಅಪಹರಣ ನಡೆಯುತ್ತಿದೆ. ಅವರನ್ನು ದಂಗೆಕೋರರ ಗುಂಪಿಗೆ ಬಲತ್ಕಾರವಾಗಿ ಸೇರಿಸಿಕೊಳ್ಳಲಾಗುತ್ತಿದೆ. ಜನರ ಪ್ರಾಣ ಮತ್ತು ಆಸ್ತಿ ರಕ್ಷಿಸಲು ಸರ್ಕಾರ ಸಾಕಷ್ಟು ಕ್ರಮ ತೆಗೆದುಕೊಳ್ಳಬೇಕು ಎಂದರು.</p><p><strong>ಎಂ.ಎಸ್. ಸುಬ್ಬಲಕ್ಷ್ಮಿಗೆ ಮ್ಯಾಗ್ಸೆಸೆ ಪ್ರಶಸ್ತಿ</strong></p><p>ಮನಿಲಾ, ಆ. 1– ದಕ್ಷಿಣ ಭಾರತದ ಶಾಸ್ತ್ರೀಯ ಸಂಗೀತ ಮತ್ತು ಭಜನೆಗಳನ್ನು ಹಾಡಿ ಸಮಾಜ ಕಲ್ಯಾಣ ಕಾರ್ಯಗಳಿಗಾಗಿ ಹತ್ತು ಲಕ್ಷ ಅಮೆರಿಕನ್ ಡಾಲರ್ಗಳಿಗೂ ಹೆಚ್ಚು ನಿಧಿ ಕೂಡಿಸಿಕೊಟ್ಟಿರುವ ಭಾರತದ ಗಾನಕೋಗಿಲೆ ಎಂ.ಎಸ್. ಸುಬ್ಬಲಕ್ಷ್ಮಿ ಅವರಿಗೆ 1974ನೆಯ ಸಾಲಿನ ರೇಮನ್ ಮ್ಯಾಗ್ಸೆಸೆ ಪ್ರಶಸ್ತಿ ಲಭಿಸಿದೆ.</p><p>ಸಮಾಜ ಸೇವೆಗಾಗಿ ನೀಡುವ ಈ ಪ್ರಶಸ್ತಿಯನ್ನು ಈ ಬಾರಿ ಕರ್ನಾಟಕ ಸಂಗೀತ ವಿದುಷಿ ಶ್ರೀಮತಿ ಸುಬ್ಬಲಕ್ಷ್ಮಿ ಅವರಿಗೆ ನೀಡಲು ಇಂದು ಇಲ್ಲಿ ಸಮಾವೇಶಗೊಂಡಿದ್ದ ಪ್ರಶಸ್ತಿಯ ಧರ್ಮದರ್ಶಿಗಳ ಮಂಡಲಿ ಸಭೆ ನಿರ್ಧರಿಸಿತು.</p><p>ಶ್ರೀಮತಿ ಸುಬ್ಬಲಕ್ಷ್ಮಿಯವರು ಈ ಪ್ರಶಸ್ತಿ ಪಡೆದಿರುವ ಭಾರತೀಯರದಲ್ಲಿ ನಾಲ್ಕನೆಯವರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>