<p><strong>ರೈಲ್ವೆ ಮುಷ್ಕರ: ಎರಡೂ ಕಡೆ ಬಿಗಿ ಪಟ್ಟು</strong></p><p>ನವದೆಹಲಿ, ಮೇ 7– ಬಂಧಿತ ರೈಲ್ವೆ ಕಾರ್ಮಿಕ ನಾಯಕರನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಒಂದುಕಡೆ ವಿರೋಧ ಪಕ್ಷಗಳ ಸದಸ್ಯರು ಒತ್ತಾಯ ಮಾಡುತ್ತಿದ್ದರೆ, ಇನ್ನೊಂದು ಕಡೆ ಮುಷ್ಕರ ನೋಟಿಸು ವಾಪಸ್ ತೆಗೆದುಕೊಳ್ಳುವವರೆಗೆ ಬೇಡಿಕೆಗಳನ್ನು ಪರಿಶೀಲಿಸಲು ಸರ್ಕಾರ ನಿರಾಕರಿಸುತ್ತಿದ್ದು, ಸಂಸತ್ತಿನ ಉಭಯ ಸದನಗಳಲ್ಲೂ ಇಂದು ಕೋಲಾಹಲ ಆವರಿಸಿಕೊಂಡಿತ್ತು. </p><p>ಲೋಕಸಭೆಯಲ್ಲಿ ಸೋಷಲಿಸ್ಟ್ ಮತ್ತು ಕಮ್ಯುನಿಸ್ಟ್ ಸದಸ್ಯರು ಹಾಗೂ ಕಾಂಗ್ರೆಸ್ ಸದಸ್ಯರು ಪದೇ ಪದೇ ಚಕಮಕಿಯಲ್ಲಿ ತೊಡಗಿದ್ದರಿಂದ ಇಡೀ ಪ್ರಶ್ನೋತ್ತರ ಕಾಲ ರೈಲ್ವೆ ಕೆಲಸಗಾರರ ಮುಷ್ಕರದ ವಿಷಯದಲ್ಲಿ ಮುಳುಗಿ ಹೋಯಿತು. </p><p><strong>‘ನಾಕುತಂತಿ’ ಮಿಡಿದ ವರಕವಿ ಬೇಂದ್ರೆಗೆ ವಿದ್ಯಾರ್ಥಿ ನಮನ</strong></p><p>ಬೆಂಗಳೂರು, ಮೇ 7– ಜನದ ಭಾಷೆಯನ್ನು ಕಾವ್ಯ ಭಾಷೆಯನ್ನಾಗಿ ಮಾಡಿದ ‘ನಾಕುತಂತಿ’ ಕರ್ತೃ ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ. ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರನ್ನು ಬೆಂಗಳೂರು ವಿಶ್ವವಿದ್ಯಾನಿಯಲ ವಿದ್ಯಾರ್ಥಿ ಮಂಡಲಿ ಇಂದು ಇಲ್ಲಿ ಸನ್ಮಾನಿಸಿ, ‘ತನ್ನನ್ನು ತಾನು ಗೌರವಿಸಿಕೊಂಡಿತು’</p><p>ಕವಿ, ಆಚಾರ್ಯರು ವಿದ್ಯಾರ್ಥಿಗಳ ಈ ಕಾರ್ಯವನ್ನು ಶ್ಲಾಘಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರೈಲ್ವೆ ಮುಷ್ಕರ: ಎರಡೂ ಕಡೆ ಬಿಗಿ ಪಟ್ಟು</strong></p><p>ನವದೆಹಲಿ, ಮೇ 7– ಬಂಧಿತ ರೈಲ್ವೆ ಕಾರ್ಮಿಕ ನಾಯಕರನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಒಂದುಕಡೆ ವಿರೋಧ ಪಕ್ಷಗಳ ಸದಸ್ಯರು ಒತ್ತಾಯ ಮಾಡುತ್ತಿದ್ದರೆ, ಇನ್ನೊಂದು ಕಡೆ ಮುಷ್ಕರ ನೋಟಿಸು ವಾಪಸ್ ತೆಗೆದುಕೊಳ್ಳುವವರೆಗೆ ಬೇಡಿಕೆಗಳನ್ನು ಪರಿಶೀಲಿಸಲು ಸರ್ಕಾರ ನಿರಾಕರಿಸುತ್ತಿದ್ದು, ಸಂಸತ್ತಿನ ಉಭಯ ಸದನಗಳಲ್ಲೂ ಇಂದು ಕೋಲಾಹಲ ಆವರಿಸಿಕೊಂಡಿತ್ತು. </p><p>ಲೋಕಸಭೆಯಲ್ಲಿ ಸೋಷಲಿಸ್ಟ್ ಮತ್ತು ಕಮ್ಯುನಿಸ್ಟ್ ಸದಸ್ಯರು ಹಾಗೂ ಕಾಂಗ್ರೆಸ್ ಸದಸ್ಯರು ಪದೇ ಪದೇ ಚಕಮಕಿಯಲ್ಲಿ ತೊಡಗಿದ್ದರಿಂದ ಇಡೀ ಪ್ರಶ್ನೋತ್ತರ ಕಾಲ ರೈಲ್ವೆ ಕೆಲಸಗಾರರ ಮುಷ್ಕರದ ವಿಷಯದಲ್ಲಿ ಮುಳುಗಿ ಹೋಯಿತು. </p><p><strong>‘ನಾಕುತಂತಿ’ ಮಿಡಿದ ವರಕವಿ ಬೇಂದ್ರೆಗೆ ವಿದ್ಯಾರ್ಥಿ ನಮನ</strong></p><p>ಬೆಂಗಳೂರು, ಮೇ 7– ಜನದ ಭಾಷೆಯನ್ನು ಕಾವ್ಯ ಭಾಷೆಯನ್ನಾಗಿ ಮಾಡಿದ ‘ನಾಕುತಂತಿ’ ಕರ್ತೃ ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ. ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರನ್ನು ಬೆಂಗಳೂರು ವಿಶ್ವವಿದ್ಯಾನಿಯಲ ವಿದ್ಯಾರ್ಥಿ ಮಂಡಲಿ ಇಂದು ಇಲ್ಲಿ ಸನ್ಮಾನಿಸಿ, ‘ತನ್ನನ್ನು ತಾನು ಗೌರವಿಸಿಕೊಂಡಿತು’</p><p>ಕವಿ, ಆಚಾರ್ಯರು ವಿದ್ಯಾರ್ಥಿಗಳ ಈ ಕಾರ್ಯವನ್ನು ಶ್ಲಾಘಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>