<p><strong>ಗೃಹ ಶಾಖೆಗೆ ‘ಗುಪ್ತ ಸೂಚನೆ’</strong></p><p>ಬೆಂಗಳೂರು, ಮೇ 15– ‘ಪೊಲೀಸ್ ಠಾಣೆಯಲ್ಲಿನ ಹೀನ ಕೃತ್ಯಗಳಿಗೆ ಉನ್ನತ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕು’.</p><p>ರಾಜ್ಯದ ಗೃಹ ಶಾಖೆಗೆ ಈಚೆಗೆ ಮುಖ್ಯಮಂತ್ರಿ ಅರಸು ಕಳಿಸಿರುವ ‘ಗುಪ್ತ ಸೂಚನೆ’ ಇದು.</p><p>ಮಾರ್ಗರೆಟ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಪೇದೆಗಳಿಗೆ ವಿಧಿಸಿದ ಶಿಕ್ಷೆಯನ್ನು ಪ್ರಸ್ತಾಪಿಸಿ ‘ಇದು ತೀರಾ ಸಾಮಾನ್ಯ ಶಿಕ್ಷೆ’ ಎಂದು ಅಭಿಪ್ರಾಯಪಟ್ಟಿರುವ ಮುಖ್ಯಮಂತ್ರಿಯವರು, ‘ಸಂಬಂಧಿಸಿದ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ನನ್ನು ತತ್ಕ್ಷಣ ಸಸ್ಪೆಂಡ್ ಮಾಡಬೇಕಾಗಿತ್ತು’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.</p><p>‘ಉನ್ನತ ಅಧಿಕಾರಿಗಳು ತಮ್ಮ ಕೈಕೆಳಗಿನ ಅಧಿಕಾರಿಗಳ ಮೇಲೆ ಸಾಕಷ್ಟು ನಿಗಾ ಇಟ್ಟಂತೆ ಕಂಡುಬರುವುದಿಲ್ಲ. ಉನ್ನತ ಅಧಿಕಾರಿಗಳು ತಮ್ಮ ‘ದುಷ್ಕೃತ್ಯ’ಗಳಿಗೆ ಪೊಲೀಸ್ ಪೇದೆಗಳನ್ನು ಉಪಯೋಗಿಸುತ್ತಾರೆ’ ಎಂದೂ ಅವರು ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.</p><p><strong>ತಾಯಿಗೆ ಮಾರ್ಗರೆಟ್ ಬರೆದ ಪತ್ರ</strong></p><p>ಬೆಂಗಳೂರು, ಮೇ 15– ‘ನಾನು ಸಾಯಲು ಸಿದ್ಧ. ಆದರೆ ಪೊಲೀಸರು ನೆಮ್ಮದಿಯಿಂದ ಇರಲಾರರು ಎಂದು ಭಾವಿಸಿರುವೆ’.</p><p>–ಹೀಗೆ, 14 ವರ್ಷ ವಯಸ್ಸಿನ ಮುಗ್ಧ ಬಾಲಕಿ ಮಾರ್ಗರೆಟ್, ಅಲಸೂರಿನ ಕೆರೆಗೆ ಧುಮುಕಿ ಸಾಯುವುದಕ್ಕಿಂತ ಮುಂಚೆ ತನ್ನ ತಾಯಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾಳೆ.</p><p>ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯೊಬ್ಬ ತನಗೆ ಲೈಂಗಿಕ ಕಿರುಕುಳ ನೀಡಿದ್ದಾಗಿ ಪತ್ರದಲ್ಲಿ ವಿವರಿಸಿದ್ದಾಳೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗೃಹ ಶಾಖೆಗೆ ‘ಗುಪ್ತ ಸೂಚನೆ’</strong></p><p>ಬೆಂಗಳೂರು, ಮೇ 15– ‘ಪೊಲೀಸ್ ಠಾಣೆಯಲ್ಲಿನ ಹೀನ ಕೃತ್ಯಗಳಿಗೆ ಉನ್ನತ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕು’.</p><p>ರಾಜ್ಯದ ಗೃಹ ಶಾಖೆಗೆ ಈಚೆಗೆ ಮುಖ್ಯಮಂತ್ರಿ ಅರಸು ಕಳಿಸಿರುವ ‘ಗುಪ್ತ ಸೂಚನೆ’ ಇದು.</p><p>ಮಾರ್ಗರೆಟ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಪೇದೆಗಳಿಗೆ ವಿಧಿಸಿದ ಶಿಕ್ಷೆಯನ್ನು ಪ್ರಸ್ತಾಪಿಸಿ ‘ಇದು ತೀರಾ ಸಾಮಾನ್ಯ ಶಿಕ್ಷೆ’ ಎಂದು ಅಭಿಪ್ರಾಯಪಟ್ಟಿರುವ ಮುಖ್ಯಮಂತ್ರಿಯವರು, ‘ಸಂಬಂಧಿಸಿದ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ನನ್ನು ತತ್ಕ್ಷಣ ಸಸ್ಪೆಂಡ್ ಮಾಡಬೇಕಾಗಿತ್ತು’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.</p><p>‘ಉನ್ನತ ಅಧಿಕಾರಿಗಳು ತಮ್ಮ ಕೈಕೆಳಗಿನ ಅಧಿಕಾರಿಗಳ ಮೇಲೆ ಸಾಕಷ್ಟು ನಿಗಾ ಇಟ್ಟಂತೆ ಕಂಡುಬರುವುದಿಲ್ಲ. ಉನ್ನತ ಅಧಿಕಾರಿಗಳು ತಮ್ಮ ‘ದುಷ್ಕೃತ್ಯ’ಗಳಿಗೆ ಪೊಲೀಸ್ ಪೇದೆಗಳನ್ನು ಉಪಯೋಗಿಸುತ್ತಾರೆ’ ಎಂದೂ ಅವರು ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.</p><p><strong>ತಾಯಿಗೆ ಮಾರ್ಗರೆಟ್ ಬರೆದ ಪತ್ರ</strong></p><p>ಬೆಂಗಳೂರು, ಮೇ 15– ‘ನಾನು ಸಾಯಲು ಸಿದ್ಧ. ಆದರೆ ಪೊಲೀಸರು ನೆಮ್ಮದಿಯಿಂದ ಇರಲಾರರು ಎಂದು ಭಾವಿಸಿರುವೆ’.</p><p>–ಹೀಗೆ, 14 ವರ್ಷ ವಯಸ್ಸಿನ ಮುಗ್ಧ ಬಾಲಕಿ ಮಾರ್ಗರೆಟ್, ಅಲಸೂರಿನ ಕೆರೆಗೆ ಧುಮುಕಿ ಸಾಯುವುದಕ್ಕಿಂತ ಮುಂಚೆ ತನ್ನ ತಾಯಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾಳೆ.</p><p>ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯೊಬ್ಬ ತನಗೆ ಲೈಂಗಿಕ ಕಿರುಕುಳ ನೀಡಿದ್ದಾಗಿ ಪತ್ರದಲ್ಲಿ ವಿವರಿಸಿದ್ದಾಳೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>